ರಾಯಗಡ ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ದೇವಾಲಯಗಳಲ್ಲಿ ಕಳ್ಳತನ ಮಾಡಿದವರ ಬಂಧನ ! – Raigad Temple Theft Case

  • ಪೇಣ್ / ಪನವೇಲ್ – ಪೇಣ್ ಮತ್ತು ಪನವೇಲ್‌ನಲ್ಲಿ ವಿವಿಧ ದೇವಾಲಯಗಳಲ್ಲಿ ಕಳ್ಳತನ ಮಾಡಿದ ಇಬ್ಬರು ಆರೋಪಿಗಳನ್ನು ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಬಂಧಿಸಲಾಗಿದೆ.

  • ಪೇಣ್‌ನ ಸಾಯಿ ದೇವಾಲಯದಿಂದ ದೀಪ ಮತ್ತು ಗಂಟೆ ಕದ್ದವನ ಬಂಧನ !

ಪೇಣ್ – ಇಲ್ಲಿನ ಸಾಯಿ ದೇವಾಲಯದಲ್ಲಿ ದೀಪ ಮತ್ತು ಗಂಟೆ ಕಳ್ಳತನದ ಆರೋಪದ ಮೇಲೆ ದಾಖಲಾದ ಪ್ರಕರಣದ ನಂತರ, ಆರೋಪಿಯನ್ನು ಖಾರಪಾಡಾದಲ್ಲಿ ಎಸ್‌ಟಿ ಬಸ್‌ನಿಂದ ಬಂಧಿಸಲಾಯಿತು. ಪೇಣ್ ಸೇರಿದಂತೆ ರಾಯಗಡದ ಇತರ ದೇವಾಲಯಗಳಲ್ಲೂ ಕಳ್ಳತನ ಮಾಡಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ. ಮಹೇಶ ನಂದಕುಮಾರ ಚಾಯನಾಖವಾ ಎಂಬುದು ಆತನ ಹೆಸರಾಗಿದ್ದೂ. ಆತ ಇತ್ತೀಚೆಗೆ ಅಲಿಬಾಗ್ ಜೈಲಿನಿಂದ ಬಿಡುಗಡೆಯಾಗಿದ್ದ.

ವಿಚಾರಣೆ ವೇಳೆ ಪೇಣ್, ವಡಖಲ್, ರೋಹಾ, ದಾದರ ಸಾಗರಿ ಮತ್ತು ಕೋಲಾಡ್‌ನ ದೇವಾಲಯಗಳಿಂದ ದೀಪ ಮತ್ತು ಗಂಟೆಗಳನ್ನು ಕದ್ದಿರುವುದು ಬೆಳಕಿಗೆ ಬಂದಿದೆ. ನ್ಯಾಯಾಲಯವು ಜುಲೈ ೨೯ ರವರೆಗೆ ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.

ಪನವೇಲ್‌ನಲ್ಲಿ ೨ ದೇವಾಲಯಗಳಲ್ಲಿ ಕಳ್ಳತನ ಮಾಡಿದವನ ಬಂಧನ !

ಪನವೇಲ್ – ಇಲ್ಲಿನ ತಕ್ಕಾ ಗ್ರಾಮದ ಸಾಯಿ ದೇವಾಲಯ ಮತ್ತು ಚಿಂಚಪಾಡಾದ ವಿಠ್ಠಲ ದೇವಾಲಯಗಳಲ್ಲಿ ಕಳ್ಳತನ ಮಾಡಿದ ರಾಹುಲ ಮೋರೆ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಸಾಯಿಬಾಬಾ ದೇವಾಲಯದಿಂದ ೭ ಸಾವಿರ ರೂಪಾಯಿ ಮತ್ತು ವಿಠ್ಠಲ ದೇವಾಲಯದಿಂದ ೩೮ ಸಾವಿರ ರೂಪಾಯಿ ಮೌಲ್ಯದ ವಸ್ತುಗಳನ್ನು ಕದ್ದಿರುವುದಾಗಿ ಆತ ಹೇಳಿಕೊಂಡಿದ್ದಾನೆ. ಈ ಸಂಬಂಧ ಆತನ ವಿರುದ್ಧ ಪ್ರಕರಣ ದಾಖಲಾಗಿದೆ.

ಸಂಪಾದಕೀಯ ನಿಲುವು

ಅಸುರಕ್ಷಿತ ಹಿಂದೂ ದೇವಾಲಯಗಳು !