ನ್ಯಾಯಮೂರ್ತಿ ಯಶವಂತ ವರ್ಮಾ ಅವರ ವಿರುದ್ಧ ದೋಷಾರೋಪಣೆ ಪ್ರಸ್ತಾವ ಲೋಕಸಭೆಯಲ್ಲಿ ಅಂಗೀಕಾರ – Impeachment Motion Justice Yashwant Varma

ಸ್ಪೀಕರ್ ಅವರಿಂದ 3 ಸದಸ್ಯರ ಸಮಿತಿ ಸ್ಥಾಪನೆ

ನವದೆಹಲಿ – ಅಲಹಾಬಾದ್ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಯಶವಂತ ವರ್ಮಾ ಅವರ ವಿರುದ್ಧದ ದೋಷಾರೋಪಣೆಯ ಪ್ರಸ್ತಾವವನ್ನು ಲೋಕಸಭೆಯಲ್ಲಿ ಅಂಗೀಕರಿಸಲಾಗಿದೆ. ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರು ತನಿಖೆಗಾಗಿ 3 ಸದಸ್ಯರ ಸಮಿತಿಯನ್ನು ಘೋಷಿಸಿದ್ದಾರೆ. ಈ ಸಮಿತಿಯಲ್ಲಿ ಸುಪ್ರೀಂ ಕೋರ್ಟ್ ಮತ್ತು ಉಚ್ಚ ನ್ಯಾಯಾಲಯದ ತಲಾ ಒಬ್ಬ ನ್ಯಾಯಾಧೀಶರು ಮತ್ತು ಒಬ್ಬ ಕಾನೂನು ತಜ್ಞರು ಇರುತ್ತಾರೆ. ತನಿಖಾ ಸಮಿತಿಯ ವರದಿ ಬರುವವರೆಗೂ ದೋಷಾರೋಪಣೆಯ ಪ್ರಸ್ತಾವ ಬಾಕಿ ಇರುತ್ತದೆ. ಈ ಪ್ರಸ್ತಾವದಲ್ಲಿ ನ್ಯಾಯಮೂರ್ತಿ ಯಶವಂತ ವರ್ಮಾ ಅವರನ್ನು ಅವರ ಸ್ಥಾನದಿಂದ ತೆಗೆದುಹಾಕಬೇಕೆಂದು ಒತ್ತಾಯಿಸಲಾಗಿದೆ.

ಈ ವರ್ಷ ಮಾರ್ಚ್ 14 ರಂದು ನ್ಯಾಯಮೂರ್ತಿ ವರ್ಮಾ ಅವರ ಮನೆಯ ಅತಿಥಿಗೃಹದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಬೆಂಕಿಯನ್ನು ನಂದಿಸಿದ ನಂತರ ಅಗ್ನಿಶಾಮಕ ದಳದವರಿಗೆ ಸುಟ್ಟುಹೋದ 500 ರೂಪಾಯಿ ನೋಟುಗಳು ಗೋಣಿಚೀಲಗಳಲ್ಲಿ ತುಂಬಿರುವುದು ಕಂಡುಬಂದಿತ್ತು. ಈ ಘಟನೆಯ ವಿಡಿಯೋ ವೈರಲ್ ಆದ ನಂತರ ತನಿಖೆಗೆ ಒತ್ತಾಯಿಸಲಾಗಿತ್ತು.