ಮುಂಬಯಿ ಲೋಕಲ್ ರೈಲಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಪ್ರಯಾಣಿಕನ ಹತ್ಯೆ; ಆರೋಪಿ ಬಂಧನ

ಮುಂಬಯಿ – ಮಳೆಯ ನೀರು ಒಳಗೆ ಬರುತ್ತಿದ್ದ ಕಾರಣ ಲೋಕಲ್ ರೈಲಿನ ಬಾಗಿಲು ಮುಚ್ಚುವ ವಿಷಯದಲ್ಲಿ ನಡೆದ ಜಗಳದಲ್ಲಿ, ರೋಶನ್ ಸುವರ್ಣ ಎಂಬ ವ್ಯಕ್ತಿಯು ಮಯಂಕ್ ಲೋಹಾರ್ (ವಯಸ್ಸು 22 ವರ್ಷ) ಎಂಬ ಯುವಕನ ಹತ್ಯೆ ಮಾಡಿದ್ದಾನೆ. ಈ ಪ್ರಕರಣದಲ್ಲಿ ಪೊಲೀಸರು ರೋಶನ್ ಸುವರ್ಣನನ್ನು ಕುರ್ಲಾದಿಂದ ಬಂಧಿಸಿದ್ದಾರೆ. (ಇಂತಹವರನ್ನು ಜೀವಾವಧಿ ಜೈಲಿನಲ್ಲಿ ಇಡಬೇಕು! – ಸಂಪಾದಕರು) ಹತ್ಯೆಯ ಘಟನೆ ರಾತ್ರಿಯ ವೇಳೆ ನಡೆಯಿತು. ರೋಶನ್ ತನ್ನ ಬ್ಯಾಗ್‌ನಿಂದ ಹರಿತವಾದ ಆಯುಧವನ್ನು ತೆಗೆದು ಮಯಂಕ್‌ನನ್ನು ಹತ್ಯೆಗೈದಿದ್ದಾನೆ. ಆಘಾತಕಾರಿ ವಿಷಯವೆಂದರೆ, ಹತ್ಯೆಯ ನಂತರ ಈ ಆರೋಪಿಯು ಯಾವುದೇ ಭಯವಿಲ್ಲದೆ ಲೋಕಲ್ ರೈಲಿನಿಂದ ಇಳಿದು ಅಡ್ಡಾಡುತ್ತಿದ್ದನು. ಅವನ ಮುಖದಲ್ಲಿ ಯಾವುದೇ ಪಶ್ಚಾತ್ತಾಪವಿರಲಿಲ್ಲ.

ಸಂಪಾದಕೀಯ ನಿಲುವು

ನಾಗರಿಕರಲ್ಲಿ ತಾಳ್ಮೆಯ ಕೊರತೆ ಮತ್ತು ಹೆಚ್ಚುತ್ತಿರುವ ಹಿಂಸಾತ್ಮಕ ಮನೋವೃತ್ತಿಯಿಂದಲೇ ಇಂತಹ ಘಟನೆಗಳು ನಡೆಯುತ್ತಿವೆ!