ಸುಲ್ತಾನಪುರ್ (ಉತ್ತರ ಪ್ರದೇಶ): ಸರಕಾರಿ ಶಾಲೆಯ ಶಿಕ್ಷಕರಿಂದ ಕಾವಡ್ ಯಾತ್ರೆಗೆ ಅವಮಾನ; ಒದ್ದೆಳೆದೊಯ್ದು ದೇವಸ್ಥಾನದಲ್ಲಿ ಕ್ಷಮೆಯಾಚಿಸುವಂತೆ ಮಾಡಿದ ಗ್ರಾಮಸ್ಥರು!

ಸುಲ್ತಾನಪುರ್ (ಉತ್ತರ ಪ್ರದೇಶ) – ಸಮರಥಪುರ ಗ್ರಾಮದ ಸರಕಾರಿ ಶಾಲೆಯ ದಲಿತ ಶಿಕ್ಷಕರೊಬ್ಬರು ಕಾವಡ ಯಾತ್ರೆ ಮತ್ತು ಶ್ರೀ ದುರ್ಗಾದೇವಿಯ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರಿಂದ, ಗ್ರಾಮಸ್ಥರು ಆಕ್ರೋಶಗೊಂಡು ಶಿಕ್ಷಕರನ್ನು ದೇವಸ್ಥಾನಕ್ಕೆ ಕರೆದೊಯ್ದು ಕ್ಷಮೆಯಾಚಿಸುವಂತೆ ಮತ್ತು ನೆಲಕ್ಕೆ ತಮ್ಮ ಮೂಗನ್ನು ತಿಕ್ಕುವಂತೆ ಒತ್ತಾಯಿಸಿದರು. ಈ ಘಟನೆಯ ಬಳಿಕ ಶಿಕ್ಷಣ ಇಲಾಖೆ ಶಿಕ್ಷರನ್ನು ಅಮಾನತುಗೊಳಿಸಿದೆ.

1. ಜುಲೈ 17 ರಂದು, ಈ ಶಾಲೆಯ ವಿದ್ಯಾರ್ಥಿನಿಯೊಬ್ಬಳು ಶಿಕ್ಷಕ ಓಂಪ್ರಕಾಶ್ ಅವರ ಬಳಿ ಕಾವಡ ಯಾತ್ರೆಯಲ್ಲಿ ಭಾಗವಹಿಸಲು ಮತ್ತು ದುರ್ಗಾ ದೇವಸ್ಥಾನಕ್ಕೆ ಹೋಗಲು ರಜೆ ಕೇಳಿದ್ದಳು. ಆಗ ಓಂಪ್ರಕಾಶ್ ಅವರು ರಜೆ ನೀಡುವ ಬದಲು ಕಾವಡ ಯಾತ್ರೆ ಮತ್ತು ಶ್ರೀ ದುರ್ಗಾದೇವಿಯ ಬಗ್ಗೆ ಅಶ್ಲೀಲ ಮತ್ತು ಅವಮಾನಕಾರಿ ಟೀಕೆ ನೀಡಿದರು.

2. ಈ ವಿಷಯವನ್ನು ವಿದ್ಯಾರ್ಥಿನಿ ತನ್ನ ಪೋಷಕರಿಗೆ ತಿಳಿಸಿದಳು. ನಂತರ, ಈ ಸುದ್ದಿ ಗ್ರಾಮದಲ್ಲಿ ಹರಡಿತು. ಜುಲೈ 22 ರಂದು, ಆಕ್ರೋಶಗೊಂಡ ಗ್ರಾಮಸ್ಥರು ಶಿಕ್ಷಕ ಓಂಪ್ರಕಾಶ್ ಅವರನ್ನು ಬಲವಂತವಾಗಿ ಶಿವಮಂದಿರಕ್ಕೆ ಕರೆದೊಯ್ದು, ಸಾಷ್ಟಾಂಗ ನಮಸ್ಕಾರ ಮಾಡಿ ಕ್ಷಮೆಯಾಚಿಸುವಂತೆ ಮಾಡಿದರು. ಓಂಪ್ರಕಾಶ್ ದೇವಸ್ಥಾನದಲ್ಲಿ ಕ್ಷಮೆಯಾಚಿಸಿದರು. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

3. ಈ ಪ್ರಕರವು ಶಿಕ್ಷಣ ಇಲಾಖೆಗೆ ತಲುಪಿದ ನಂತರ, ಜಿಲ್ಲಾ ಶಿಕ್ಷಣಾಧಿಕಾರಿಗಳು ಓಂಪ್ರಕಾಶ್ ವಿರುದ್ಧ ತನಿಖೆ ಪ್ರಾರಂಭಿಸಿ, ಅಮಾನತು ಆದೇಶ ನೀಡಿದರು.

ಸಂಪಾದಕೀಯ ನಿಲುವು

ಇಂತಹ ಹಿಂದೂ ದ್ವೇಷಿ ಶಿಕ್ಷಕನು ಇಲ್ಲಿಯವರೆಗೂ ವಿದ್ಯಾರ್ಥಿಗಳಿಗೆ ಯಾವ ರೀತಿಯ ಪಾಠ ಹೇಳಿಕೊಟ್ಟಿರಬಹುದು ಎಂದು ಊಹಿಸಲು ಕೂಡಾ ಸಾಧ್ಯವಿಲ್ಲ. ಇಂತವರನ್ನು ಬಂಧಿಸಿ ಜೈಲಿಗೆ ತಳ್ಳಬೇಕು!