ತುಂಡು ಮತ್ತು ದೇಹ ಪ್ರದರ್ಶಿಸುವ ಬಟ್ಟೆಗಳನ್ನು ಧರಿಸಿ ಬಂದರೆ ಪ್ರವೇಶ ನಿಷಿದ್ಧ!
(ವಸ್ತ್ರ ಸಂಹಿತೆ ಎಂದರೆ ದೇವಸ್ಥಾನ ಪ್ರವೇಶಿಸುವಾಗ ಧರಿಸಬೇಕಾದ ಉಡುಪುಗಳ ನಿಯಮಗಳು)

ಕಾರ್ಲಾ (ತಾ. ಮಾವಳ್, ಜಿಲ್ಲೆ ಪುಣೆ) – ಇಲ್ಲಿನ ಶ್ರೀ ಎಕವೀರಾ ದೇವಸ್ಥಾನ ಟ್ರಸ್ಟ್, ಆಯಿ(ಅಮ್ಮ) ಶ್ರೀ ಎಕವೀರಾ ದೇವಿ ದರ್ಶನಕ್ಕೆ ಬರುವ ಭಕ್ತರಿಗಾಗಿ ವಸ್ತ್ರ ಸಂಹಿತೆಯನ್ನು ಜಾರಿಗೊಳಿಸಲು ನಿರ್ಧರಿಸಿದೆ. ಲಕ್ಷಾಂತರ ಭಕ್ತರ ಶ್ರದ್ಧಾ ಕೇಂದ್ರ ಹಾಗೂ ಆಗರಿ ಮತ್ತು ಕೋಳಿ ಸಮಾಜದ ಕುಲದೇವತೆ ಆಗಿರುವ ಕುಲಸ್ವಾಮಿನಿ ಅಮ್ಮ ಎಕವೀರಾ ದೇವಿ ಮಂದಿರಕ್ಕೆ ಬರುವ ಭಕ್ತರಿಗಾಗಿ, ಅಂದರೆ ಮಹಿಳೆಯರು ಮತ್ತು ಪುರುಷರಿಗಾಗಿ ಜುಲೈ 7 ರಿಂದ ಈ ವಸ್ತ್ರ ನಿಯಮಾವಳಿ ಅನ್ವಯವಾಗಲಿದೆ. ವ್ಯಾಪಾರಿಗಳು ಮತ್ತು ಸ್ಥಳೀಯರಿಗೂ ಈ ನಿಯಮ ಅನ್ವಯವಾಗುತ್ತದೆ.

‘ಈ ನಿರ್ಧಾರದ ಪ್ರಕಾರ ದೇವಸ್ಥಾನಕ್ಕೆ ಬರುವ ಭಕ್ತರು ಭಾರತೀಯ ಸಾಂಪ್ರದಾಯಿಕ ಉಡುಗೆಗಳನ್ನು ಧರಿಸಬೇಕು. ತುಂಡು ಮತ್ತು ದೇಹ ಪ್ರದರ್ಶಿಸುವ ಬಟ್ಟೆಗಳನ್ನು ಧರಿಸಿ ಬಂದರೆ ಭಕ್ತರಿಗೆ ದೇವಸ್ಥಾನದಲ್ಲಿ ಪ್ರವೇಶ ನೀಡುವುದಿಲ್ಲ’ ಎಂದು ದೇವಸ್ಥಾನದಿಂದ ಸ್ಪಷ್ಟಪಡಿಸಲಾಗಿದೆ. ಜೂನ್ 27 ರಂದು ದೇವಸ್ಥಾನ ಟ್ರಸ್ಟ್ನ ಈ ಕುರಿತು ಸಭೆ ನಡೆಯಿತು. ಅದರಲ್ಲಿ ಎಲ್ಲಾ ಸದಸ್ಯರ ಸರ್ವಾನುಮತದಿಂದ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ದೇವಸ್ಥಾನದ ಧಾರ್ಮಿಕ ವಾತಾವರಣದ ಪವಿತ್ರತೆಯನ್ನು ಕಾಪಾಡಲು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಟ್ರಸ್ಟ್ನ ಪರವಾಗಿ ತಿಳಿಸಲಾಗಿದೆ.
ಸಂಪಾದಕೀಯ ನಿಲುವುಶ್ರೀ ಎಕವೀರಾ ದೇವಸ್ಥಾನದ ಶ್ಲಾಘನೀಯ ನಿರ್ಧಾರ! ರಾಜ್ಯದಲ್ಲಿ ಹೆಚ್ಚಿನ ದೇವಸ್ಥಾನಗಳು ಇಂತಹ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿವೆ. ಈಗ ಇದೇ ರೀತಿ ದೇವಸ್ಥಾನಗಳು ಹಿಂದೂಗಳಿಗೆ ಧರ್ಮಶಿಕ್ಷಣ ನೀಡಲು ಪ್ರಯತ್ನಗಳನ್ನು ಪ್ರಾರಂಭಿಸಬೇಕು. ಇದರಿಂದ ಹಿಂದೂಗಳಿಗೆ ಅವರ ಧರ್ಮದ ಮಹತ್ವ, ಧಾರ್ಮಿಕ ವಿಧಿಗಳ ಹಿಂದಿನ ಕಾರಣ, ಆಧ್ಯಾತ್ಮಶಾಸ್ತ್ರ ಇತ್ಯಾದಿಗಳ ಮಾಹಿತಿ ಸಿಗುತ್ತದೆ ಮತ್ತು ಅವರ ಶ್ರದ್ಧೆ ಇನ್ನಷ್ಟು ಹೆಚ್ಚಾಗುತ್ತದೆ! |
Muzaffarpur Hospital Fire : ಮುಜಫ್ಫರಪುರ (ಬಿಹಾರ)ದ ಖಾಸಗಿ ಆಸ್ಪತ್ರೆಯಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ 4 ಸಾವು, 20ಕ್ಕೂ ಹೆಚ್ಚು ಜನರಿಗೆ ಗಾಯ
90 ವರ್ಷದ ವಯೋವೃದ್ಧ ಅತ್ತೆಯನ್ನು ತನ್ನ ತಲೆಯ ಮೇಲೆ ಹೊತ್ತುಕೊಂಡು ಸವಾರಿ ಮಾಡುತ್ತಾ 84 ಕೋಸು ಪ್ರದಕ್ಷಿಣೆ ಪೂರ್ಣಗೊಳಿಸುತ್ತಿರುವ ಸೊಸೆ!
ಮುಜಫರ್ನಗರದಲ್ಲಿ(ಉತ್ತರ ಪ್ರದೇಶ) ಆಘಾತಕಾರಿ ಘಟನೆ; ಬಾಕಿ ಹಣ ಸಿಗದಿದ್ದಕ್ಕೆ ಜೋಡಿಸಿದ ಮೂಳೆಯನ್ನು ಮುರಿದ ವೈದ್ಯ!
Vande Mataram : ಬಂಗಾಳದ ಮದರಸಾಗಳಲ್ಲಿ ‘ವಂದೇ ಮಾತರಂ’ ಕಡ್ಡಾಯಗೊಳಿಸುವುದಕ್ಕೆ ‘ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್’ ಆಕ್ಷೇಪ
ಕೊಲಕಾತಾ: ಟಿಎಂಸಿ ವಿದ್ಯಾರ್ಥಿ ಸಂಘಟನೆಯ ಕಚೇರಿಯಲ್ಲಿ ಭಾರಿ ನಗದು ಪತ್ತೆ
ಕೊಲಕಾತಾ: ತೃಣಮೂಲ ಕಾಂಗ್ರೆಸ್ನ ಮೇಯರ್ ಫಿರ್ಹಾದ್ ಹಕೀಮ್ ಅವರ ರಾಜೀನಾಮೆ