|

ಇಂದೋರ (ಮಧ್ಯಪ್ರದೇಶ) – ಪರದೆಶಿಪುರ ನಿವಾಸಿ ಸೋಹಿಲ್ ಖಾನ್ ಎಂಬ ಮುಸ್ಲಿಂ ಯುವಕ, ಸೋಹಿಲ್ ರಾಜಪೂತ್ ಎಂಬ ಹಿಂದೂ ಹೆಸರನ್ನು ಇಟ್ಟುಕೊಂಡು ಓರ್ವ ಹಿಂದೂ ಯುವತಿಯನ್ನು ಪ್ರೀತಿಯ ಬಲೆಗೆ ಬೀಳಿಸಿದ್ದಾನೆ. ಸೋಹಿಲ್ ಖಾನ್ ಹಿಂದೂ ಯುವತಿಗೆ ಮದುವೆಯಾಗುವ ಭರವಸೆ ನೀಡಿ ಅತ್ಯಾಚಾರ ಎಸಗಿದ್ದಲ್ಲದೆ, ಆಕೆಯನ್ನು ಇಸ್ಲಾಂಗೆ ಮತಾಂತರಗೊಳಿಸಿ ಮದುವೆಯಾಗಿದ್ದಾನೆ. ಸಂತ್ರಸ್ತ ಹಿಂದೂ ಯುವತಿ ಆರೋಪಿಯ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾಳೆ. ಪೊಲೀಸರು ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
1. 23 ವರ್ಷದ ಸಂತ್ರಸ್ತ ಹಿಂದೂ ಯುವತಿ ತನ್ನ ದೂರಿನಲ್ಲಿ, “ಮೂರು ವರ್ಷಗಳ ಹಿಂದೆ ಫೇಸ್ಬುಕ್ನಲ್ಲಿ ‘ಫೈಟರ್ ರಾಜಪೂತ್’ ಎಂಬ ಹೆಸರಿನ ಹುಡುಗನೊಂದಿಗೆ ನನಗೆ ಸ್ನೇಹವಾಯಿತು. ಅವನು ತನ್ನ ಹೆಸರು ಸೋಹಿಲ್ ರಾಜಪೂತ್ ಎಂದು ಇಟ್ಟುಕೊಂಡು ತಾನು ಹಿಂದೂ ಎಂದು ಹೇಳಿದ್ದನು. ಜೂನ್ 21, 2025 ರಂದು, ಸೋಹಿಲ್ ಸುಳ್ಳು ಹೇಳಿ ಸಂತ್ರಸ್ತ ಯುವತಿಯನ್ನು ಕರ್ಣಾವತಿಗೆ ಕರೆದಿದ್ದಾನೆ. ಅಲ್ಲಿನ ಒಂದು ಹೋಟೆಲ್ನಲ್ಲಿ ಅವಳನ್ನು ಎರಡು ದಿನ ಇಟ್ಟುಕೊಂಡು, ಅಲ್ಲಿ ಆಕೆಯೊಂದಿಗೆ ದೈಹಿಕ ಸಂಬಂಧ ಇಟ್ಟುಕೊಂಡಿದ್ದಾನೆ.” ಎಂದು ತಿಳಿಸಿದ್ದಾಳೆ.
2. ನಂತರ ಸೋಹಿಲ್ ಅವಳನ್ನು ತನ್ನ ಮನೆಗೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ಅವನ ತಂದೆ-ತಾಯಿ, ಸಹೋದರ-ಸಹೋದರಿ ಮತ್ತು ಕೆಲವು ಸಂಬಂಧಿಕರು ಇದ್ದರು. ಆಗ ಸಂತ್ರಸ್ತ ಯುವತಿಗೆ ಅವನ ನಿಜವಾದ ಹೆಸರು ಸೋಹಿಲ್ ಖಾನ್ ಮತ್ತು ಅವನು ಮುಸ್ಲಿಂ ಎಂಬುದು ತಿಳಿದಿದೆ.
3. ಸೋಹಿಲ್ ಖಾನ್ ಮತ್ತು ಅವನ ಕುಟುಂಬದವರು ಅವಳ ಮೇಲೆ ಮತಾಂತರಕ್ಕಾಗಿ ಒತ್ತಡ ಹೇರಿದ್ದಾರೆ. ಬಲವಂತವಾಗಿ ಕಲ್ಮಾ ಓದಿಸಿ, ಅವಳ ಹೆಸರನ್ನು ಸನಾ ಫಾತಿಮಾ ಎಂದು ಬದಲಿಸಿದ್ದಾರೆ. ನಂತರ ಕುಟುಂಬದವರು ಸೋಹಿಲ್ನೊಂದಿಗೆ ಅವಳ ನಿಕಾಹ (ಮದುವೆ) ನಡೆಸಿದ್ದಾರೆ. ನಿಕಾಹದ ನಂತರ ಸಂತ್ರಸ್ತ ಯುವತಿಯನ್ನು ಮನೆಯಿಂದ ಹೊರ ಹೋಗಲು ಬಿಡುತ್ತಿರಲಿಲ್ಲ.
4. ಒಂದು ದಿನ ಸಂತ್ರಸ್ತ ಯುವತಿ ಅವಕಾಶ ಸಿಕ್ಕಾಗ ತನ್ನ ತಾಯಿ ಮತ್ತು ಸಹೋದರನೊಂದಿಗೆ ಸಂಪರ್ಕ ಸಾಧಿಸಿ ಎಲ್ಲ ಘಟನೆಯನ್ನು ತಿಳಿಸಿದ್ದಾಳೆ. ಅವರ ಸಹಾಯದಿಂದ ಆಗಸ್ಟ್ 9, 2025 ರಂದು ಪರದೆಶಿಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.
‘ಹಿಂದೂ ಯುವತಿಯರನ್ನು ಮೋಸ ಮಾಡುವುದೇ ನನ್ನ ಕೆಲಸ!’ – ಸೋಹಿಲ್ ಖಾನ್ಒಂದು ದಿನ ಸಂತ್ರಸ್ತ ಯುವತಿ ಸೋಹಿಲ್ನ ಮೊಬೈಲ್ ನೋಡಿದಾಗ, ಅವನು ಇತರ ಅನೇಕ ಯುವತಿಯರೊಂದಿಗೆ ಮಾತನಾಡುತ್ತಿದ್ದಾನೆ ಎಂದು ತಿಳಿದಿದೆ. ಇದರ ಬಗ್ಗೆ ಕೇಳಿದಾಗ, ಹಿಂದೂ ಯುವತಿಯರನ್ನು ಮೋಸ ಮಾಡುವುದು ತನ್ನ ಕೆಲಸ ಎಂದು ಅವನು ಹೇಳಿದ್ದಾನೆ. |
ಸಂಪಾದಕೀಯ ನಿಲುವುಮಧ್ಯಪ್ರದೇಶದಲ್ಲಿ ಹಿಂದುತ್ವನಿಷ್ಠ ಸರಕಾರವಿದ್ದರೂ ಇಂತಹ ಘಟನೆಗಳು ನಿರಂತರವಾಗಿ ನಡೆಯುತ್ತಿರುವುದು ಹಿಂದೂಗಳಿಗೆ ಅಪೇಕ್ಷಿತವಲ್ಲ. ಸರಕಾರ ಲವ್ ಜಿಹಾದಿಗಳಿಗೆ ತಕ್ಕ ಪಾಠ ಕಲಿಸಬೇಕು! |
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ