
ಸುಲ್ತಾನಪುರ್ (ಉತ್ತರ ಪ್ರದೇಶ) – ಸಮರಥಪುರ ಗ್ರಾಮದ ಸರಕಾರಿ ಶಾಲೆಯ ದಲಿತ ಶಿಕ್ಷಕರೊಬ್ಬರು ಕಾವಡ ಯಾತ್ರೆ ಮತ್ತು ಶ್ರೀ ದುರ್ಗಾದೇವಿಯ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರಿಂದ, ಗ್ರಾಮಸ್ಥರು ಆಕ್ರೋಶಗೊಂಡು ಶಿಕ್ಷಕರನ್ನು ದೇವಸ್ಥಾನಕ್ಕೆ ಕರೆದೊಯ್ದು ಕ್ಷಮೆಯಾಚಿಸುವಂತೆ ಮತ್ತು ನೆಲಕ್ಕೆ ತಮ್ಮ ಮೂಗನ್ನು ತಿಕ್ಕುವಂತೆ ಒತ್ತಾಯಿಸಿದರು. ಈ ಘಟನೆಯ ಬಳಿಕ ಶಿಕ್ಷಣ ಇಲಾಖೆ ಶಿಕ್ಷರನ್ನು ಅಮಾನತುಗೊಳಿಸಿದೆ.
🚨 Hindu Hatred in Sultanpur Govt School!
👨🏫 Teacher Omprakash insulted Kanwar Yatra & Goddess Durga when a girl asked for leave
😡 Outraged villagers forced a public apology at the temple – he had to rub his nose in repentance
⛔ Now suspended, but…
❓What poison has he been… pic.twitter.com/IKkiY3EZmZ— Sanatan Prabhat (@SanatanPrabhat) July 27, 2025
1. ಜುಲೈ 17 ರಂದು, ಈ ಶಾಲೆಯ ವಿದ್ಯಾರ್ಥಿನಿಯೊಬ್ಬಳು ಶಿಕ್ಷಕ ಓಂಪ್ರಕಾಶ್ ಅವರ ಬಳಿ ಕಾವಡ ಯಾತ್ರೆಯಲ್ಲಿ ಭಾಗವಹಿಸಲು ಮತ್ತು ದುರ್ಗಾ ದೇವಸ್ಥಾನಕ್ಕೆ ಹೋಗಲು ರಜೆ ಕೇಳಿದ್ದಳು. ಆಗ ಓಂಪ್ರಕಾಶ್ ಅವರು ರಜೆ ನೀಡುವ ಬದಲು ಕಾವಡ ಯಾತ್ರೆ ಮತ್ತು ಶ್ರೀ ದುರ್ಗಾದೇವಿಯ ಬಗ್ಗೆ ಅಶ್ಲೀಲ ಮತ್ತು ಅವಮಾನಕಾರಿ ಟೀಕೆ ನೀಡಿದರು.
2. ಈ ವಿಷಯವನ್ನು ವಿದ್ಯಾರ್ಥಿನಿ ತನ್ನ ಪೋಷಕರಿಗೆ ತಿಳಿಸಿದಳು. ನಂತರ, ಈ ಸುದ್ದಿ ಗ್ರಾಮದಲ್ಲಿ ಹರಡಿತು. ಜುಲೈ 22 ರಂದು, ಆಕ್ರೋಶಗೊಂಡ ಗ್ರಾಮಸ್ಥರು ಶಿಕ್ಷಕ ಓಂಪ್ರಕಾಶ್ ಅವರನ್ನು ಬಲವಂತವಾಗಿ ಶಿವಮಂದಿರಕ್ಕೆ ಕರೆದೊಯ್ದು, ಸಾಷ್ಟಾಂಗ ನಮಸ್ಕಾರ ಮಾಡಿ ಕ್ಷಮೆಯಾಚಿಸುವಂತೆ ಮಾಡಿದರು. ಓಂಪ್ರಕಾಶ್ ದೇವಸ್ಥಾನದಲ್ಲಿ ಕ್ಷಮೆಯಾಚಿಸಿದರು. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
3. ಈ ಪ್ರಕರವು ಶಿಕ್ಷಣ ಇಲಾಖೆಗೆ ತಲುಪಿದ ನಂತರ, ಜಿಲ್ಲಾ ಶಿಕ್ಷಣಾಧಿಕಾರಿಗಳು ಓಂಪ್ರಕಾಶ್ ವಿರುದ್ಧ ತನಿಖೆ ಪ್ರಾರಂಭಿಸಿ, ಅಮಾನತು ಆದೇಶ ನೀಡಿದರು.
ಸಂಪಾದಕೀಯ ನಿಲುವುಇಂತಹ ಹಿಂದೂ ದ್ವೇಷಿ ಶಿಕ್ಷಕನು ಇಲ್ಲಿಯವರೆಗೂ ವಿದ್ಯಾರ್ಥಿಗಳಿಗೆ ಯಾವ ರೀತಿಯ ಪಾಠ ಹೇಳಿಕೊಟ್ಟಿರಬಹುದು ಎಂದು ಊಹಿಸಲು ಕೂಡಾ ಸಾಧ್ಯವಿಲ್ಲ. ಇಂತವರನ್ನು ಬಂಧಿಸಿ ಜೈಲಿಗೆ ತಳ್ಳಬೇಕು! |
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ