malegav Blast : ಮಾಲೆಗಾಂವ್ ಬಾಂಬ್ ಸ್ಫೋಟದ ಘಟನಾವಳಿಗಳು

1. ಸೆಪ್ಟೆಂಬರ್ 29, 2008ರ : ಮಾಲೆಗಾಂವ್‌ನಲ್ಲಿ ದ್ವಿಚಕ್ರ ವಾಹನದಲ್ಲಿ ಬಾಂಬ್ ಸ್ಫೋಟ ಸಂಭವಿಸಿತು. ಈ ಘಟನೆಯಲ್ಲಿ ಒಟ್ಟು 7 ಜನರು ಸಾವನ್ನಪ್ಪಿದರು ಮತ್ತು 92 ಜನರು ಗಾಯಗೊಂಡರು.

2. ಅಂದಿನ ಮೈತ್ರಿ ಸರಕಾರವು ಈ ಪ್ರಕರಣದ ತನಿಖೆಯನ್ನು ಭಯೋತ್ಪಾದನಾ ನಿಗ್ರಹ ದಳಕ್ಕೆ (ATS) ಹಸ್ತಾಂತರಿಸುವುದಾಗಿ ಘೋಷಿಸಿತು. ಆಗಿನ ಎಟಿಎಸ್ ಮುಖ್ಯಸ್ಥ ಹೇಮಂತ್ ಕರ್ಕರೆ ಅವರು 2008ರ ಭಯೋತ್ಪಾದಕ ದಾಳಿಯಲ್ಲಿ ಸಾವನ್ನಪ್ಪಿದರು.

3. ಸ್ಫೋಟಕಗಳನ್ನು ಇರಿಸಲಾಗಿದ್ದ ದ್ವಿಚಕ್ರ ವಾಹನವು ಮಾಜಿ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಅವರಿಗೆ ಸೇರಿದ್ದರಿಂದ ಪೊಲೀಸರು ಅವರನ್ನು ಬಂಧಿಸಿದರು. ನಂತರದ ದಿನಗಳಲ್ಲಿ ಮಧ್ಯಪ್ರದೇಶ, ಮಹಾರಾಷ್ಟ್ರದ ಪುಣೆ ಮತ್ತು ನಾಸಿಕ್‌ನಿಂದ ಹಲವರನ್ನು ಬಂಧಿಸಲಾಯಿತು.

4. ಜನವರಿ 20, 2009ರ ರಂದು 14 ಜನರ ವಿರುದ್ಧ ಆರೋಪಪಟ್ಟಿ ಸಲ್ಲಿಸಲಾಯಿತು. ಇದರಲ್ಲಿ ‘ಮಕೋಕಾ’ (ಮಹಾರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ) ಕಲಂಗಳನ್ನು ಸಹ ಸೇರಿಸಲಾಗಿತ್ತು.

5. 2010ರಲ್ಲಿ, ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ (NIA) ಹಸ್ತಾಂತರಿಸಲಾಯಿತು.

6. 2017ರಲ್ಲಿ ವಿಶೇಷ ನ್ಯಾಯಾಲಯವು ‘ಮಕೋಕಾ’ವನ್ನು ರದ್ದುಗೊಳಿಸಲು ಅನುಮತಿ ನೀಡಿದ್ದರೂ, ಸಾಧ್ವಿ ಪ್ರಜ್ಞಾ ಸಿಂಗ್ ಮತ್ತು ಇತರ 6 ಜನರನ್ನು ದೋಷಮುಕ್ತಗೊಳಿಸಲು ಒಪ್ಪಲಿಲ್ಲ. ಅವರ ವಿರುದ್ಧ ಇತರ ಕಲಂಗಳು ಮತ್ತು ‘ಅನಧಿಕೃತ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯ್ದೆ’ ಅಡಿಯಲ್ಲಿ ವಿಚಾರಣೆ ಮುಂದುವರೆಯಿತು.

7. 2018ರ ಡಿಸೆಂಬರ್‌ನಲ್ಲಿ ಸಾಧ್ವಿ ಪ್ರಜ್ಞಾ ಸಿಂಗ್ ಸೇರಿದಂತೆ 7 ಪ್ರಮುಖ ಆರೋಪಿಗಳ ವಿರುದ್ಧ ವಿಚಾರಣೆ ಪ್ರಾರಂಭವಾಯಿತು. ವಿಚಾರಣೆಯಲ್ಲಿ ಒಟ್ಟು 323 ಸಾಕ್ಷಿಗಳು ಹಾಜರಾಗಿದ್ದರು, 34 ಸಾಕ್ಷಿಗಳನ್ನು ಬದಲಾಯಿಸಲಾಯಿತು ಮತ್ತು ಈ ಅವಧಿಯಲ್ಲಿ ಕೆಲವು ಸಾಕ್ಷಿಗಳು ಸಾವನ್ನಪ್ಪಿದರು.

8. ಒಟ್ಟು 323 ಸಾಕ್ಷಿಗಳನ್ನು ಪರಿಶೀಲಿಸಲಾಯಿತು, 34 ಸಾಕ್ಷಿಗಳು ಪರಿಶೀಲನೆಯ ಸಮಯದಲ್ಲಿ ಬದಲಾಯಿಸಲಾಯಿತು. ಬದಲಾದವರಲ್ಲಿ ಅನೇಕರು “ಭಯೋತ್ಪಾದನಾ ನಿಗ್ರಹ ದಳವು ಬಲವಂತವಾಗಿ ಹೇಳಿಕೆಗಳನ್ನು ಬರೆಸಿಕೊಂಡಿದೆ” ಎಂದು ನ್ಯಾಯಾಲಯಕ್ಕೆ ತಿಳಿಸಿದ್ದರು.

9. 17 ವರ್ಷಗಳ ನಂತರ, ಅಂದರೆ ಇದೇ ಜುಲೈ 31ರಂದು, ಈ ಪ್ರಕರಣದ ತೀರ್ಪು ಪ್ರಕಟವಾಯಿತು ಮತ್ತು ಅದರಲ್ಲಿ 7 ಆರೋಪಿಗಳು ನಿರಪರಾಧೀಗಳೆಂದು ಬಿಡುಗಡೆಯಾದರು.