|

ಇಸ್ಲಾಮಾಬಾದ್ (ಪಾಕಿಸ್ತಾನ) – ಪಾಕಿಸ್ತಾನದಲ್ಲಿನ ಭಾರತೀಯ ರಾಯಭಾರಿಗಳ ಮನೆಗೆ ಪೂರೈಸಲಾಗುತ್ತಿರುವ ನೀರು ಮತ್ತು ಗ್ಯಾಸ್ ಅನ್ನು ನಿಲ್ಲಿಸಲಾಗಿದೆ. ಇದರ ಜೊತೆಗೆ ಸಮಾಚಾರ ಪತ್ರ ಕೂಡ ನಿಲ್ಲಿಸಲಾಗಿದೆ. ಪಾಕಿಸ್ತಾನದ ಸ್ಥಳಿಯ ಗ್ಯಾಸ್ ಸಿಲಿಂಡರ್ ಏಜೆಂಟರಿಗೆ ಭಾರತೀಯ ರಾಯಭಾರಿಗಳಿಗೆ ಸಿಲಿಂಡರ್ ಮಾರದಿರಲು ಆದೇಶ ನೀಡಲಾಗಿದೆ. ‘ಆಪರೇಷನ್ ಸಿಂದೂರ’ ದ ಸೇಡು ತೀರಿಸಿಕೊಳ್ಳುವುದಕ್ಕಾಗಿ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐ.ಎಸ್.ಐ. ಇಂದ ರೂಪಿಸಿರುವ ಷಡ್ಯಂತ್ರದ ಇದು ಒಂದು ಭಾಗವಾಗಿದೆ ಎಂದು ಹೇಳಲಾಗಿದೆ. ಈ ಹಿಂದೆ ೨೦೧೯ ರಲ್ಲಿ ಭಾರತವು ನಡೆಸಿರುವ ‘ಸರ್ಜಿಕಲ್ ಸ್ಟ್ರೈಕ್’ ನಂತರ ಪಾಕಿಸ್ತಾನದಿಂದ ರಾಯಭಾರಿಗಳಿಗೆ ಇದೇ ರೀತಿ ಕಿರುಕುಳ ನೀಡಲಾಗಿತ್ತು. ಪಾಕಿಸ್ತಾನದ ಈಗಿನ ಕೃತಿಯ ನಂತರ ಭಾರತವು ದೆಹಲಿಯಲ್ಲಿನ ಪಾಕಿಸ್ತಾನ ರಾಯಭಾರಿಗಳಿಗೆ ಸಮಾಚಾರ ಪತ್ರಗಳನ್ನು ತಲುಪಿಸುವುದನ್ನು ನಿಲ್ಲಿಸಿದೆ.
🚨 Pakistan’s Petty Revenge for ‘Operation Sindoor’!
Water, gas & newspapers cut off at Indian Diplomat’s residence in Islamabad – a clear breach of the 1961 Vienna Convention (Art. 25).
Such childish antics only expose Pakistan’s desperation before the world.
India should… pic.twitter.com/QEgvVnHvaX
— Sanatan Prabhat (@SanatanPrabhat) August 12, 2025
ಅಂತರಾಷ್ಟ್ರೀಯ ಒಪ್ಪಂದದ ಉಲ್ಲಂಘನೆ !
ಪಾಕಿಸ್ತಾನ ನಡೆಸುತ್ತಿರುವ ಕೃತ್ಯಗಳು ರಾಜತಾಂತ್ರಿಕ ಸಂಬಂಧದ ‘ವಿಯೆನ್ನಾ ಒಪ್ಪಂದ’ ದ (೧೯೬೧ ರ) ಉಲ್ಲಂಘನೆ ಆಗಿದೆ. ಒಪ್ಪಂದದ ಕಲಂ ೨೫ ರ ಪ್ರಕಾರ ಆಥಿತೆಯ ದೇಶ ರಾಜತಾಂತ್ರಿಕ ಅಭಿಯಾನದ ಕಾರ್ಯಕ್ರಮಗಳು ಸುರಳಿತವಾಗಿ ನಡೆಸುವುದಕ್ಕಾಗಿ ಎಲ್ಲಾ ಸೌಲಭ್ಯಗಳನ್ನು ಪೂರೈಸಬೇಕು. ತಿಳಿದು ತಿಳಿದು ಅಗತ್ಯ ವಸ್ತುಗಳನ್ನು ತಡೆದು ಪಾಕಿಸ್ತಾನವು ರಾಯಭಾರಿಗಳ ದೈನಂದಿನ ಜೀವನ ಹಾಳು ಮಾಡಿದೆ.
ಸಂಪಾದಕೀಯ ನಿಲುವು
|
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara
ಕರಾಚಿ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಭಾರತ! : India rejects Pakistan’s allegation