Fatal Blind Faith : ಕ್ರೈಸ್ತ ಪಾದ್ರಿಯು ಮಂತ್ರಿಸಿದ ನೀರು ಕುಡಿದ ಪರಿಣಾಮ ಜಾಂಡೀಸ್ ಇದ್ದ ಮಹಿಳೆ ಸಾವು!

ಕೋಪರ್‌ಗಾಂವ್ (ನಗರ ಜಿಲ್ಲೆ) – ಇಲ್ಲಿಯ ವನಿತಾ ವಿಶ್ವನಾಥ್ ಹರಕಳ್ ಅವರಿಗೆ ಜಾಂಡೀಸ್ ಇತ್ತು. ಅವರು ಚಿಕಿತ್ಸೆ ಪಡೆಯುತ್ತಿದ್ದರು; ಆದರೆ ಕೋಪರ್‌ಗಾಂವ್ ಸಮತಾನಗರ ಚರ್ಚ್‌ನ ಪಾದ್ರಿ ಚಂದ್ರಶೇಖರ್ ಗೌಡ ಅವರು, ಅವರಿಗೆ ಹೊರಗಿನ ಬಾಧೆಯಾಗಿದೆ, ಯಾವುದೇ ಕಾಯಿಲೆ ಇಲ್ಲ ಎಂದು ಹೇಳಿದರು. ಅವರಿಗೆ ಯಾವುದೇ ಔಷಧಿಗಳನ್ನು ಕೊಡಬೇಡಿ ಎಂದರು. ನಂತರ, ಪಾದ್ರಿ ಚಂದ್ರಶೇಖರ್ ಗೌಡ ಅವರು ತಮ್ಮಲ್ಲಿದ್ದ ಎಣ್ಣೆ ಮತ್ತು ಮಂತ್ರಿಸಿದ ನೀರನ್ನು ದಿನಕ್ಕೆ 3-4 ಬಾರಿ ವನಿತಾ ಅವರಿಗೆ ಕುಡಿಯಲು ನೀಡುವಂತೆ ಹೇಳಿದರು. ಕುಟುಂಬದವರು ವನಿತಾ ಅವರ ಔಷಧಿಗಳನ್ನು ನಿಲ್ಲಿಸಿ, ಪಾದ್ರಿ ನೀಡಿದ ಎಣ್ಣೆ ಮತ್ತು ನೀರನ್ನು ವನಿತಾ ಅವರ ಮೇಲೆ ಚಿಮುಕಿಸಿ, ಅವರಿಗೆ ಆ ನೀರನ್ನು ಕುಡಿಸುತ್ತಾ ಬಂದರು. ಸರಿಯಾದ ವೈದ್ಯಕೀಯ ಚಿಕಿತ್ಸೆ ಸಿಗದೆ ವನಿತಾ ಅವರ ಆರೋಗ್ಯ ಹದಗೆಟ್ಟು ಅವರು ಮೃತಪಟ್ಟರು. ಇದರ ನಂತರ, ವನಿತಾ ಅವರ ಸಾವಿಗೆ ಪಾದ್ರಿ ಚಂದ್ರಶೇಖರ್ ಗೌಡ ಅವರೇ ಕಾರಣ ಎಂದು ಅವರ ಸಹೋದರ ಸಂಜಯ ಪಂಢರೆ ಅವರು ಕೋಪರ್‌ಗಾಂವ್ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ಪ್ರಕರಣದಲ್ಲಿ ಚಂದ್ರಶೇಖರ್ ಗೌಡ ಅವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಸಂಪಾದಕೀಯ ನಿಲುವು

ಇಂತಹ ಪ್ರಕರಣಗಳಲ್ಲಿ ಹಿಂದೂದ್ವೇಷಿ ಅಂಧಶ್ರದ್ಧಾ ನಿರ್ಮೂಲನಾ ಸಮಿತಿ (ಅಂನಿಸ್) ಏಕೆ ಮೌನವಾಗಿರುತ್ತದೆ? ಹಿಂದೂ ಧರ್ಮದ ಸಂಪ್ರದಾಯಗಳನ್ನು ಮಾತ್ರ ಸುಳ್ಳು ಎಂದು ಹೇಳಲು ಪ್ರಯತ್ನಿಸುವ ಅಂನಿಸ್, ಇತರ ಧರ್ಮಗಳಲ್ಲಿನ ಜೀವಕ್ಕೆ ಅಪಾಯಕಾರಿಯಾದ ಅಂಧಶ್ರದ್ಧೆಗಳ ಬಗ್ಗೆ ತುಟಿಪಿಟಕ್ ಎನ್ನುವುದಿಲ್ಲ ಎಂಬುದನ್ನು ಗಮನಿಸಿ!