Ministers Visit Sanatan Ashram : ವಿಧಾನಸಭಾ ಅಧ್ಯಕ್ಷ ವಕೀಲ ರಾಹುಲ ನಾರ್ವೇಕರ್ ಅವರಿಗೆ ‘ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಅಠವಲೆ ಅವರ ಸಂಕ್ಷಿಪ್ತ ಚರಿತ್ರೆ’ ಗ್ರಂಥ ಉಡುಗೊರೆ !

ಛಾಯಾಚಿತ್ರದಲ್ಲಿ ಎಡದಿಂದ ವಕೀಲ ರಾಹುಲ ನಾರ್ವೇಕರ್, ಶ್ರೀ. ಅಭಯ ವರ್ತಕ್, ಶಾಸಕ ಮಹೇಶ್ ಲಾಂಡ್ಗೆ ಮತ್ತು ಶ್ರೀ. ಅರವಿಂದ ಪಾನಸರೆ

ಮುಂಬಯಿ, ಜುಲೈ 8 (ವಾರ್ತೆ) – ಸನಾತನ ಸಂಸ್ಥೆಗೆ 25 ವರ್ಷ ಪೂರೈಸಿದ ನಿಮಿತ್ತ ಮತ್ತು ಸನಾತನ ಸಂಸ್ಥಾಪಕ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಅಠವಲೆ ಅವರ 83 ನೇ ಜನ್ಮದಿನದ ಅಂಗವಾಗಿ, ಇತ್ತೀಚೆಗೆ ಗೋವಾದಲ್ಲಿ ಸನಾತನ ಸಂಸ್ಥೆಯ ವತಿಯಿಂದ ಸನಾತನ ರಾಷ್ಟ್ರ ಶಂಖನಾದ ಮಹೋತ್ಸವವನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ನಡೆದ ಶತಚಂಡೀಯಜ್ಞ ಮತ್ತು ಮಹಾಧನ್ವಂತರಿ ಯಾಗದ ಪ್ರಸಾದವನ್ನು ಸನಾತನ ಸಂಸ್ಥೆಯ ವಕ್ತಾರ ಶ್ರೀ .ಅಭಯ ವರ್ತಕ್ ಅವರು ವಿಧಾನಸಭಾ ಅಧ್ಯಕ್ಷ ವಕೀಲ ರಾಹುಲ ನಾರ್ವೇಕರ್ ಅವರಿಗೆ ನೀಡಿದರು.

ಈ ವೇಳೆ, ಅಭಯ ವರ್ತಕ್ ಅವರು ವಕೀಲ ರಾಹುಲ ನಾರ್ವೇಕರ್ ಅವರಿಗೆ ಶ್ರೀ ಬಾಲಾಜಿಯ ಬೆಳ್ಳಿಯ ವಿಗ್ರಹ ಮತ್ತು ‘ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಅಠವಲೆ ಅವರ ಸಂಕ್ಷಿಪ್ತ ಚರಿತ್ರೆ’ ಎಂಬ ಗ್ರಂಥವನ್ನು ಉಡುಗೊರೆಯಾಗಿ ನೀಡಿದರು. ಈ ಸಂದರ್ಭದಲ್ಲಿ ಭಾಜಪ ಶಾಸಕ ಮಹೇಶ್ ಲಾಂಡ್ಗೆ ಮತ್ತು ದೈನಿಕ ‘ಸನಾತನ ಪ್ರಭಾತ’ ಪತ್ರಿಕೆಯ ಪ್ರತಿನಿಧಿ ಶ್ರೀ. ಅರವಿಂದ ಪನ್ಸಾರೆ ಉಪಸ್ಥಿತರಿದ್ದರು.