Kavad Yatra Egg Attack : ಕಾವಡ್ ಯಾತ್ರೆಯ ಮೇಲಿನ ಆಕ್ರಮಣದ ಕಿಡಿ ಮುಂಬಯಿ ವರೆಗೆ !

ಜೋಗೇಶ್ವರಿಯಲ್ಲಿ ಕಾವಡ್ ಯಾತ್ರೆಯ ಮೇಲೆ ಮೊಟ್ಟೆ ಎಸೆತ !

ಮುಂಬಯಿ – ವಿಶ್ವ ಹಿಂದೂ ಪರಿಷತ್ ಮತ್ತು ‘ಶ್ರೀ ಖಾಂಡೇಶ್ವರ ಮಹಾರಾಜ್ ಚಾರಿಟೇಬಲ್ ಟ್ರಸ್ಟ್’ ವತಿಯಿಂದ ಜೋಗೇಶ್ವರಿಯಲ್ಲಿ ಕಾವಡ್ ಯಾತ್ರೆ ನಡೆಸಲಾಯಿತು. ಜೋಗೇಶ್ವರಿ ಪಶ್ಚಿಮದ ಯಾದವನಗರದಲ್ಲಿರುವ ಹನುಮಾನ್ ದೇವಾಲಯದಿಂದ ಈ ಯಾತ್ರೆ ಪ್ರಾರಂಭವಾಯಿತು. 500 ಕ್ಕೂ ಹೆಚ್ಚು ಭಕ್ತರು ಭಾಗವಹಿಸಿದ್ದ ಈ ಯಾತ್ರೆಯಲ್ಲಿ ಮಹಿಳೆಯರೂ ದೊಡ್ಡ ಸಂಖ್ಯೆಯಲ್ಲಿ ಸೇರಿದ್ದರು. ಈ ಕಾವಡ್ ಯಾತ್ರೆಯ ಸಮಾರೋಪ ಖಾಂಡೇಶ್ವರ ದೇವಾಲಯದಲ್ಲಿ ನಡೆಯಬೇಕಿತ್ತು; ಆದರೆ ಜೋಗೇಶ್ವರಿಯ ಕ್ಯಾಪ್ಟನ್ ಸಾಮಂತ ಮಾರ್ಗದ ಎ.ಆರ್.ಬಿ. ಹೈಟ್ಸ್ ಕಟ್ಟಡದ ಎದುರಿನಿಂದ ಹಾದುಹೋಗುತ್ತಿದ್ದಾಗ, ಯಾತ್ರೆಯಲ್ಲಿದ್ದ ಮಹಿಳೆಯರ ಮೇಲೆ ಇದ್ದಕ್ಕಿದ್ದಂತೆ ಮೊಟ್ಟೆ ಎಸೆಯಲಾಯಿತು. ಇನ್ನೊಂದು ಮೊಟ್ಟೆ ಕಾರಿನ ಮೇಲೆ ಬಿದ್ದಿತು ಎಂದು ಆಯೋಜಕ ಗೋವಿಂದ ಬೆನವಂಶಿ ಹೇಳಿದ್ದಾರೆ. ಈ ವರ್ಷ ಯಾತ್ರೆಯ ಎರಡನೇ ವರ್ಷವಾಗಿದೆ; ಆದರೆ ಈ ವರ್ಷವೇ ಇಂತಹ ಘಟನೆ ನಡೆದಿದೆ ಎಂದು ಆಯೋಜಕರೊಬ್ಬರು ತಿಳಿಸಿದ್ದಾರೆ. ಈ ಪ್ರಕರಣದಲ್ಲಿ ಅಂಬೋಲಿ ಪೊಲೀಸ್ ಠಾಣೆಯಲ್ಲಿ ಧಾರ್ಮಿಕ ಭಾವನೆಗಳನ್ನು ಪ್ರಚೋದಿಸಿದ ಆರೋಪದಡಿ ಅಪರಿಚಿತ ವ್ಯಕ್ತಿಯ ವಿರುದ್ಧ ದೂರು ದಾಖಲಿಸಲಾಗಿದೆ.

… ಇಲ್ಲದಿದ್ದರೆ ರಸ್ತೆಗೆ ಇಳಿದು ಪ್ರತಿಭಟಿಸುತ್ತೇವೆ! – ಬಜರಂಗದಳದ ಎಚ್ಚರಿಕೆ

ಇಂತಹ ಘಟನೆಗಳು ಉದ್ದೇಶಪೂರ್ವಕವಾಗಿ ನಡೆಯುತ್ತಿವೆ. ಸಂಬಂಧಪಟ್ಟವರ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಭಕ್ತರು ಆಗ್ರಹಿಸಿದ್ದಾರೆ. ‘ಪೊಲೀಸರು ಕ್ರಮ ಕೈಗೊಳ್ಳದಿದ್ದರೆ ನಾವು ರಸ್ತೆಗೆ ಇಳಿದು ಪ್ರತಿಭಟಿಸಬೇಕಾಗುತ್ತದೆ’ ಎಂದು ಬಜರಂಗದಳ ಎಚ್ಚರಿಕೆ ನೀಡಿದೆ.

 

ಸಂಪಾದಕೀಯ ನಿಲುವು

  • ಉತ್ತರ ಪ್ರದೇಶ ಮತ್ತು ಉತ್ತರಾಖಂಡ ರಾಜ್ಯಗಳಲ್ಲಿ ನಡೆಯುತ್ತಿರುವ ಘಟನೆಗಳು ಈಗ ಮಹಾರಾಷ್ಟ್ರದಲ್ಲಿಯೂ ನಡೆಯುತ್ತಿರುವುದು ಪೊಲೀಸರಿಗೆ ನಾಚಿಕೆಗೇಡಿನ ಸಂಗತಿ!
  • ಹಿಂದೂಗಳು ಅತಿಸಹಿಷ್ಣುಗಳಾಗಿರುವುದರಿಂದ, ದುಷ್ಟ ಜನರು ಉದ್ದೇಶಪೂರ್ವಕವಾಗಿ ಇಂತಹ ಕೃತ್ಯಗಳನ್ನು ಎಸಗಿ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತಿದ್ದಾರೆ. ಇಂತಹವರನ್ನು ಪತ್ತೆ ಹಚ್ಚಿ ಜೀವಾವಧಿ ಶಿಕ್ಷೆಗೆ ಗುರಿಪಡಿಸಬೇಕು, ಇಲ್ಲದಿದ್ದರೆ ನಾಳೆ ಈ ಕಿಡಿ ಇಡೀ ರಾಜ್ಯಕ್ಕೆ ಹರಡುತ್ತದೆ!