ಸೀತಾಪುರ (ಉತ್ತರ ಪ್ರದೇಶ): ಪತ್ರಕರ್ತ ರಾಘವೇಂದ್ರ ಕೊಲೆ ಆರೋಪಿಗಳಾದ ರಿಜ್ವಾನ್ ಮತ್ತು ಅಖಿಲ್ ಪೊಲೀಸ್ ಎನ್‌ಕೌಂಟರ್‌ನಲ್ಲಿ ಹತ

ಸೀತಾಪುರ (ಉತ್ತರ ಪ್ರದೇಶ) – ಸೀತಾಪುರ ಜಿಲ್ಲೆಯ ಪತ್ರಕರ್ತ ರಾಘವೇಂದ್ರ ಬಾಜಪೇಯಿ ಅವರ ಕೊಲೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ರಾಜು ತಿವಾರಿ ಉರ್ಫ್ ರಿಜ್ವಾನ್ ಮತ್ತು ಸಂಜಯ್ ತಿವಾರಿ ಉರ್ಫ್ ಅಖಿಲ್ ಖಾನ್ ಎಂಬ ಇಬ್ಬರು ಆರೋಪಿಗಳನ್ನು ಪೊಲೀಸರು ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಿದ್ದಾರೆ. ಇವರಿಬ್ಬರ ಮೇಲೆ ತಲಾ 1 ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿತ್ತು. ಈ ಇಬ್ಬರೂ ಆರೋಪಿಗಳು ಸಹೋದರರಾಗಿದ್ದು, ಅವರ ತಾಯಿ ಮುಸ್ಲಿಂ ಮತ್ತು ತಂದೆ ಹಿಂದೂ ಆಗಿದ್ದಾರೆ. ಅವರ ಬಳಿ ತಲಾ ಎರಡು ಆಧಾರ್ ಕಾರ್ಡ್‌ಗಳು ಪತ್ತೆಯಾಗಿವೆ.

ಮಾರ್ಚ್ 8, 2025ರಂದು ಪತ್ರಕರ್ತ ರಾಘವೇಂದ್ರ ಬಾಜಪೇಯಿ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಈ ಹತ್ಯೆಗಾಗಿ ಈ ಇಬ್ಬರಿಗೆ 4 ಲಕ್ಷ ರೂಪಾಯಿ ಸುಪಾರಿ ನೀಡಲಾಗಿತ್ತು.