ನನ್ನ ‘ಅಬ್ದುಲ್’ ಕೂಡ ಕೆಟ್ಟವನು : ಲವ್ ಜಿಹಾದ್ ಬಲೆಗೆ ಸಿಕ್ಕ ಸಂತ್ರಸ್ತೆಯಿಂದ ತಂದೆಗೆ ಮಾಹಿತಿ !

  • ಕುಶಿನಗರ(ಉತ್ತರಪ್ರದೇಶ)ದಲ್ಲಿನ ಘಟನೆ

  • ಪ್ರೀತಿಯ ಬಲೆಗೆ ಸಿಲುಕಿಸಿ ಚೆನ್ನೈಗೆ ಕರೆದೊಯ್ಯಲಾಗಿತ್ತು

  • ಇಸ್ಲಾಂಗೆ ಮತಾಂತರವಾಗುವಂತೆ ಒತ್ತಡ ಹಾಕಿ ಅಮಾನವೀಯವಾಗಿ ಥಳಿಸಿದ

ಸಾಂದರ್ಭಿಕ ಚಿತ್ರ

ಕುಶಿನಗರ (ಉತ್ತರ ಪ್ರದೇಶ) – ಇಲ್ಲಿನ ಓರ್ವ ಮುಸ್ಲಿಂ ಯುವಕ ಎರಡು ತಿಂಗಳ ಹಿಂದೆ ಒಬ್ಬ ಹಿಂದೂ ಹುಡುಗಿಯನ್ನು ಪ್ರೀತಿಯ ಬಲೆಗೆ ಸಿಲುಕಿಸಿ ಚೆನ್ನೈಗೆ ಕರೆದೊಯ್ದು ಬಲವಂತವಾಗಿ ಮತಾಂತರಿಸಿ, ಆಕೆಯನ್ನು ಮುಸ್ಲಿಂ ಆಗಿ ಪರಿವರ್ತಿಸಿದ್ದ. ನಂತರ ಆಕೆಯನ್ನು ಮದುವೆಯಾಗಿ, ಅಮಾನವೀಯವಾಗಿ ಥಳಿಸಿ ಕಿರುಕುಳ ನೀಡುತ್ತಿದ್ದ. ಇದರಿಂದ ಬೇಸತ್ತು ಆಕೆ ತನ್ನ ತಂದೆಗೆ ಕರೆ ಮಾಡಿ, ನನ್ನ ‘ಅಬ್ದುಲ್’ ಕೂಡ ಕೆಟ್ಟವನು ಎಂದು ತಿಳಿಸಿದ್ದಾಳೆ.

೧. ಎರಡು ತಿಂಗಳ ಹಿಂದೆ, ಹುಡುಗಿಯ ತಂದೆ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದರು; ಆದರೆ, ಹುಡುಗಿ ವಯಸ್ಕಳಾಗಿದ್ದ ಕಾರಣ ಮತ್ತು ಆ ಯುವಕನನ್ನು ತನ್ನ ಪ್ರೇಮಿಯೆಂದು ಹೇಳಿ ಆತನ ಪರವಾಗಿ ಹೇಳಿಕೆ ನೀಡಿದ್ದ ಕಾರಣ, ದೂರು ದಾಖಲಾದರೂ ಪ್ರಯೋಜನವಾಗಲಿಲ್ಲ. ಆ ಸಮಯದಲ್ಲಿ, ಹುಡುಗಿ ತನ್ನನ್ನು ವಿರೋಧಿಸಿದ ಎಲ್ಲರಿಗೂ, “ನೀವು ಯೋಚಿಸುವಂತೆ ನನ್ನ ‘ಅಬ್ದುಲ್’ ಹಾಗಲ್ಲ” ಎಂದು ಹೇಳಿದ್ದಳು.

೨. ಆದರೆ, ಈಗ ಹುಡುಗಿ ತನ್ನ ತಂದೆಗೆ ವಿಡಿಯೋ ಕಾಲ್ ಮಾಡಿ, ರಕ್ತಸಿಕ್ತವಾದ ತನ್ನ ಫೋಟೋಗಳನ್ನು ತೋರಿಸಿದ್ದಾಳೆ. ನನ್ನ ‘ಅಬ್ದುಲ್’ ನನ್ನನ್ನು ಸಲ್ಮಾ (ಹೆಸರು ಬದಲಿಸಲಾಗಿದೆ) ಆಗಿ ಮತಾಂತರ ಮಾಡಿದ್ದಾನೆ ಮತ್ತು ಈಗ ಚೆನ್ನೈನಲ್ಲಿ ಮದುವೆಯಾದ ನಂತರ ನನಗೆ ಕಿರುಕುಳ ನೀಡುತ್ತಿದ್ದಾನೆ ಎಂದು ತಿಳಿಸಿದ್ದಾಳೆ.

೩. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ತಂಡವೊಂದು ಚೆನ್ನೈಗೆ ತೆರಳಿದೆ. ಯುವಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಮತ್ತು ತನಿಖೆ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಥಳೀಯ ಪೊಲೀಸ್ ಇನ್ಸ್‌ಪೆಕ್ಟರ್ ರಾಮ್ ಸಹಾಯ್ ಚೌಹಾಣ್ ತಿಳಿಸಿದ್ದಾರೆ.

೪. ಈ ಪ್ರಕರಣ ಚಂಗೂರ್ ಬಾಬಾ ಗ್ಯಾಂಗ್‌ನೊಂದಿಗೆ ಸಂಬಂಧ ಹೊಂದಿದೆ ಎಂದು ಸ್ಥಳೀಯ ಶಾಸಕ ಮೋಹನ್ ವರ್ಮಾ ಹೇಳಿದ್ದಾರೆ.

ಸಂಪಾದಕೀಯ ನಿಲುವು

ಇಂತಹ ಘಟನೆಗಳ ಬಗ್ಗೆ ಜಾತ್ಯತೀತವಾದಿಗಳು, ಕಾಂಗ್ರೆಸ್ ಮತ್ತು ಎಡಪಂಥೀಯರು ಎಂದಿಗೂ ಚಕಾರ ಎತ್ತುವುದಿಲ್ಲ ಎಂಬುದನ್ನು ಗಮನಿಸಿ!