ಗುಜರಾತ ಹೈಕೋರ್ಟ್ನಲ್ಲಿ ವಕೀಲರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ

ಕರ್ಣಾವತಿ (ಗುಜರಾತ) – ಆನ್ಲೈನ್ ವಿಚಾರಣೆಯ ಸಮಯದಲ್ಲಿ ಹಿರಿಯ ವಕೀಲ ಭಾಸ್ಕರ್ ತನ್ನಾ ಬಿಯರ್ ಕುಡಿಯುತ್ತಿರುವುದು ಕಂಡುಬಂದ ಪ್ರಕರಣದಲ್ಲಿ, ಗುಜರಾತ ಹೈಕೋರ್ಟ್ ಅವರ ವಿರುದ್ಧ ನ್ಯಾಯಾಂಗ ನಿಂದನೆ ಆರೋಪದ ಮೇಲೆ ಕ್ರಮ ಕೈಗೊಂಡಿದೆ. ಈ ಘಟನೆ ಜೂನ್ 26 ರಂದು ನಡೆದಿದ್ದು, ಇದರ ವಿಡಿಯೋ ಈಗ ಹೊರಬಿದ್ದ ನಂತರ ಕ್ರಮ ಕೈಗೊಳ್ಳಲಾಗಿದೆ. ಈ ಕ್ರಮದ ಅವಧಿಯಲ್ಲಿ, ತನ್ನಾ ಅವರು ಆನ್ಲೈನ್ ಮೂಲಕ ನ್ಯಾಯಾಲಯದ ಮುಂದೆ ಹಾಜರಾಗದಂತೆ ನ್ಯಾಯಾಲಯ ಆದೇಶಿಸಿದೆ.
ನ್ಯಾಯಾಲಯವು, ಇಂತಹ ಕೃತ್ಯಗಳು ಹೊಸ ವಕೀಲರ ಮೇಲೆ ಪರಿಣಾಮ ಬೀರುತ್ತವೆ; ಏಕೆಂದರೆ ಅವರು ಹಿರಿಯ ವಕೀಲರನ್ನು ಆದರ್ಶಪ್ರಾಯವಾಗಿ ಕಾಣುತ್ತಾರೆ ಎಂದು ಹೇಳಿದೆ. ಭಾಸ್ಕರ್ ತನ್ನಾ ಅವರ ನಡವಳಿಕೆಯು ಅವರಿಗೆ ಹಿರಿಯ ವಕೀಲರಾಗಿ ನೀಡಲಾದ ವಿಶೇಷಾಧಿಕಾರಗಳನ್ನು ಅಪವಿತ್ರಗೊಳಿಸುತ್ತದೆ. ಅವರಿಗೆ ನೀಡಲಾದ ‘ಹಿರಿಯ ವಕೀಲ’ ಹುದ್ದೆಯ ಮರುಪರಿಶೀಲನೆ ಅಗತ್ಯವಿದೆ ಎಂದು ಕೋರ್ಟ್ ನುಡಿದಿದೆ.
ಸಂಪಾದಕೀಯ ನಿಲುವುಇಂತಹ ವಕೀಲರ ಪರವಾನಗಿಯನ್ನು ರದ್ದುಗೊಳಿಸುವುದು ಆವಶ್ಯಕ! |
ಅಂಬರನಾಥದಲ್ಲಿ ಕಸದ ರಾಶಿಯಲ್ಲಿ ಗೋವಂಶದ ಅವಶೇಷಗಳು ಪತ್ತೆ!
ಬೆಂಗಳೂರಿನ 97 ಲಕ್ಷ ಮತದಾರರಲ್ಲಿ 3.5–4 ಲಕ್ಷ ಮತದಾರರು ಅಸಿಂಧು ಮತದಾರರಾಗಿರಬಹುದು!”
ಕೋರ್ಟ್ ಆದೇಶ: ಕಾಶಿಯಲ್ಲಿ ರೈಲ್ವೆ ಜಾಗದ ಮಸೀದಿ ತೆರವು
ಭಾವಪೂರ್ಣ ಧಾರ್ಮಿಕ ವಿಧಿಗಳೊಂದಿಗೆ ಸಂಪನ್ನಗೊಂಡ ಶ್ರೀ ರಾಜಮಾತಂಗಿ ಮಹಾಯಜ್ಞ !
ಪ್ರಬಲ ಪ್ರತಾಪ ಸಿಂಗ ಜುದೇವ ಅವರಿಗೆ ಪ್ರತಿಷ್ಠಿತ ‘ಹಿಂದೂ ಕೇಸರಿ’ ಪ್ರಶಸ್ತಿ ನೀಡಿ ಗೌರವ!
ದೆಹಲಿಯ ಹೋಟೆಲ್ ನಲ್ಲಿ ಭೀಕರ ಅಗ್ನಿ ದುರಂತ: 21 ಜನರ ಸಾವು