Madhu Bangarappa : ‘ದೇವಾಲಯದಲ್ಲಿ ಗಂಟೆ ಬಾರಿಸುವುದರಿಂದ ಏನು ಪ್ರಯೋಜನ? ಶಾಲೆಯ ಗಂಟೆ ಬಾರಿಸಬೇಕು!’

ರಾಜ್ಯದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಆಕ್ಷೇಪಾರ್ಹ ಹೇಳಿಕೆ

ಶಿಕ್ಷಣ ಸಚಿವ ಮಧು ಬಂಗಾರಪ್ಪ

ಕೊಪ್ಪಳ – ನಾನು ಯಾವುದೇ ದೇವಸ್ಥಾನಕ್ಕೆ ಹಣ ಕೊಡುವುದಿಲ್ಲ. ದೇವಸ್ಥಾನದಲ್ಲಿ ಗಂಟೆ ಬಾರಿಸುವುದರಿಂದ ಏನು ಪ್ರಯೋಜನ? ಅದಕ್ಕಿಂತ ಶಾಲೆಯ ಗಂಟೆ ಬಾರಿಸಬೇಕು ಎಂದು ಕಾಂಗ್ರೆಸ್ ಸರಕಾರದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ. ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಹಿರವಂಕಲಕುಂಟ ಗ್ರಾಮದಲ್ಲಿ ಬಾಲಕಿಯರ ಪ್ರೌಢಶಾಲೆಯ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.

ಮಧು ಬಂಗಾರಪ್ಪ ಮಾತು ಮುಂದುವರೆಸಿ, ಭಾಜಪ ಅವರು ‘ಹಿಂದುತ್ವ, ಹಿಂದುತ್ವ’ ಎನ್ನುತ್ತಾರೆ. ಅವರಿಗೆ ಹಿಂದುತ್ವ ಏನು ಗೊತ್ತು ಬದನೆ ಕಾಯಿ? ಅವರಿಗೆ ದೇವಾಲಯಗಳ ಅಭಿವೃದ್ಧಿ ಮಾಡಲು ಸಾಧ್ಯವಾಗಲಿಲ್ಲ ಎಂದರು.

ಸಂಪಾದಕೀಯ ನಿಲುವು

ಮದರಸಾಗಳಲ್ಲಿ ಧಾರ್ಮಿಕ ಶಿಕ್ಷಣ ನೀಡುವ ಬದಲು, ಮದರಸಾಗಳನ್ನು ಮುಚ್ಚಿ ಮುಸ್ಲಿಂ ಮಕ್ಕಳನ್ನು ಶಾಲೆಗಳಿಗೆ ಕಳುಹಿಸಿ” ಎಂಬಂತಹ ಹೇಳಿಕೆ ನೀಡುವ ಧೈರ್ಯ ಬಂಗಾರಪ್ಪ ಅವರಿಗೆ ಏಕೆ ಇಲ್ಲ?