ನಮಗೆ ರೋಹಿಂಗ್ಯಾ ನಿರಾಶ್ರಿತರನ್ನು ಪೋಷಿಸುವುದು ಕಷ್ಟವಾಗುತ್ತಿದೆ! – Rohingya Refugees Bangladesh Seeks Support

ಜಗತ್ತಿನ ನೆರವು ಕೋರಿದ ಬಾಂಗ್ಲಾದೇಶದ ಮಧ್ಯಂತರ ಸರಕಾರದ ಮುಖ್ಯ ಸಲಹೆಗಾರ ಮೊಹಮ್ಮದ್ ಯುನೂಸ್ !

ಢಾಕಾ (ಬಾಂಗ್ಲಾದೇಶ) – ನಿರಾಶ್ರಿತ ರೋಹಿಂಗ್ಯಾಗಳಿಂದಾಗಿ ಬಾಂಗ್ಲಾದೇಶದ ಆರ್ಥಿಕತೆ ಮತ್ತು ಪರಿಸರದ ಮೇಲೆ ಒತ್ತಡ ಹೆಚ್ಚಾಗಿದೆ. ದೇಶದಲ್ಲಿ 13 ಲಕ್ಷಕ್ಕೂ ಹೆಚ್ಚು ರೋಹಿಂಗ್ಯಾಗಳು ಇದ್ದಾರೆ. ಅವರಿಗೆ ಆಹಾರ ಒದಗಿಸುವುದು ಕಷ್ಟವಾಗುತ್ತಿದೆ. ಇದು ಬಾಂಗ್ಲಾದೇಶ ಸೇರಿದಂತೆ ಇಡೀ ಜಗತ್ತಿಗೆ ದೊಡ್ಡ ಸವಾಲಾಗಿದೆ. ಜಗತ್ತು ಈ ವಿಷಯದಲ್ಲಿ ಒಟ್ಟಾಗಿ ಸೇರಿ ರೋಹಿಂಗ್ಯಾ ಮುಸ್ಲಿಮರು ತಮ್ಮ ದೇಶಕ್ಕೆ ಮರಳಲು ಸಹಾಯ ಮಾಡಬೇಕು ಎಂದು ಬಾಂಗ್ಲಾದೇಶದ ಮಧ್ಯಂತರ ಸರಕಾರದ ಮುಖ್ಯ ಸಲಹೆಗಾರ ಮೊಹಮ್ಮದ್ ಯುನೂಸ್  ಅವರು ಮನವಿ ಮಾಡಿದರು.

ಆಗಸ್ಟ್ 2017 ರಿಂದ ಮ್ಯಾನ್ಮಾರ್‌ನಲ್ಲಿ ನಡೆಯುತ್ತಿರುವ ಹಿಂಸಾಚಾರದ ನಂತರ, ರೋಹಿಂಗ್ಯಾಗಳು ಬಾಂಗ್ಲಾದೇಶದಲ್ಲಿ ಆಶ್ರಯ ಪಡೆದರು. ಬಾಂಗ್ಲಾದೇಶದ ಕಾಕ್ಸ್ ಬಜಾರ್ ಜಿಲ್ಲೆಯಲ್ಲಿ ಅವರಿಗಾಗಿ ವ್ಯವಸ್ಥೆ ಮಾಡಲಾಗಿದೆ. ಯುನೂಸ್ ಅವರು ರೋಹಿಂಗ್ಯಾಗಳ ಮರುಸ್ಥಾಪನೆಗಾಗಿ 7 ಅಂಶಗಳ ಯೋಜನೆಯನ್ನೂ ಮಂಡಿಸಿದರು.

ರೋಹಿಂಗ್ಯಾಗಳಿಗೆ ಮ್ಯಾನ್ಮಾರ್‌ಗೆ ಹಿಂದಿರುಗಬೇಕಿದೆ!

ಕಾಕ್ಸ್ ಬಜಾರ್‌ನಲ್ಲಿ ವಾಸಿಸುತ್ತಿರುವ ರೋಹಿಂಗ್ಯಾಗಳು ‘ರೋಹಿಂಗ್ಯಾ ನರಮೇಧ ಸ್ಮರಣಾರ್ಥ ದಿನ’ವನ್ನು ಆಚರಿಸಿದರು. ಅವರ ಕೈಯಲ್ಲಿ ಮನೆಗೆ ಮರಳುವಂತೆ ಒತ್ತಾಯಿಸುವ ಫಲಕಗಳಿದ್ದವು. ಈ ಕಾರ್ಯಕ್ರಮದಲ್ಲಿ ಅಂತಾರಾಷ್ಟ್ರೀಯ ಸಂಸ್ಥೆಗಳ ಪ್ರತಿನಿಧಿಗಳು ಮತ್ತು ಆಡಳಿತಾಧಿಕಾರಿಗಳು ಭಾಗವಹಿಸಿದ್ದರು.

ಸಂಪಾದಕೀಯ ನಿಲುವು

  • ಭಾರತವು ಕೂಡ ತನ್ನ ದೇಶದಲ್ಲಿರುವ ಕೋಟ್ಯಂತರ ಬಾಂಗ್ಲಾದೇಶಿ ಅಕ್ರಮ ವಲಸಿಗರ ವಿಷಯವನ್ನು ಜಾಗತಿಕ ಮಟ್ಟದಲ್ಲಿ ಪ್ರಸ್ತಾಪಿಸಬೇಕು ಮತ್ತು ಅವರನ್ನು ಬಾಂಗ್ಲಾದೇಶಕ್ಕೆ ಮರಳಿ ಕಳುಹಿಸಲು ಸಮರೋಪಾದಿಯಲ್ಲಿ ಪ್ರಯತ್ನಿಸಬೇಕು!
  • ಕೋಟ್ಯಂತರ ಬಾಂಗ್ಲಾದೇಶಿ ಅಕ್ರಮ ವಲಸಿಗರನ್ನು ಭಾರತ ಹಲವು ವರ್ಷಗಳಿಂದ ಪೋಷಿಸುತ್ತಿದೆ. ಅದರಲ್ಲಿ ಪ್ರತಿದಿನ ಅಕ್ರಮ ವಲಸಿಗರು ಹೆಚ್ಚಾಗುತ್ತಲೇ ಇದ್ದಾರೆ. ಕೇವಲ 13 ಲಕ್ಷ ರೋಹಿಂಗ್ಯಾಗಳಿಂದ ಬಾಂಗ್ಲಾದೇಶ ತತ್ತರಿಸಿದೆ. ಇದರಿಂದ ಭಾರತದ ಮೇಲೆ ಎಷ್ಟು ಒತ್ತಡ ಇರಬಹುದು ಎಂಬುದನ್ನು ಊಹಿಸಲು ಕೂಡ ಸಾಧ್ಯವಿಲ್ಲ!