ಮಹಾರಾಷ್ಟ್ರ : ಅಕೋಲಾ ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿ ಸಭಾಂಗಣಕ್ಕೆ ನೀಡಲಾದ ‘ಟಿಪ್ಪು ಸುಲ್ತಾನ್’ ಹೆಸರು ಅಕ್ರಮ!

  • ಹಿಂದುತ್ವನಿಷ್ಠ ಶ್ರೀ. ಉದಯ ಮಹಾ ಅವರಿಂದ ಆಡಳಿತ ಮಂಡಳಿಗೆ ನೋಟಿಸ್!

  • ‘ಛತ್ರಪತಿ ಸಂಭಾಜಿ ಮಹಾರಾಜ್ ಸಭಾಂಗಣ’ ಎಂದು ಹೆಸರಿಡಲು ಆಗ್ರಹ!

ಅಕೋಲಾ – ಅಕೋಲಾ ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿ ಸಭಾಂಗಣಕ್ಕೆ ‘ಶಹೀದೇ ವತನ್ ಹಜರತ್ ಟಿಪ್ಪು ಸುಲ್ತಾನ್ ಸಭಾಂಗಣ’ ಎಂದು ಇಟ್ಟಿರುವ ಹೆಸರು ಸಂಪೂರ್ಣವಾಗಿ ಕಾನೂನುಬಾಹಿರ ಮತ್ತು ಸರಕಾರಿ ನಿಯಮಗಳ ಉಲ್ಲಂಘನೆಯಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಲಿಕೆ ಆಡಳಿತ ಮಂಡಳಿಗೆ ಕಾನೂನು ನೋಟಿಸ್ ಜಾರಿ ಮಾಡಲಾಗಿದೆ. ಅಕೋಲಾದ ಹಿಂದುತ್ವನಿಷ್ಠ ಶ್ರೀ. ಉದಯ ಮಹಾ (೬೪ ವರ್ಷ) ಅವರು ತಮ್ಮ ವಕೀಲರಾದ ಮುಕುಂದ ಜಾಲನೇಕರ್ ಅವರ ಮೂಲಕ ಪಾಲಿಕೆ ಆಯುಕ್ತರು, ಮೇಯರ್ ಮತ್ತು ಸಭಾಪತಿಗಳಿಗೆ ಈ ನೋಟಿಸ್ ಕಳುಹಿಸಿದ್ದಾರೆ. ‘ಒಂದು ವೇಳೆ ಈ ಕಾನೂನುಬಾಹಿರ ಹೆಸರನ್ನು ತೆಗೆದುಹಾಕದಿದ್ದರೆ, ಸಂಬಂಧಿತ ನಿಯಮಗಳನ್ನು ಉಲ್ಲಂಘಿಸಿದವರ ವಿರುದ್ಧ ನೇರವಾಗಿ ನ್ಯಾಯಾಲಯದಲ್ಲಿ ಕಾನೂನು ಹೋರಾಟ ನಡೆಸಲಾಗುವುದು’ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.

ನೋಟಿಸ್‌ನಲ್ಲಿ,

೧. ಸರಕಾರವು ಮಹಾಪುರುಷರ ಅಧಿಕೃತ ಪಟ್ಟಿಯೊಂದನ್ನು ಪ್ರಕಟಿಸಿದೆ. ಸರಕಾರಿ ನೀತಿಯ ಪ್ರಕಾರ, ಅದೇ ಪಟ್ಟಿಯಲ್ಲಿರುವ ಹೆಸರುಗಳನ್ನು ಸರಕಾರಿ ಕಟ್ಟಡಗಳಿಗೆ ಅಥವಾ ಸಭಾಂಗಣಗಳಿಗೆ ಇಡುವುದು ಕಡ್ಡಾಯವಾಗಿದೆ.

೨. ಈ ಪಟ್ಟಿಯಲ್ಲಿ ಎಲ್ಲಿಯೂ ‘ಟಿಪ್ಪು ಸುಲ್ತಾನ್’ ಹೆಸರನ್ನು ಸೇರಿಸಲಾಗಿಲ್ಲ. ಆದ್ದರಿಂದ ಸಭಾಂಗಣಕ್ಕೆ ಅಂತಹ ಹೆಸರನ್ನು ಇಡುವುದು ಸರಕಾರಿ ಮತ್ತು ಆಡಳಿತಾತ್ಮಕ ಆದೇಶಗಳ ನೇರ ಉಲ್ಲಂಘನೆಯಾಗಿದೆ. ಈ ಕ್ರಮವು ಸಂಪೂರ್ಣವಾಗಿ ಕಾನೂನುಬಾಹಿರವಾಗಿದೆ.

೩. ಈ ಪಟ್ಟಿಯಲ್ಲಿ ‘ಛತ್ರಪತಿ ಸಂಭಾಜಿ ಮಹಾರಾಜ್’ ಅವರ ಹೆಸರಿದೆ. ಮಹಾನಗರ ಪಾಲಿಕೆಯು ನೀಡಿರುವ ಸಮಯದ ಮಿತಿಯೊಳಗೆ ಟಿಪ್ಪು ಸುಲ್ತಾನ್ ಅವರ ಕಾನೂನುಬಾಹಿರ ಹೆಸರನ್ನು ತೆಗೆದುಹಾಕಿ, ಅಧಿಕೃತ ಪಟ್ಟಿಯ ಪ್ರಕಾರ ‘ಛತ್ರಪತಿ ಸಂಭಾಜಿ ಮಹಾರಾಜ್ ಸಭಾಂಗಣ’ ಎಂದು ಹೆಸರಿಡಬೇಕು.

ಸಂಪಾದಕೀಯ ನಿಲುವು

  • ಇಂತಹ ಜಾಗೃತ ಮತ್ತು ತತ್ಪರ ಹಿಂದುತ್ವನಿಷ್ಠರು ಎಲ್ಲೆಡೆ ಇರಬೇಕು!
  • ರಾಜ್ಯದಲ್ಲಿ ರಸ್ತೆಗಳಿಗೆ ಅಥವಾ ಇತರ ಸ್ಥಳಗಳಿಗೆ ಮೊಘಲ್ ಆಕ್ರಮಣಕಾರರ ಹೆಸರನ್ನು ಇಟ್ಟಿದ್ದರೆ, ಅವುಗಳನ್ನು ಸಹ ತಕ್ಷಣವೇ ಬದಲಾಯಿಸಬೇಕು!