ನವರಾತ್ರಿಯ ಸಮಯದಲ್ಲಿ ವಿಮಾನ ನಿಲ್ದಾಣಗಳ ಮೇಲೆ ಭಯೋತ್ಪಾದಕ ದಾಳಿಯ ಅಪಾಯ!

ನಾಗರಿಕ ವಿಮಾನಯಾನ ರಕ್ಷಣಾ ಇಲಾಖೆಯು ದೇಶದ ಎಲ್ಲಾ ವಿಮಾನ ನಿಲ್ದಾಣಗಳಿಗೆ ಎಚ್ಚರಿಕೆ ನೀಡಿದೆ

ನವದೆಹಲಿ – ನಾಗರಿಕ ವಿಮಾನಯಾನ ರಕ್ಷಣಾ ಇಲಾಖೆಯು ದೇಶದ ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ಭದ್ರತೆಯನ್ನು ಹೆಚ್ಚಿಸುವಂತೆ ಆದೇಶಿಸಿದೆ. ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 2, 2025 ರ ನವರಾತ್ರಿಯ ಅವಧಿಯಲ್ಲಿ ಪಾಕಿಸ್ತಾನದ ಭಯೋತ್ಪಾದಕ ಸಂಘಟನೆಯೊಂದರಿಂದ ವಿಮಾನ ನಿಲ್ದಾಣಗಳ ಮೇಲೆ ದಾಳಿ ನಡೆಸುವ ಅಪಾಯವಿದೆ ಎಂದು ಗುಪ್ತಚರ ಸಂಸ್ಥೆಗಳು ಮಾಹಿತಿ ನೀಡಿವೆ. ಈ ಹಿನ್ನೆಲೆಯಲ್ಲಿ, ಇಲಾಖೆಯು ಎಲ್ಲಾ ನಾಗರಿಕ ವಿಮಾನಯಾನ ಸೌಲಭ್ಯಗಳು, ವಿಮಾನ ನಿಲ್ದಾಣಗಳು, ಹೆಲಿಪ್ಯಾಡ್‌ ಗಳು, ಏರ್‌ ಫೀಲ್ಡ್‌ ಗಳು, ತರಬೇತಿ ಸಂಸ್ಥೆಗಳು, ವಿಮಾನಯಾನ ಕಂಪನಿಗಳು ಮತ್ತು ಸಂಬಂಧಿತ ಭದ್ರತಾ ಇಲಾಖೆಗಳಿಗೆ ಸೂಕ್ತ ಎಚ್ಚರಿಕೆ ವಹಿಸಲು ಸೂಚಿಸಿದೆ. ನವರಾತ್ರಿಯ ಅವಧಿಯಲ್ಲಿ ಪ್ರಯಾಣಿಕರು ನಿಗದಿತ ಸಮಯಕ್ಕಿಂತ ಮುಂಚಿತವಾಗಿ ವಿಮಾನ ನಿಲ್ದಾಣಕ್ಕೆ ತಲುಪುವಂತೆ ಆಡಳಿತ ಮಂಡಳಿ ಕರೆ ನೀಡಿದೆ.

ಸಂಪಾದಕೀಯ ನಿಲುವು

ಭಾರತದಿಂದ ಭಯೋತ್ಪಾದನೆಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕಾದರೆ, ಮೊದಲು ಭಯೋತ್ಪಾದನೆಯನ್ನು ಸೃಷ್ಟಿಸುವ ಪಾಕಿಸ್ತಾನದ ಬೆನ್ನನ್ನು ಮುರಿಯುವುದು ಅತ್ಯಂತ ಅವಶ್ಯಕವಾಗಿದೆ. ಇಸ್ರೇಲ್‌ ನ ನಿಷ್ಠುರತನವನ್ನು ಈಗ ಕೇವಲ ವಿದೇಶಾಂಗ ನೀತಿಗೆ ಸೀಮಿತಗೊಳಿಸದೆ, ಅದನ್ನು ಯುದ್ಧಭೂಮಿಯಲ್ಲಿಯೂ ಅಳವಡಿಸಿಕೊಳ್ಳುವುದು ಅವಶ್ಯಕವಾಗಿದೆ!