ಜಯಘೋಷದೊಂದಿಗೆ ಹಾರಾಡಿದ ಸನಾತನ ಧರ್ಮಧ್ವಜ !
೧೮ ಮೇ ೨೦೨೫ ರ ದಿನವು ಹಿಂದೂಗಳಿಗೆ ಸುವರ್ಣಾಕ್ಷರಗಳಲ್ಲಿ ಬರೆಯುವಂತಹ ದಿನವಾಗಿತ್ತು. ಈ ಶುಭದಿನದಂದು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರ ದಿವ್ಯಶಸ್ತದಿಂದ ಸನಾತನ ಧರ್ಮಧ್ವಜದ ಧ್ವಜಾರೋಹಣ ಮಾಡಲಾಯಿತು. ಈ ಸಮಯದಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರ ಆಧ್ಯಾತ್ಮಿಕ ಉತ್ತರಾಧಿಕಾರಿಗಳಾದ ಶ್ರೀಸತ್ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಮತ್ತು ಶ್ರೀಚಿತ್ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರೂ ಉಪಸ್ಥಿತರಿದ್ದರು. ಸಾವಿರಾರು ಸಾಧಕರು ಈ ದಿವ್ಯ ಕ್ಷಣವನ್ನು ಕಣ್ತುಂಬಿಕೊಂಡರು. ಧ್ವಜಾರೋಹಣದ ನಂತರ ‘ಸನಾತನ ಧರ್ಮಕ್ಕೆ ವಿಜಯವಾಗಲಿ !’, ‘ಜಯತು ಜಯತು ಹಿಂದೂರಾಷ್ಟ್ರಮ್ !’ ಎಂಬ ಅನೇಕ ಘೋಷಣೆಗಳು ಮುಗಿಲು ಮುಟ್ಟಿದವು. ಈ ಧ್ವಜದ ಮೇಲೆ ‘ಕಲ್ಪವೃಕ್ಷದ ಕೆಳಗೆ ಕಾಮಧೇನು ನಿಂತಿರುವ’ ಚಿತ್ರವಿದೆ. ಕಲ್ಪವೃಕ್ಷ ಮತ್ತು ಕಾಮಧೇನು ಇವೆರಡೂ ‘ಸಮೃದ್ಧಿ, ಪಾಲನೆ-ಪೋಷಣೆ, ಸಂರಕ್ಷಣೆ ಮತ್ತು ಶ್ರೀವಿಷ್ಣುವಿನ ಅಭಯ ವರದಹಸ್ತ’ದ ಪ್ರತೀಕಗಳಾಗಿವೆ.
ಬಾನೆತ್ತರಕ್ಕೆ ಹಾರಿದ ಧ್ವಜವಿದು ಸನಾತನ ಧರ್ಮದ |
ಇದುವೇ ಹಿಂದೂಗಳ ಒಗ್ಗಟ್ಟಿನ ಶಂಖನಾದ ||
ಸನಾತನ ಧರ್ಮಕ್ಕೆ ವಿಜಯವಾಗಲಿ !


ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಯಜ್ಞಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !
ಯಜ್ಞಸಂಸ್ಕೃತಿಯ ಸಂವರ್ಧನೆ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೃಷ್ಟಿಕೋನ !
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿಯೇ ಯಜ್ಞಸಮಾರಂಭ ಮತ್ತು ಸಮಷ್ಟಿ ಧರ್ಮಪ್ರಸಾರ !
೧೨ ಜ್ಯೋತಿರ್ಲಿಂಗಗಳಲ್ಲಿ ಪ್ರಥಮವಾಗಿರುವ ಮೂಲ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಸಮರ್ಪಣೆ !
ಯಜ್ಞಗಳನ್ನು ಆಯೋಜಿಸುವಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ವ್ಯಾಪಕ ಉದ್ದೇಶ !