ಮುಂಬಯಿ ಉಚ್ಚ ನ್ಯಾಯಾಲಯವು ಗಾಜಾದಲ್ಲಿ ನಡೆಯುತ್ತಿರುವ ನರಮೇಧದ ವಿರುದ್ಧ ಪ್ರತಿಭಟನೆಗೆ ಅನುಮತಿ ಕೋರಿದ ಸಿಪಿಐ(ಎಂ) ಪಕ್ಷಕ್ಕೆ ಛೀಮಾರಿ ಹಾಕಿದೆ!

ಮುಂಬಯಿ – ಗಾಜಾದಲ್ಲಿ ನಡೆಯುತ್ತಿರುವ ನರಮೇಧದ ವಿರುದ್ಧ ಪ್ರತಿಭಟನೆಗೆ ಅನುಮತಿ ಕೋರಿದ ಸಿಪಿಐ(ಎಂ) (ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ವಾದಿ)) ಪಕ್ಷವನ್ನು ಮುಂಬಯಿ ಉಚ್ಚ ನ್ಯಾಯಾಲಯ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ದೇಶದಲ್ಲಿ ಅನೇಕ ಸಮಸ್ಯೆಗಳಿರುವಾಗ ನೂರಾರು ಕಿಲೋಮೀಟರ್ ದೂರದ ಸಮಸ್ಯೆಗೆ ಏಕೆ ಪ್ರತಿಭಟನೆ ಮಾಡುತ್ತಿದ್ದೀರಿ? ನಿಮ್ಮ ನಿಲುವು ದೇಶದ ವಿದೇಶಾಂಗ ನೀತಿಗೆ ವಿರುದ್ಧವಾಗಿದೆ. ದೇಶಭಕ್ತರಾಗಿ, ಎಂದು ಮುಂಬಯಿ ಉಚ್ಚ ನ್ಯಾಯಾಲಯವು ಸಿಪಿಐ(ಎಂ) ಪಕ್ಷಕ್ಕೆ ಛೀಮಾರಿ ಹಾಕಿದ್ದು, ಆ ಪಕ್ಷದ ಅರ್ಜಿಯನ್ನು ತಿರಸ್ಕರಿಸಿದೆ.
ಮುಂಬಯಿ ಪೊಲೀಸರು ಸಿಪಿಐ(ಎಂ) ಪ್ರತಿಭಟನೆಗೆ ಅನುಮತಿ ನಿರಾಕರಿಸಿದ ನಂತರ, ಅನುಮತಿ ಪಡೆಯಲು ಸಿಪಿಐ(ಎಂ) ಮುಂಬಯಿ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿತ್ತು. ಈ ವಿಷಯದ ಬಗ್ಗೆ ನ್ಯಾಯಾಲಯ ಹೀಗೆ ಹೇಳಿದೆ, “ನೀವು ದೇಶದಲ್ಲಿ ನೋಂದಾಯಿತ ಸಂಸ್ಥೆ. ನೀವು ಕಸ, ಮಾಲಿನ್ಯ, ಒಳಚರಂಡಿ, ಪ್ರವಾಹದ ಬಗ್ಗೆ ಏಕೆ ಪ್ರತಿಭಟಿಸುವುದಿಲ್ಲ? ದೇಶದಿಂದ ಸಾವಿರಾರು ಮೈಲುಗಳಷ್ಟು ದೂರದಲ್ಲಿ ನಡೆಯುವ ವಿಷಯಗಳ ಬಗ್ಗೆ ಪ್ರತಿಭಟಿಸಲು ಹೊರಟಿದ್ದೀರಿ. ದೇಶದ ವಿದೇಶಾಂಗ ನೀತಿಯು ನಿಮ್ಮ ನಿಲುವಿಗಿಂತ ಭಿನ್ನವಾಗಿದೆ. ನಿಮ್ಮ ಈ ನಿಲುವಿನಿಂದ ವಿವಾದಗಳು ಉಂಟಾಗಬಹುದು. ನೀವು ಇದನ್ನು ಏಕೆ ಮಾಡಲು ಬಯಸುತ್ತೀರಿ? ಇದು ದೇಶದ ವಿದೇಶಾಂಗ ವ್ಯವಹಾರಗಳ ಮೇಲೆ ಯಾವ ಪರಿಣಾಮ ಬೀರಬಹುದು ಎಂದು ನಿಮಗೆ ತಿಳಿದಿದೆಯೇ? ಗಾಜಾ ಮತ್ತು ಪ್ಯಾಲೆಸ್ಟೈನ್ ನಡುವಿನ ಸಮಸ್ಯೆಗಳನ್ನು ನೋಡುವ ಬದಲು, ನಿಮ್ಮ ಸ್ವಂತ ದೇಶದ ಬಗ್ಗೆ ಗಮನಹರಿಸಿ,” ಎಂದು ಹೇಳಿದೆ.
ಕೊಲಕಾತಾ: ಟಿಎಂಸಿ ವಿದ್ಯಾರ್ಥಿ ಸಂಘಟನೆಯ ಕಚೇರಿಯಲ್ಲಿ ಭಾರಿ ನಗದು ಪತ್ತೆ
ಕೊಲಕಾತಾ: ತೃಣಮೂಲ ಕಾಂಗ್ರೆಸ್ನ ಮೇಯರ್ ಫಿರ್ಹಾದ್ ಹಕೀಮ್ ಅವರ ರಾಜೀನಾಮೆ
ಪಂಚಕುಲಾ (ಹರಿಯಾಣ): ಮೇಯರ್ ಕಚೇರಿ ಸೇರಿದಂತೆ ಹರಿಯಾಣ ಮತ್ತು ದೆಹಲಿಯ ದೇವಸ್ಥಾನಗಳನ್ನು ಬಾಂಬ್ನಿಂದ ಸ್ಫೋಟಿಸುವುದಾಗಿ ಬೆದರಿಕೆ
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ