Force Feed Calf Died : ಕರುವಿಗೆ ಬಲವಂತವಾಗಿ ಹಾಲುಣಿಸಿ ಅದರ ಸಾವಿಗೆ ಕಾರಣರಾದ 2 ನೌಕರರ ವಿರುದ್ಧ ಪ್ರಕರಣ ದಾಖಲು!

ಪಂಢರಪುರದ ಗೋಶಾಲೆಯಲ್ಲಿ ಕರು ಸಾವನ್ನಪ್ಪಿದ ಪ್ರಕರಣ!

ಸಾಂದರ್ಭಿಕ ಚಿತ್ರ

ಪಂಢರಪುರ – ಶ್ರೀ ವಿಠ್ಠಲ-ರುಕ್ಮಿಣಿ ದೇವಾಲಯ ಸಮಿತಿಯ ಗೋಶಾಲೆಯಲ್ಲಿನ ನೌಕರರಾದ ಯೋಗೇಶ ಸುಧಾಕರ ಪಾಠಕ್ ಮತ್ತು ತಾನಾಜಿ ರಾಮಚಂದ್ರ ಜಾಧವ್ ಅವರು 2 ದಿನದ ಕರುವಿಗೆ ಬಲವಂತವಾಗಿ ಹಾಲುಣಿಸಿದ್ದರು. ಇದರಿಂದ ಆ ಕರುವಿನ ಸಾವಾಗಿದೆ. ಹಾಗಾಗಿ, ಗೋಶಾಲೆ ವಿಭಾಗದ ಮುಖ್ಯಸ್ಥ ಪಾಂಡುರಂಗ ಬುರಾಂಡೆ ಅವರು ಆ ನೌಕರರನ್ನು ಹೊಣೆಗಾರರನ್ನಾಗಿ ಮಾಡಿ, ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಪಂಢರಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅವರು ನೀಡಿದ ದೂರಿನ ಆಧಾರದ ಮೇಲೆ, ಭಾರತೀಯ ನ್ಯಾಯ ಸಂಹಿತೆ 2023 ರ ಕಲಂ 325 ಮತ್ತು 3 (5) ರ ಅನ್ವಯ (ಅಡಿಯಲ್ಲಿ) ಇಬ್ಬರೂ ನೌಕರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಸಂಪಾದಕೀಯ ನಿಲುವು

  • ಕರುಣಿ ಇಲ್ಲದ ನೌಕರರ ವಿರುದ್ಧ ಕೇವಲ ಪ್ರಕರಣ ದಾಖಲಿಸಿ ಸುಮ್ಮನಾಗದೆ, ಅವರಿಗೆ ಕಠಿಣ ಶಿಕ್ಷೆ ನೀಡಬೇಕು!
  • ಇಂತಹ ತಪ್ಪುಗಳು ಇತರ ನೌಕರರಿಂದ ಆಗದಂತೆ ದೇವಾಲಯ ಸಮಿತಿಯು ನಿಗಾ ವಹಿಸುವುದು ಅವಶ್ಯಕವಾಗಿದೆ!