ಅನಧಿಕೃತ ದರ್ಗಾವನ್ನು 15 ದಿನಗಳೊಳಗೆ ತೆರವುಗೊಳಿಸದಿದ್ದರೆ, ಆ ಜಾಗದಲ್ಲಿ ಮಾರುತಿಯ ದೇವಸ್ಥಾನ ಕಟ್ಟುತ್ತೇವೆ!

  • ಭಾಜಪ ಶಾಸಕ ಯೋಗೇಶ ತಿಳೇಕರ ಅವರ ಎಚ್ಚರಿಕೆ

  • ಮುಕುಂದನಗರದ (ಪುಣೆ) ಅನಧಿಕೃತ ದರ್ಗಾವನ್ನು ತೆರವುಗೊಳಿಸಲು ಹಿಂದುತ್ವನಿಷ್ಠ ಸಂಘಟನೆಗಳ ಆಗ್ರಹ!

ಪುಣೆ – ಮುಕುಂದನಗರದಲ್ಲಿರುವ ಅನಧಿಕೃತ ‘ಹಜರತ್ ದಂ ದಂ ಶಾಹ್ ಆಲಿ ಬಾಬಾ ದರ್ಗಾ’ ಹೆಸರಿನಲ್ಲಿ ಫುಟ್‌ಪಾತ್ ಮೇಲೆ ನಡೆದಿರುವ ಒತ್ತುವರಿಯನ್ನು ತೆರವುಗೊಳಿಸಬೇಕೆಂದು ಹಿಂದುತ್ವನಿಷ್ಠ ಸಂಘಟನೆಗಳು ನಿರಂತರವಾಗಿ ಒತ್ತಾಯಿಸುತ್ತಿವೆ. ಈ ಬೇಡಿಕೆಗೆ ಬೆಂಬಲವಾಗಿ ಸಕಲ ಹಿಂದೂ ಸಮಾಜದ ವತಿಯಿಂದ ಆಗಸ್ಟ್ 2 ರಂದು ಪ್ರತಿಭಟನೆ ನಡೆಸಲಾಯಿತು. ಈ ಪ್ರತಿಭಟನೆಯಲ್ಲಿ ಭಾಜಪದ ಶಾಸಕ ಯೋಗೇಶ ತಿಳೇಕರ ಭಾಗವಹಿಸಿದ್ದರು. ಆರಂಭದಲ್ಲಿ ದರ್ಗಾದ ಜಾಗದಲ್ಲಿ ಪ್ರತಿಭಟನೆ ನಡೆಸಲು ಅವರು ಪ್ರಯತ್ನಿಸಿದರು; ಆದರೆ ಪೊಲೀಸರು ಅವರನ್ನು ಘಟನಾ ಸ್ಥಳಕ್ಕೆ ಬಿಡಲಿಲ್ಲ. ಆದ್ದರಿಂದ, ಅವರು ಲಕ್ಷ್ಮೀ ನಾರಾಯಣ ಚೌಕ್‌ನಲ್ಲಿ ಪ್ರತಿಭಟನೆ ನಡೆಸಿದರು. ‘ಅನಧಿಕೃತ ದರ್ಗಾವನ್ನು 15 ದಿನಗಳೊಳಗೆ ತೆರವುಗೊಳಿಸದಿದ್ದರೆ, ಅಲ್ಲಿ ಮಾರುತಿ ದೇವಸ್ಥಾನವನ್ನು ಕಟ್ಟಲಾಗುವುದು’ ಎಂದು ಶಾಸಕ ತಿಳೇಕರ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಎಚ್ಚರಿಕೆ ನೀಡಿದರು. ಪೊಲೀಸರು ಈ ಪ್ರತಿಭಟನೆಯನ್ನು ನಿಲ್ಲಿಸಲು ಪ್ರತಿಭಟನಾಕಾರರನ್ನು ಬಂಧಿಸಿದರು. (ಹಿಂದೂಗಳನ್ನು ಬಂಧಿಸುವ ಪೊಲೀಸರು ಮತಾಂಧರ ಮುಂದೆ ತಲೆಬಾಗುತ್ತಾರೆ! – ಸಂಪಾದಕರು) ದರ್ಗಾದ ಸುತ್ತಮುತ್ತಲಿನ ಎಲ್ಲಾ ರಸ್ತೆಗಳನ್ನು ತಡೆಗೋಡೆಗಳನ್ನು ಹಾಕಿ ಬಂದ್ ಮಾಡಲಾಗಿತ್ತು. ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು 7 ಪೊಲೀಸ್ ವಾಹನಗಳನ್ನು ನಿಯೋಜಿಸಲಾಗಿತ್ತು. ಸಕಲ ಹಿಂದೂ ಸಮಾಜದ ಪ್ರತಿಭಟನೆ ನಡೆಯುತ್ತಿದ್ದಾಗ, ಕೆಲವು ಮುಸ್ಲಿಂ ಮತ್ತು ದಲಿತ ಸಂಘಟನೆಗಳು ದರ್ಗಾದ ಕಡೆಯಿಂದಲೂ ಪ್ರತಿಭಟನೆ ನಡೆಸಿದವು.

ಸಂಪಾದಕೀಯ ನಿಲುವು

ಇಂತಹ ಎಚ್ಚರಿಕೆ ಏಕೆ ನೀಡಬೇಕಾಗುತ್ತದೆ? ಆಡಳಿತ ತಾನಾಗಿಯೇ ಕ್ರಮ ತೆಗೆದುಕೊಳ್ಳಲು ಏಕೆ ಬಯಸುವುದಿಲ್ಲ?