ಹಿಂದೂ ವಿದ್ಯಾರ್ಥಿಯ ಹತ್ಯೆಯನ್ನು ಮಾಡಿರುವುದಾಗಿ ಆರೋಪಿ ವಿದ್ಯಾರ್ಥಿಯಿಂದ ಒಪ್ಪಿಗೆ

ಕರ್ಣಾವತಿ (ಗುಜರಾತ) ಇಲ್ಲಿನ ಶಾಲೆಯಲ್ಲಿ ನಡೆದ ಘಟನೆ

ಕರ್ಣಾವತಿ (ಗುಜರಾತ) – ಇಲ್ಲಿನ ಸೆವೆಂತ್ ಡೇ ಸ್ಕೂಲ್‌ನಲ್ಲಿ 10ನೇ ತರಗತಿಯ ವಿದ್ಯಾರ್ಥಿಯ ಕೊಲೆ ಪ್ರಕರಣದಲ್ಲಿ, ಆರೋಪಿ ವಿದ್ಯಾರ್ಥಿ ಹತ್ಯೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಹತ್ಯೆಯ ನಂತರ, ಆರೋಪಿಯು ತನ್ನ ಸ್ನೇಹಿತನೊಂದಿಗೆ ಮೊಬೈಲ್ ಫೋನ್ ಸಂದೇಶಗಳ ಮೂಲಕ ಸಂವಹನ ನಡೆಸಿದ್ದಾನೆ ಮತ್ತು ಅದರಲ್ಲಿ ತಾನು ಹತ್ಯೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ.

ಪೊಲೀಸರು ಆರೋಪಿ ವಿದ್ಯಾರ್ಥಿ ಮತ್ತು ಆತನಿಗೆ ಸಹಾಯ ಮಾಡಿದ ಮೂವರನ್ನು ಬಂಧಿಸಿದ್ದಾರೆ. ಅಲ್ಲದೆ, ವಿದ್ಯಾರ್ಥಿಗೆ ಹರಿತವಾದ ಆಯುಧ ನೀಡಿದ ವ್ಯಕ್ತಿಯನ್ನೂ ಪೊಲೀಸರು ಬಂಧಿಸಿದ್ದಾರೆ. ಈ ಹತ್ಯೆಯಲ್ಲಿ ಇನ್ನೂ ಎಷ್ಟು ಜನರ ಪಾತ್ರವಿದೆ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ.

ಪೊಲೀಸರ ನಿರ್ಲಕ್ಷ್ಯ

ಈ ಘಟನೆಯಲ್ಲಿ ಖೋಖರಾ ಪೊಲೀಸ ಠಾಣೆಯ ಇನ್‌ಸ್ಪೆಕ್ಟರ ಎನ್.ಎಂ. ಪಾಂಚಾಲ್ ಅವರ ಗಂಭೀರ ನಿರ್ಲಕ್ಷ್ಯ ಬಹಿರಂಗವಾಗಿದೆ. ಅವರು ಸುಮಾರು 12 ಗಂಟೆಗಳ ಕಾಲ ಘಟನೆಯ ಮಾಹಿತಿಯನ್ನು ನ್ಯಾಯ ವೈದ್ಯಕೀಯ ಪ್ರಯೋಗಾಲಯಕ್ಕೆ ನೀಡಿಲ್ಲ. ಪೊಲೀಸ್ ಕಮಿಷನರ್ ಜಿ.ಎಂ. ಮಲಿಕ್ ಅವರಿಂದ ಪಾಂಚಾಲ್ ಮೇಲೆ ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ.

ಹಿಂದೂ ಸಂಘಟನೆಗಳಿಂದ ಬಂದ್

ಈ ಘಟನೆಯನ್ನು ವಿರೋಧಿಸಿ ಹಿಂದೂ ಸಂಘಟನೆಗಳು ಆಗಸ್ಟ್ 21ರಂದು ಕರ್ಣಾವತಿಯಲ್ಲಿ ಬಂದ್ ಆಚರಿಸಿದವು. ಬಂದ್‌ ಗೆ ಸ್ಥಳೀಯ ವ್ಯಾಪಾರಿಗಳೂ ಬೆಂಬಲ ನೀಡಿದ್ದು, ತಮ್ಮ ಅಂಗಡಿಗಳನ್ನು ಮುಚ್ಚಿದ್ದರು. ಧಾರ್ಮಿಕ ಉದ್ವಿಗ್ನತೆ ಉಂಟಾಗದಂತೆ ತಡೆಯಲು ಶಾಲೆಯ ಹೊರಗೆ ಭಾರಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಕೊಲೆ ಘಟನೆಗೆ ವಿರೋಧಿಸಿ ಕಾಂಗ್ರೆಸ್ ವಿದ್ಯಾರ್ಥಿ ಸಂಘಟನೆಗಳೂ ಪ್ರತಿಭಟನೆ ನಡೆಸಿದವು.