(ಮೊಸರು ಕುಡಿಕೆ ಒಡೆಯುವ ಗುಂಪಿನ ಸದಸ್ಯರನ್ನು ‘ಗೋವಿಂದ’ ಎನ್ನುತ್ತಾರೆ)

ಮುಂಬಯಿ – ಮಹಾರಾಷ್ಟ್ರದಲ್ಲಿ ಒಂದೂವರೆ ಲಕ್ಷ ಗೋವಿಂದರಿಗೆ ವಿಮೆ ಒದಗಿಸಲಾಗುವುದು. ಅದಕ್ಕಾಗಿ, ಪ್ರತಿಯೊಬ್ಬ ಗೋವಿಂದನಿಗೆ ‘ದಿ ಓರಿಯಂಟಲ್ ಇನ್ಶೂರೆನ್ಸ್’ ಸಂಸ್ಥೆಯು ವಿಮಾ ರಕ್ಷಣೆ ನೀಡಲು ಒಪ್ಪಿಕೊಂಡಿದೆ. ಈ ಪ್ರಕಾರ, ಮಹಾರಾಷ್ಟ್ರ ರಾಜ್ಯ ದಹಿಹಂಡಿ ಗೋವಿಂದ ಅಸೋಸಿಯೇಷನ್, ಅಂಧೇರಿ (ಪೂರ್ವ) ಸಂಸ್ಥೆಯೊಂದಿಗೆ ಸಮನ್ವಯ ಸಾಧಿಸಿ ವಿಮೆ ಮಾಡಿಸುವುದು ಮತ್ತು ವಿಮೆಯ ಅವಧಿಯನ್ನು ನಿರ್ಧರಿಸಲು ಕ್ರೀಡಾ ಮತ್ತು ಯುವ ಸೇವೆಗಳ ವಿಭಾಗದ ಮುಂಬಯಿ ಉಪನಿರ್ದೇಶಕರಿಗೆ ಅಧಿಕಾರ ನೀಡಲಾಗಿದೆ. ಕ್ರೀಡಾ ಅಭಿವೃದ್ಧಿ ನಿಧಿಯಿಂದ 1 ಕೋಟಿ 12 ಲಕ್ಷದ 50 ಸಾವಿರ ರೂಪಾಯಿಗಳ ನಿಧಿ ಒದಗಿಸಲಾಗುವುದು. ಈ ಪ್ರಕಾರ, ಕೂಡಲೇ ವಿಮೆ ಮಾಡಿಸಲು ಆದೇಶ ನೀಡಲಾಗಿದೆ. ದಹಿಹಂಡಿ ಆಡುವಾಗ 10 ರಿಂದ 12 ಕ್ಕಿಂತ ಹೆಚ್ಚು ಮಾನವ ಗೋಪುರಗಳನ್ನು ನಿರ್ಮಿಸಲಾಗುತ್ತದೆ. ಇದರಲ್ಲಿ ಅನೇಕ ಗೋವಿಂದರು ಗಾಯಗೊಳ್ಳುತ್ತಾರೆ. ಅವರ ಚಿಕಿತ್ಸೆಗಾಗಿ ಸರಕಾರ ಈ ವೆಚ್ಚವನ್ನು ಭರಿಸುತ್ತಿದೆ. ಕಳೆದ ವರ್ಷ 1 ಕೋಟಿ 25 ಲಕ್ಷ ಗೋವಿಂದರಿಗೆ ವಿಮಾ ರಕ್ಷಣೆ ಒದಗಿಸಲಾಗಿತ್ತು. ಈಗ ಹೆಚ್ಚುವರಿ 25 ಸಾವಿರ ಗೋವಿಂದರಿಗೆ ಈ ರಕ್ಷಣೆ ಸಿಗಲಿದೆ.
ಮಹಿಳಾ ಸದಸ್ಯರ ಸಮಿತಿಯ ಮೂಲಕ ಲೈಂಗಿಕ ಶೋಷಣೆ ವಿರೋಧಿ ಕಾಯ್ದೆಗಳ ಮರುಪರಿಶೀಲನೆ ನಡೆಸಬೇಕು!
ಯುರೋಪಿಯನ್ ದೇಶಗಳಂತೆ ಭಾರತದ ಮಕ್ಕಳಲ್ಲೂ ಸ್ಥೂಲಕಾಯದ ಅಪಾಯ ಹೆಚ್ಚುತ್ತಿದೆ!
ದೇವಸ್ಥಾನದ ಹಣವನ್ನು ಧಾರ್ಮಿಕ ಕಾರ್ಯಗಳಿಗಾಗಿಯೇ ಖರ್ಚು ಮಾಡುವ ತಮಿಳುನಾಡು ಸರಕಾರದ ನೀತಿಯನ್ನು ಟೀಕಿಸಿದ ಹಿಂದೂದ್ವೇಷಿ ಉದಯನಿಧಿ ಸ್ಟಾಲಿನ್
ಮುಂಬಯಿ ಲೋಕಲ್ ರೈಲಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಪ್ರಯಾಣಿಕನ ಹತ್ಯೆ; ಆರೋಪಿ ಬಂಧನ
ಮಹಾರಾಷ್ಟ್ರ : ಅಕೋಲಾ ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿ ಸಭಾಂಗಣಕ್ಕೆ ನೀಡಲಾದ ‘ಟಿಪ್ಪು ಸುಲ್ತಾನ್’ ಹೆಸರು ಅಕ್ರಮ!
ಮಹಾರಾಷ್ಟ್ರ : ದೇವಸ್ಥಾನ ಭೂಮಿಗೆ ಸಂಬಂಧಿಸಿದಂತೆ ಸರಕಾರಿ ದೇವಸ್ಥಾನ ಸಮಿತಿಯ ಮೊದಲ ಸಭೆ ಮುಕ್ತಾಯ!