ಸೊಳ್ಳೆಗಳ ಉತ್ಪತ್ತಿ ತಡೆಯಲು ಧೂಮ್ರ-ಸಿಂಪಡಣೆಗೆ ‘ಬೃಹನ್‌ಮುಂಬಯಿ ಸಾರ್ವಜನಿಕ ಗಣೇಶೋತ್ಸವ ಸಮನ್ವಯ ಸಮಿತಿ’ಯಿಂದ ಬೇಡಿಕೆ!

ಮುಂಬಯಿಯ ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳ ಪೆಂಡಾಲ್‌ಗಳ ಬಳಿ ಕೆಸರು!

ಮುಂಬಯಿ – ಮಹಾನಾಗರದಲ್ಲಿ ಅನೇಕ ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳಲ್ಲಿ ಗಣೇಶ ಮೂರ್ತಿಗಳು ಪೆಂಡಾಲ್‌ಗಳನ್ನು ತಲುಪಿವೆ; ಆದರೆ ಮಳೆಯ ಕಾರಣ ಪೆಂಡಾಲ್‌ಗಳ ಬಳಿ ನೀರು ನಿಂತು ಕೆಸರಾಗಿದೆ. ಇದರಿಂದ ಸೊಳ್ಳೆಗಳ ಉತ್ಪತ್ತಿಯಾಗುವ ಸಾಧ್ಯತೆ ಇದೆ ಎಂದು ‘ಬೃಹನ್‌ಮುಂಬಯಿ ಸಾರ್ವಜನಿಕ ಗಣೇಶೋತ್ಸವ ಸಮನ್ವಯ ಸಮಿತಿ’ಯ ಅಧ್ಯಕ್ಷ, ವಕೀಲ ನರೇಶ್‌ ದಹಿಬಾವಕರ್‌ ಅವರು ಕಳವಳ ವ್ಯಕ್ತಪಡಿಸಿದ್ದಾರೆ. ‘ಮಹಾನಗರ ಪಾಲಿಕೆಯು ತಕ್ಷಣವೇ ಧೂಮ್ರ ಸಿಂಪಡಣೆ ಮತ್ತು ಸಾಂಕ್ರಾಮಿಕ ರೋಗ ತಡೆಗಟ್ಟುವ ಔಷಧ ಸಿಂಪಡಣೆ ಮಾಡಬೇಕು’ ಎಂದು ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳು ಮುಂಬಯಿ ಮಹಾನಗರ ಪಾಲಿಕೆಯ ಆಯುಕ್ತ ಭೂಷಣ್‌ ಗಾಗ್ರಾಣಿ ಅವರಿಗೆ ಬೇಡಿಕೆ ಸಲ್ಲಿಸಿವೆ. ‘ಔಷಧ ಸಿಂಪಡಣೆ ಮಾಡಿದರೆ ಸಾಂಕ್ರಾಮಿಕ ರೋಗಗಳ ಹರಡುವಿಕೆಯನ್ನು ತಡೆಯಬಹುದು’ ಎಂದು ವಕೀಲ ದಹಿಬಾವಕರ್‌ ಹೇಳಿದ್ದಾರೆ.

ಸಂಪಾದಕೀಯ ನಿಲುವು

ಇಂತಹ ಬೇಡಿಕೆ ಮಾಡುವ ಪರಿಸ್ಥಿತಿ ಏಕೆ ಬರುತ್ತದೆ? ಸರ್ಕಾರ ಖುದ್ದಾಗಿ ಈ ಕ್ರಮ ಕೈಗೊಳ್ಳಬೇಕಿತ್ತು!