ಸಂಸತ್ತಿನ ಮಳೆಗಾಲದ ಅಧಿವೇಶನದಲ್ಲಿ 240 ಗಂಟೆಗಳ ಪೈಕಿ 156 ಗಂಟೆಗಳ ಕಾಲ ವ್ಯರ್ಥ!

  • ಜನರ 204 ಕೋಟಿ ರೂಪಾಯಿಗಳ ನಷ್ಟ!

  • ಲೋಕಸಭೆಯಲ್ಲಿ 120 ಗಂಟೆಗಳಲ್ಲಿ ಕೇವಲ 37 ಗಂಟೆಗಳು, ರಾಜ್ಯಸಭೆಯಲ್ಲಿ 120 ಗಂಟೆಗಳಲ್ಲಿ ಕೇವಲ 47 ಗಂಟೆಗಳ ಕಾಲ ಮಾತ್ರ ಕೆಲಸ ನಡೆದಿದೆ

ನವದೆಹಲಿ – ಸಂಸತ್ತಿನ ಮಳೆಗಾಲದ ಅಧಿವೇಶನದ ಅವಧಿಯಲ್ಲಿ ಲೋಕಸಭೆಯ ಕೆಲಸ 120 ಗಂಟೆಗಳ ಕಾಲ ನಡೆಯಬೇಕಿತ್ತು, ಆದರೆ ಸದಸ್ಯರು ಗದ್ದಲ ಮಾಡಿದ ಕಾರಣ ಕೇವಲ 37 ಗಂಟೆಗಳ ಕಾಲ ಮಾತ್ರ ಕೆಲಸ ನಡೆಯಿತು. ಈ ಅಧಿವೇಶನದಲ್ಲಿ ಲೋಕಸಭೆಯ 83 ಗಂಟೆಗಳ ಕೆಲಸದ ಅವಧಿ ವ್ಯರ್ಥವಾಗಿದೆ ಮತ್ತು ಕೇವಲ ಶೇ.31ರಷ್ಟು ಕೆಲಸ ನಡೆದಿದೆ. ರಾಜ್ಯಸಭೆಯಲ್ಲಿಯೂ 120 ಗಂಟೆಗಳ ಕೆಲಸ ನಡೆಯಬೇಕಿತ್ತು, ಆದರೆ ಗದ್ದಲದಿಂದಾಗಿ ಕೇವಲ 47 ಗಂಟೆಗಳ ಕಾಲ ಕೆಲಸ ನಡೆಯಿತು. ಸಂಸದರು ಸೃಷ್ಟಿಸಿದ ಗದ್ದಲದಿಂದಾಗಿ ರಾಜ್ಯಸಭೆಯ ಶೇ.62 ರಷ್ಟು ಸಮಯ ವ್ಯರ್ಥವಾಗಿದೆ. ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಸಮಯ ವ್ಯರ್ಥವಾದ ಕಾರಣ ಜನರ 204 ಕೋಟಿ ರೂಪಾಯಿಗಳು ನಷ್ಟವಾಗಿವೆ.

1. ಜುಲೈ 24 ಮತ್ತು ಆಗಸ್ಟ್ 1ರಂದು ಲೋಕಸಭೆಯ ಕೆಲಸ ಕೇವಲ 12 ನಿಮಿಷಗಳ ಕಾಲ ನಡೆಯಿತು, ಹಾಗೂ ಜುಲೈ 23ರಂದು 18 ನಿಮಿಷಗಳ ಕಾಲ ಕೆಲಸ ನಡೆಯಿತು. ಆಗಸ್ಟ್ 4ರಂದು ಲೋಕಸಭೆಯ ಕೆಲಸವನ್ನು 24 ನಿಮಿಷಗಳಲ್ಲಿ ಸ್ಥಗಿತಗೊಳಿಸಬೇಕಾಯಿತು.

2. ಸಂಸತ್ತಿನ ಮಳೆಗಾಲದ ಅಧಿವೇಶನ 21 ದಿನಗಳ ಕಾಲ ನಡೆಯಿತು. ಈ 21 ದಿನಗಳಲ್ಲಿ ಲೋಕಸಭೆ 1 ಗಂಟೆ ಅಥವಾ ಅದಕ್ಕಿಂತ ಹೆಚ್ಚು ಕಾಲ ಕೇವಲ 5 ದಿನ ಮಾತ್ರ ಕೆಲಸ ಮಾಡಿದೆ.

3. ಭಾರತದ ಮೊದಲ ಲೋಕಸಭೆಯ ಕೆಲಸ 14 ಸತ್ರಗಳಲ್ಲಿ ನಡೆದಿತ್ತು. ಈ 14 ಸತ್ರಗಳಲ್ಲಿ ಕೆಲಸ 3 ಸಾವಿರ 784 ಗಂಟೆಗಳ ಕಾಲ ನಡೆಯಿತು. 1974 ರವರೆಗೂ ಪ್ರತಿ ಲೋಕಸಭಾ ಅವಧಿಯ ಸಭೆಗಳ ಸಂಖ್ಯೆ 100ಕ್ಕಿಂತ ಹೆಚ್ಚಿತ್ತು.

4. 1974ರ ನಂತರ ಮತ್ತು 2011ರವರೆಗೂ ಕೇವಲ 5 ಬಾರಿ ಸದನದ ಸಭೆಗಳ ಸಂಖ್ಯೆ 100ಕ್ಕಿಂತ ಹೆಚ್ಚಿತ್ತು.

5. ಮೊದಲ ಲೋಕಸಭೆಯಲ್ಲಿ 333 ಮಸೂದೆಗಳು ಅಂಗೀಕಾರವಾದವು. 17ನೇ ಲೋಕಸಭೆಯಲ್ಲಿ, ಅಂದರೆ ಕಳೆದ ಲೋಕಸಭೆಯಲ್ಲಿ, 2019 ರಿಂದ 2024ರ ಅವಧಿಯಲ್ಲಿ 222 ಮಸೂದೆಗಳು ಅಂಗೀಕಾರವಾದವು. ಈ ಸಮಯದಲ್ಲಿ ಜನರ ಪ್ರಮುಖ ಮಸೂದೆಗಳು ಸಂಸತ್ತಿನಲ್ಲಿ ಗದ್ದಲದ ನಡುವೆಯೂ ವಿರೋಧ ಪಕ್ಷದ ಚರ್ಚೆಯಿಲ್ಲದೆ ಅಂಗೀಕಾರವಾದವು.

ಸಂಪಾದಕೀಯ ನಿಲುವು

  • ಭಾರತ 79ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸುತ್ತಿರುವಾಗ, ಸಂಸತ್ತಿನ ಕೆಲಸ 240 ಗಂಟೆಗಳೂ ನಡೆಯದಿರುವುದು ನಾಚಿಕೆಗೇಡಿನ ಸಂಗತಿ! ಇದರಿಂದ ವ್ಯರ್ಥವಾದ ಜನರ ಹಣವನ್ನು, ಕೆಲಸಕ್ಕೆ ಅಡ್ಡಿಪಡಿಸಿದ ಸಂಸದರ ಜೇಬಿನಿಂದಲೇ ಭರಿಸಬೇಕು ಎಂದು ಜನರಿಗೆ ಅಪೇಕ್ಷಿತವಿದೆ. ಇದಕ್ಕಾಗಿ ಅವರಿಗೆ ವೇತನ ಮತ್ತು ಭತ್ಯೆಗಳನ್ನು ನೀಡುವುದನ್ನು ನಿಲ್ಲಿಸಬೇಕು! ಇದಕ್ಕಾಗಿ ಈಗ ಜನರೇ ಒತ್ತಡವನ್ನು ಹೇರುವುದು ಅಗತ್ಯವಾಗಿದೆ!
  • ಪ್ರತಿ ಸಂಸದನಿಗೆ ತಿಂಗಳಿಗೆ 1 ಲಕ್ಷ 24 ಸಾವಿರ ಸಂಬಳ ಮತ್ತು ಸಾವಿರಾರು ರೂಪಾಯಿಗಳ ವಿವಿಧ ಭತ್ಯೆಗಳು ದೊರೆಯುತ್ತವೆ. ಈ ಹಣವನ್ನು ಜನರ ಜೇಬಿನಿಂದ ನೀಡುತ್ತಿರುವಾಗ, ಅವರು ಸಂಸತ್ತಿನಲ್ಲಿ ಜನರ ಸಮಸ್ಯೆಗಳನ್ನು ಪರಿಹರಿಸುವ ಬದಲು ಗದ್ದಲ ಮಾಡಿ ಕೆಲಸಕ್ಕೆ ಅಡ್ಡಿಪಡಿಸುತ್ತಿದ್ದರೆ, ಅಂತಹ ಜನತಾದ್ರೋಹಿ ಸಂಸದರ ಸದಸ್ಯತ್ವವನ್ನು ರದ್ದುಗೊಳಿಸಿ ಅವರಿಗೆ ಕಠಿಣ ದಂಡ ವಿಧಿಸುವುದು ಅಗತ್ಯವಾಗಿದೆ!