|

ಇಂದೋರ (ಮಧ್ಯಪ್ರದೇಶ) – ಪರದೆಶಿಪುರ ನಿವಾಸಿ ಸೋಹಿಲ್ ಖಾನ್ ಎಂಬ ಮುಸ್ಲಿಂ ಯುವಕ, ಸೋಹಿಲ್ ರಾಜಪೂತ್ ಎಂಬ ಹಿಂದೂ ಹೆಸರನ್ನು ಇಟ್ಟುಕೊಂಡು ಓರ್ವ ಹಿಂದೂ ಯುವತಿಯನ್ನು ಪ್ರೀತಿಯ ಬಲೆಗೆ ಬೀಳಿಸಿದ್ದಾನೆ. ಸೋಹಿಲ್ ಖಾನ್ ಹಿಂದೂ ಯುವತಿಗೆ ಮದುವೆಯಾಗುವ ಭರವಸೆ ನೀಡಿ ಅತ್ಯಾಚಾರ ಎಸಗಿದ್ದಲ್ಲದೆ, ಆಕೆಯನ್ನು ಇಸ್ಲಾಂಗೆ ಮತಾಂತರಗೊಳಿಸಿ ಮದುವೆಯಾಗಿದ್ದಾನೆ. ಸಂತ್ರಸ್ತ ಹಿಂದೂ ಯುವತಿ ಆರೋಪಿಯ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾಳೆ. ಪೊಲೀಸರು ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
1. 23 ವರ್ಷದ ಸಂತ್ರಸ್ತ ಹಿಂದೂ ಯುವತಿ ತನ್ನ ದೂರಿನಲ್ಲಿ, “ಮೂರು ವರ್ಷಗಳ ಹಿಂದೆ ಫೇಸ್ಬುಕ್ನಲ್ಲಿ ‘ಫೈಟರ್ ರಾಜಪೂತ್’ ಎಂಬ ಹೆಸರಿನ ಹುಡುಗನೊಂದಿಗೆ ನನಗೆ ಸ್ನೇಹವಾಯಿತು. ಅವನು ತನ್ನ ಹೆಸರು ಸೋಹಿಲ್ ರಾಜಪೂತ್ ಎಂದು ಇಟ್ಟುಕೊಂಡು ತಾನು ಹಿಂದೂ ಎಂದು ಹೇಳಿದ್ದನು. ಜೂನ್ 21, 2025 ರಂದು, ಸೋಹಿಲ್ ಸುಳ್ಳು ಹೇಳಿ ಸಂತ್ರಸ್ತ ಯುವತಿಯನ್ನು ಕರ್ಣಾವತಿಗೆ ಕರೆದಿದ್ದಾನೆ. ಅಲ್ಲಿನ ಒಂದು ಹೋಟೆಲ್ನಲ್ಲಿ ಅವಳನ್ನು ಎರಡು ದಿನ ಇಟ್ಟುಕೊಂಡು, ಅಲ್ಲಿ ಆಕೆಯೊಂದಿಗೆ ದೈಹಿಕ ಸಂಬಂಧ ಇಟ್ಟುಕೊಂಡಿದ್ದಾನೆ.” ಎಂದು ತಿಳಿಸಿದ್ದಾಳೆ.
2. ನಂತರ ಸೋಹಿಲ್ ಅವಳನ್ನು ತನ್ನ ಮನೆಗೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ಅವನ ತಂದೆ-ತಾಯಿ, ಸಹೋದರ-ಸಹೋದರಿ ಮತ್ತು ಕೆಲವು ಸಂಬಂಧಿಕರು ಇದ್ದರು. ಆಗ ಸಂತ್ರಸ್ತ ಯುವತಿಗೆ ಅವನ ನಿಜವಾದ ಹೆಸರು ಸೋಹಿಲ್ ಖಾನ್ ಮತ್ತು ಅವನು ಮುಸ್ಲಿಂ ಎಂಬುದು ತಿಳಿದಿದೆ.
3. ಸೋಹಿಲ್ ಖಾನ್ ಮತ್ತು ಅವನ ಕುಟುಂಬದವರು ಅವಳ ಮೇಲೆ ಮತಾಂತರಕ್ಕಾಗಿ ಒತ್ತಡ ಹೇರಿದ್ದಾರೆ. ಬಲವಂತವಾಗಿ ಕಲ್ಮಾ ಓದಿಸಿ, ಅವಳ ಹೆಸರನ್ನು ಸನಾ ಫಾತಿಮಾ ಎಂದು ಬದಲಿಸಿದ್ದಾರೆ. ನಂತರ ಕುಟುಂಬದವರು ಸೋಹಿಲ್ನೊಂದಿಗೆ ಅವಳ ನಿಕಾಹ (ಮದುವೆ) ನಡೆಸಿದ್ದಾರೆ. ನಿಕಾಹದ ನಂತರ ಸಂತ್ರಸ್ತ ಯುವತಿಯನ್ನು ಮನೆಯಿಂದ ಹೊರ ಹೋಗಲು ಬಿಡುತ್ತಿರಲಿಲ್ಲ.
4. ಒಂದು ದಿನ ಸಂತ್ರಸ್ತ ಯುವತಿ ಅವಕಾಶ ಸಿಕ್ಕಾಗ ತನ್ನ ತಾಯಿ ಮತ್ತು ಸಹೋದರನೊಂದಿಗೆ ಸಂಪರ್ಕ ಸಾಧಿಸಿ ಎಲ್ಲ ಘಟನೆಯನ್ನು ತಿಳಿಸಿದ್ದಾಳೆ. ಅವರ ಸಹಾಯದಿಂದ ಆಗಸ್ಟ್ 9, 2025 ರಂದು ಪರದೆಶಿಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.
‘ಹಿಂದೂ ಯುವತಿಯರನ್ನು ಮೋಸ ಮಾಡುವುದೇ ನನ್ನ ಕೆಲಸ!’ – ಸೋಹಿಲ್ ಖಾನ್ಒಂದು ದಿನ ಸಂತ್ರಸ್ತ ಯುವತಿ ಸೋಹಿಲ್ನ ಮೊಬೈಲ್ ನೋಡಿದಾಗ, ಅವನು ಇತರ ಅನೇಕ ಯುವತಿಯರೊಂದಿಗೆ ಮಾತನಾಡುತ್ತಿದ್ದಾನೆ ಎಂದು ತಿಳಿದಿದೆ. ಇದರ ಬಗ್ಗೆ ಕೇಳಿದಾಗ, ಹಿಂದೂ ಯುವತಿಯರನ್ನು ಮೋಸ ಮಾಡುವುದು ತನ್ನ ಕೆಲಸ ಎಂದು ಅವನು ಹೇಳಿದ್ದಾನೆ. |
ಸಂಪಾದಕೀಯ ನಿಲುವುಮಧ್ಯಪ್ರದೇಶದಲ್ಲಿ ಹಿಂದುತ್ವನಿಷ್ಠ ಸರಕಾರವಿದ್ದರೂ ಇಂತಹ ಘಟನೆಗಳು ನಿರಂತರವಾಗಿ ನಡೆಯುತ್ತಿರುವುದು ಹಿಂದೂಗಳಿಗೆ ಅಪೇಕ್ಷಿತವಲ್ಲ. ಸರಕಾರ ಲವ್ ಜಿಹಾದಿಗಳಿಗೆ ತಕ್ಕ ಪಾಠ ಕಲಿಸಬೇಕು! |
ಕಳೆದ 24 ಗಂಟೆಗಳಲ್ಲಿ ಲವ್ ಜಿಹಾದ್ನ 4 ಮತ್ತು ಮತಾಂತರದ 2 ಘಟನೆಗಳು ಬೆಳಕಿಗೆ! : Love Jihad
‘ಮಾನವಾಧಿಕಾರ ಉಲ್ಲಂಘನೆಯಾದರೆ ಭಾರತದ ಮೇಲೆ ಟೀಕಿಸಲು ಹಿಂಜರಿಯುವುದಿಲ್ಲ!'(ವಂತೆ) : US Lawmakers
೬೦೦ ಮಿಲಿಯನ್ ಲೀಟರ್ ಕೊಳಚೆ ನೀರನ್ನು ನೇರವಾಗಿ ನದಿಗೆ ಬಿಡುತ್ತಿರುವುದರಿಂದ ಪುಣೆ ನಗರದ ನದಿಗಳು ಮಾಲಿನ್ಯದ ಸುಳಿಗೆ!
ಉತ್ತರ ಪ್ರದೇಶ : ಭಗವಾನ್ ಹನುಮಂತನ ಮೂರ್ತಿ ಧ್ವಂಸ ಪ್ರಕರಣದಲ್ಲಿ ಅಸದ್ ವಿರುದ್ಧ ಆರೋಪ
ಮಹಾರಾಷ್ಟ್ರದಲ್ಲಿ ಸಮಾನ ನಾಗರಿಕ ಸಂಹಿತೆಯ ಕರಡು ಸಿದ್ದಪಡಿಸಲಾಗುವುದು! – ಯೋಗೇಶ್ ಕದಮ್, ಗೃಹ ರಾಜ್ಯ ಸಚಿವರು, ಮಹಾರಾಷ್ಟ್ರ