ಉತ್ತರ ಪ್ರದೇಶದಲ್ಲಿ ಹಿಂದೂಗಳನ್ನು ಮತಾಂತರ ಮಾಡುತ್ತಿದ್ದ ಅಬ್ದುಲ್ ಮಜೀದ್ ಮತ್ತು ಆತನ ಮೂವರು ಸಹಚರರ ಬಂಧನ

  • ಅಬ್ದುಲ್ ಮಜೀದ್ ಒಬ್ಬ ಮದರಸಾ ಮುಖ್ಯಸ್ಥ

  • ಹಿಂದುಗಳನ್ನು ಮತಾಂತರಿಸುತ್ತಿದ್ದ ಚಾಂಗೂರ ಬಾಬಾ ಮೇಲೆ ಕ್ರಮ ಕೈಗೊಂಡಾಗ ಬೆಳಕಿಗೆ ಬಂದಿತ್ತು

ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಬರೇಲಿಯಲ್ಲಿ ಹಿಂದೂ ಯುವಕರನ್ನು ಮತಾಂತರ ಮಾಡುತ್ತಿದ್ದ ಅಬ್ದುಲ್ ಮಜೀದ್‌ನ ಗ್ಯಾಂಗ್‌ನ ಚಟುವಟಿಕೆಗಳು ಬೆಳಕಿಗೆ ಬಂದಿವೆ. ಅಬ್ದುಲ್ ಮಜೀದ್ ಒಬ್ಬ ಮದರಸಾ ಮುಖ್ಯಸ್ಥನಾಗಿದ್ದಾನೆ. ಈ ಪ್ರಕರಣದಲ್ಲಿ ಪೊಲೀಸರು ಮಜೀದ್ ಮತ್ತು ಆತನ ಮೂವರು ಸಹಚರರನ್ನು ಬಂಧಿಸಿದ್ದಾರೆ. ಈ ಗ್ಯಾಂಗ್ ಬಗ್ಗೆ ಪೊಲೀಸರು ಅನೇಕ ವಿಷಯಗಳನ್ನು ಬಹಿರಂಗಪಡಿಸಿದ್ದಾರೆ. ಹಿಂದೂ ಯುವಕರನ್ನು ಮತಾಂತರ ಮಾಡಲು ಈ ಗ್ಯಾಂಗ್ ಆರ್ಥಿಕ ಸಹಾಯ ಮತ್ತು ಸುಂದರ ಮುಸ್ಲಿಂ ಯುವತಿಯರೊಂದಿಗೆ ಮದುವೆ ಮಾಡಿಸುವುದಾಗಿ ಆಮಿಷ ಒಡ್ಡುತ್ತಿತ್ತು. ಆರಂಭದಲ್ಲಿ ಆರ್ಥಿಕವಾಗಿ ಸಂಕಷ್ಟದಲ್ಲಿದ್ದ ಹಿಂದೂಗಳಿಗೆ ಸಹಾಯ ಮಾಡಲಾಗುತ್ತಿತ್ತು. ನಂತರ ಅವರನ್ನು ಮತಾಂತರ ಮಾಡಲಾಗುತ್ತಿತ್ತು. ಮುಂದೆ, ಅವರ ಕುಟುಂಬದವರನ್ನೂ ಮತಾಂತರ ಮಾಡಲಾಗುತ್ತಿತ್ತು. ಕೆಲವು ದಿನಗಳ ಹಿಂದೆ ಉತ್ತರ ಪ್ರದೇಶದಲ್ಲಿ ಹಿಂದೂಗಳನ್ನು ಮತಾಂತರ ಮಾಡುತ್ತಿದ್ದ ಚಾಂಗುರ್ ಬಾಬಾ ಎಂಬಾತನ ಗ್ಯಾಂಗ್‌ನ ಚಟುವಟಿಕೆಗಳೂ ಬೆಳಕಿಗೆ ಬಂದಿದ್ದವು.

೧. ಈ ಗ್ಯಾಂಗ್ ಹಿಂದೂಗಳನ್ನು ಹೇಗೆ ವಂಚಿಸುತ್ತಿತ್ತು ? ಎಂಬುದು ಬಹಿರಂಗವಾಗಿದೆ. ಸುಭಾಷ ನಗರದ ಬ್ರಿಜ್‌ಪಾಲ್ ಎಂಬ ಶಿಕ್ಷಕರನ್ನು ಈ ಗ್ಯಾಂಗ್ ತನ್ನ ಬಲೆಗೆ ಕೆಡವಿಕೊಂಡಿತ್ತು. 2014ರಲ್ಲಿ ಅಪಘಾತದಿಂದಾಗಿ ಅವರ ಕುಟುಂಬದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿತ್ತು. ಆಗ, ಸಲ್ಮಾನ್ ಮತ್ತು ಆರಿಫ್ ಇಬ್ಬರೂ ಅವರಿಗೆ ಆರ್ಥಿಕ ಸಹಾಯ ಮಾಡಿದರು. ನಂತರ, ಆಮಿಷವೊಡ್ಡಿ ಅವರನ್ನು ಮತ್ತು ಅವರ ಕುಟುಂಬವನ್ನು ಮತಾಂತರ ಮಾಡಿದರು.

೨. ಗ್ಯಾಂಗ್ ಸದಸ್ಯರು ಬಳಸುತ್ತಿದ್ದ ಮೊಬೈಲ್‌ಗಳಲ್ಲಿ ಮುಸ್ಲಿಂ ಯುವತಿಯರ ಫೋಟೋಗಳು ಸಿಕ್ಕಿವೆ. ಈ ಫೋಟೋಗಳನ್ನು ಹಿಂದೂಗಳಿಗೆ ಮದುವೆಯ ಆಮಿಷವೊಡ್ಡಲು ಬಳಸಲಾಗುತ್ತಿತ್ತು. ಹಿಂದೂಗಳನ್ನು ಮತಾಂತರ ಮಾಡಲು ಮಜೀದ್ ವಿವಿಧ ತಂತ್ರಗಳನ್ನು ಬಳಸುತ್ತಿದ್ದನು. ಮತಾಂತರಗೊಂಡ ಹಿಂದೂಗಳ ಸುನ್ನತಿ ಮಾಡಿಸುತ್ತಿದ್ದನು. ಮುಖ್ಯವಾಗಿ ಅಂಗವಿಕಲ ಮತ್ತು ಹಿಂದುಳಿದ ವರ್ಗದ ಯುವಕರನ್ನು ಗುರಿಯಾಗಿಸುತ್ತಿದ್ದನು. ಆತನ ಸಂಪರ್ಕ ದೇಶದ 27ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಇತ್ತು. ಆತನ ಬ್ಯಾಂಕ್ ಖಾತೆಯಲ್ಲಿ 13 ಲಕ್ಷ ರೂಪಾಯಿ, ಮತ್ತು 21 ವಿವಿಧ ಖಾತೆಗಳ ವಿವರಗಳು ಸಿಕ್ಕಿವೆ.

೩. ಈ ಗ್ಯಾಂಗ್ ಅನೇಕ ವಾಟ್ಸಾಪ್ ಗುಂಪುಗಳನ್ನು ಮಾಡಿಕೊಂಡಿತ್ತು. ಅವುಗಳಲ್ಲಿ ಭಯೋತ್ಪಾದಕರ ಸ್ಫೂರ್ತಿ ಜಿಹಾದಿ ಝಾಕಿರ್ ನಾಯ್ಕ್‌ನ ವೀಡಿಯೋಗಳು ಮತ್ತು ಪಾಕಿಸ್ತಾನದ ಧಾರ್ಮಿಕ ಉಪದೇಶಕರ ಆಡಿಯೋಗಳನ್ನು ಪ್ರಸಾರ ಮಾಡಲಾಗುತ್ತಿತ್ತು. ಸಲ್ಮಾನ್ ಧಾರ್ಮಿಕ ಗ್ರಂಥಗಳು ಮತ್ತು ಪುಸ್ತಕಗಳನ್ನು ಒದಗಿಸುತ್ತಿದ್ದನು, ಆರಿಫ್ ಅವನಿಗೆ ಸಹಾಯ ಮಾಡುತ್ತಿದ್ದನು, ಮತ್ತು ಫಹೀಮ್ ಜನರ ಮಾಹಿತಿಯನ್ನು ಸಂಗ್ರಹಿಸಿ ಗ್ಯಾಂಗ್‌ಗೆ ತಲುಪಿಸುತ್ತಿದ್ದನು. ಈ ಗ್ಯಾಂಗ್‌ಗೆ ವಿದೇಶಿ ಹಣಕಾಸು ನೆರವು ಸಿಗುತ್ತಿದೆ ಎಂದು ಪೊಲೀಸರು ಶಂಕಿಸಿದ್ದಾರೆ ಮತ್ತು ಉಳಿದ ಸದಸ್ಯರ ಹುಡುಕಾಟ ಮುಂದುವರಿದಿದೆ.

ಸಂಪಾದಕೀಯ ನಿಲುವು

  • ಭಾರತದಲ್ಲಿ ಹೆಚ್ಚಿನ ಮದರಸಾಗಳಲ್ಲಿ ಹಿಂದೂ ವಿರೋಧಿ ಮತ್ತು ರಾಷ್ಟ್ರ ವಿರೋಧಿ ಚಟುವಟಿಕೆಗಳು ನಡೆಯುತ್ತಿವೆ. ಹಾಗಿದ್ದರೂ, ಈ ಮದರಸಾಗಳಿಗೆ ಏಕೆ ಬೀಗ ಹಾಕುತ್ತಿಲ್ಲ?
  • ಹಿಂದೂಗಳನ್ನು ಮತಾಂತರ ಮಾಡುವ ಇಂತಹವರಿಗೆ ಪಾಠ ಕಲಿಸಲು ಉತ್ತರ ಪ್ರದೇಶ ಸರಕಾರ ಕ್ರಮ ಕೈಗೊಳ್ಳಬೇಕು. ಹೀಗೆ ಮಾಡಿದರೆ ಮಾತ್ರ, ಇತರ ಮತಾಂಧರು ಇಂತಹ ದುಸ್ಸಾಹಸಕ್ಕೆ ಮುಂದಾಗುವುದಿಲ್ಲ.