ಸುಪ್ರೀಂ ಕೋರ್ಟ್ಗೆ ಅಫಿಡವಿಟ್ ಸಲ್ಲಿಸಿಕೆ

ನವದೆಹಲಿ – ದೈಹಿಕ ಸಂಬಂಧಗಳಿಗೆ ಒಪ್ಪಿಗೆಯ ಕನಿಷ್ಠ ವಯಸ್ಸನ್ನು ೧೬ಕ್ಕೆ ಇಳಿಸಬೇಕೆಂಬ ಬೇಡಿಕೆಯನ್ನು ಕೇಂದ್ರ ಸರಕಾರ ವಿರೋಧಿಸಿದೆ. ದೈಹಿಕ ಸಂಬಂಧಗಳಿಗೆ ಒಪ್ಪಿಗೆಗಾಗಿ ಕನಿಷ್ಠ ವಯಸ್ಸನ್ನು ೧೮ ವರ್ಷಕ್ಕಿಂತ ಕಡಿಮೆ ಮಾಡಲು ಸಾಧ್ಯವಿಲ್ಲ ಎಂದು ಕೇಂದ್ರ ಸರಕಾರ ಅಫಿಡವಿಟ್ ಮೂಲಕ ಸುಪ್ರೀಂ ಕೋರ್ಟ್ಗೆ ತಿಳಿಸಿದೆ. ಈ ಬೇಡಿಕೆಯ ಬಗ್ಗೆ ದಾಖಲಾದ ಅರ್ಜಿಯ ಮೇರೆಗೆ ಸರಕಾರ ಈ ಅಫಿಡವಿಟ್ ಸಲ್ಲಿಸಿದೆ.
ಅಫಿಡವಿಟ್ನಲ್ಲಿ ಕೇಂದ್ರ ಸರಕಾರ ಹೇಳಿರುವ ಅಂಶಗಳು
೧. ಪ್ರಸ್ತುತದ ಕಾನೂನುಗಳು, ವಿಶೇಷವಾಗಿ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ ಮತ್ತು ಭಾರತೀಯ ನ್ಯಾಯ ಸಂಹಿತೆ, ಅಪ್ರಾಪ್ತ ಮಕ್ಕಳ ಹಿತಾಸಕ್ತಿಗಳನ್ನು ರಕ್ಷಿಸಲು ರಚಿಸಲಾಗಿದೆ. ೧೮ ವರ್ಷದೊಳಗಿನ ಮಕ್ಕಳನ್ನು ಲೈಂಗಿಕ ಶೋಷಣೆಯಿಂದ ರಕ್ಷಿಸಲು ಈ ವಯೋಮಿತಿ ಅವಶ್ಯಕ.
೨. ಪ್ರಸ್ತುತ ಇರುವ ವಯಸ್ಸಿನ ನಿಯಮಗಳು ಅಪ್ರಾಪ್ತ ಮಕ್ಕಳನ್ನು ಲೈಂಗಿಕ ಶೋಷಣೆಯಿಂದ, ವಿಶೇಷವಾಗಿ ಅವರ ಪರಿಚಯಸ್ಥರಿಂದ ನಡೆಯುವ ಅಪರಾಧಗಳಿಂದ ರಕ್ಷಿಸಲು ಇದೆ. ಅದೇ ಸಮಯದಲ್ಲಿ, ಯುವಕರ ನಡುವಿನ ಪ್ರೀತಿಯ ಸಂಬಂಧಗಳು ಮತ್ತು ಒಪ್ಪಿಗೆಯೊಂದಿಗೆ ದೈಹಿಕ ಸಂಬಂಧಗಳ ವಿಷಯಗಳಲ್ಲಿ ನ್ಯಾಯಾಲಯದ ವಿವೇಚನೆಯನ್ನು ಬಳಸಬಹುದು.
೩. ಭಾರತೀಯ ಕಾನೂನಿನ ಪ್ರಕಾರ, ೧೮ ವರ್ಷಗಳ ಒಪ್ಪಿಗೆಯ ವಯಸ್ಸು ಮಕ್ಕಳಿಗಾಗಿ ರಕ್ಷಣೆಯ ಚೌಕಟ್ಟನ್ನು ಸೃಷ್ಟಿಸುವ ಉದ್ದೇಶದಿಂದ ಚಿಂತನಶೀಲವಾಗಿ ತೆಗೆದುಕೊಂಡ ಕಾನೂನು ನಿರ್ಣಯವಾಗಿದೆ. ಭಾರತೀಯ ಸಂವಿಧಾನದ ಪ್ರಕಾರ ಮಕ್ಕಳಿಗೆ ನೀಡಿರುವ ರಕ್ಷಣೆಗಳನ್ನು ಗಮನದಲ್ಲಿಟ್ಟುಕೊಂಡು ವಯಸ್ಸಿನ ಮಿತಿಯನ್ನು ನಿಗದಿಪಡಿಸಲಾಗಿದೆ ಮತ್ತು ಅದನ್ನು ಸಡಿಲಗೊಳಿಸುವುದು ಮಕ್ಕಳ ರಕ್ಷಣಾ ಕಾನೂನುಗಳಲ್ಲಿ ದಶಕಗಳ ಪ್ರಗತಿಯನ್ನು ಹಿಮ್ಮೆಟ್ಟಿಸಿದಂತೆ.

೪. ೧೮ ವರ್ಷಕ್ಕಿಂತ ಕಡಿಮೆ ವಯಸ್ಸಿನ ವ್ಯಕ್ತಿಗಳು ಲೈಂಗಿಕ ಕೃತ್ಯಗಳಿಗೆ ಮಾನ್ಯ ಮತ್ತು ತಿಳುವಳಿಕೆಯ ಸಮ್ಮತಿಯನ್ನು ನೀಡಲು ಸಮರ್ಥರಾಗಿರುವುದಿಲ್ಲ. ಈ ವಯೋಮಿತಿಯಲ್ಲಿ ಕೆಲವು ಸಡಿಲಿಕೆ ನೀಡಿದರೆ, ಅದು ಕಾನೂನನ್ನು ದುರುಪಯೋಗಪಡಿಸಿಕೊಳ್ಳುವವರಿಗೆ, ಸಂತ್ರಸ್ತರ ಭಾವನಾತ್ಮಕ ಅವಲಂಬನೆ ಅಥವಾ ಮೌನದ ಲಾಭ ಪಡೆಯುವವರಿಗೆ ಒಂದು ಬಾಗಿಲು ತೆರೆದಂತೆ ಆಗುತ್ತದೆ.
ಕಳೆದ ೧೬೦ ವರ್ಷಗಳಲ್ಲಿ ಒಪ್ಪಿಗೆಯ ವಯಸ್ಸಿನ ನಿರ್ಧಾರಕ್ಕೆ ಸಂಬಂಧಿಸಿದ ಬದಲಾವಣೆಗಳು
ಸರಕಾರವು ಒಪ್ಪಿಗೆಯ ವಯಸ್ಸಿನಲ್ಲಿನ ಬದಲಾವಣೆಗಳನ್ನು ಉಲ್ಲೇಖಿಸಿ, ಭಾರತೀಯ ದಂಡ ಸಂಹಿತೆ, ೧೮೬೦ ರಲ್ಲಿ ದೈಹಿಕ ಸಂಬಂಧಕ್ಕಾಗಿ ಒಪ್ಪಿಗೆಯ ವಯಸ್ಸು ೧೦ ವರ್ಷಗಳಾಗಿತ್ತು ಎಂದು ಹೇಳಿದೆ. ನಂತರ, ೧೮೯೧ರ ಒಪ್ಪಿಗೆಯ ವಯಸ್ಸು ಕಾಯಿದೆಯಲ್ಲಿ ಅದನ್ನು ೧೨ ವರ್ಷಗಳಿಗೆ ಏರಿಸಲಾಯಿತು. ೧೯೨೫ ಮತ್ತು ೧೯೨೯ ರಲ್ಲಿ ಅದನ್ನು ೧೪ ವರ್ಷಗಳಿಗೆ ಮಾಡಲಾಯಿತು. ೧೯೪೦ರಲ್ಲಿ ಅದು ೧೬ ವರ್ಷಗಳಾಯಿತು ಮತ್ತು ಅಂತಿಮವಾಗಿ ೧೯೭೮ ರಲ್ಲಿ ಅದನ್ನು ೧೮ ವರ್ಷಗಳಿಗೆ ಏರಿಸಲಾಯಿತು, ಅದು ಈಗಲೂ ಜಾರಿಯಲ್ಲಿದೆ.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!