ಪಿಂಪರಿ-ಚಿಂಚವಡ ಪೊಲೀಸರು ಹಿಡಿದ 48 ಬಾಂಗ್ಲಾದೇಶಿ ನುಸುಳುಕೋರರು ಇನ್ನೂ ಭಾರತದಲ್ಲೇ ವಾಸ ಹೇಗೆ ? – ಪ್ರದೀಪ ನಾಯಕ ಅವರ ಪ್ರಶ್ನೆ

  • ಮಹಾರಾಷ್ಟ್ರ ರಾಜ್ಯ ಮಾಹಿತಿ ಹಕ್ಕು ಕಾರ್ಯಕರ್ತರ ಮಹಾಸಂಘದ ಪ್ರಧಾನ ಕಾರ್ಯದರ್ಶಿ ಪ್ರದೀಪ ನಾಯಕ ಅವರ ಪ್ರಶ್ನೆ!

  • ನುಸುಳುಕೋರರ ಪ್ರಕರಣವನ್ನು ‘ರಾಷ್ಟ್ರೀಯ ಭದ್ರತೆ’ ಎಂದು ಪರಿಗಣಿಸಬೇಕು ಎಂಬುದು ಪ್ರದೀಪ ನಾಯಕ ಅವರ ಅಪೇಕ್ಷೆ!

ಪುಣೆ – ಮಹಾರಾಷ್ಟ್ರ ರಾಜ್ಯ ಮಾಹಿತಿ ಹಕ್ಕು ಕಾರ್ಯಕರ್ತರ ಮಹಾಸಂಘದ ಪ್ರಧಾನ ಕಾರ್ಯದರ್ಶಿ ಪ್ರದೀಪ ನಾಯಕ ಅವರು ಮಾಹಿತಿ ಹಕ್ಕು ಕಾಯಿದೆಯಡಿಯಲ್ಲಿ ಪಿಂಪರಿ-ಚಿಂಚವಡ ಪೊಲೀಸರಿಂದ ಬಾಂಗ್ಲಾದೇಶಿ ನುಸುಳುಕೋರರ ಬಗ್ಗೆ ಮಾಹಿತಿ ಕೇಳಿದ್ದರು. ಈ ಮಾಹಿತಿಯ ಪ್ರಕಾರ, ಪೊಲೀಸ ಆಯುಕ್ತರ ಕಚೇರಿಯ ಸ್ಥಾಪನೆಯಾದಾಗಿನಿಂದ ಇಲ್ಲಿಯವರೆಗೆ 48 ಬಾಂಗ್ಲಾದೇಶಿ ನಾಗರಿಕರನ್ನು ದೇಶಕ್ಕೆ ಒಳನುಸುಳಿದ ಪ್ರಕರಣಗಳಲ್ಲಿ ಬಂಧಿಸಲಾಗಿದೆ; ಆದರೆ ಅವರಲ್ಲಿ ಒಬ್ಬರನ್ನೂ ಸಹ ಇಲ್ಲಿಯವರೆಗೆ ಬಾಂಗ್ಲಾದೇಶಕ್ಕೆ ಹಿಂದಿರುಗಿಸಲಾಗಿಲ್ಲ ಎಂದು ಪೊಲೀಸರಿಂದ ಉತ್ತರ ಲಭಿಸಿದೆ. ಇದಕ್ಕೆ ಪ್ರತಿಕ್ರಿಯಿಸಿದ ನಾಯಕ ಅವರು, ‘ಈ ನುಸುಳುಕೋರರು ಇನ್ನೂ ಭಾರತದಲ್ಲೇ ಹೇಗೆ ಇದ್ದಾರೆ?’ ಎಂದು ನೇರವಾಗಿ ಪ್ರಶ್ನಿಸಿದ್ದಾರೆ.

ನುಸುಳುಕೋರರ ಪ್ರಕರಣವನ್ನು ‘ರಾಷ್ಟ್ರೀಯ ಭದ್ರತೆ’ ಎಂದು ಪರಿಗಣಿಸಬೇಕು!

ಈ ಉತ್ತರದ ಹಿನ್ನೆಲೆಯಲ್ಲಿ ಪ್ರದೀಪ ನಾಯಕ ಅವರು, ಬಾಂಗ್ಲಾದೇಶಿ ನುಸುಳುಕೋರರು ಕೇವಲ ಅಕ್ರಮವಷ್ಟೇ ಅಲ್ಲದೆ, ರಾಷ್ಟ್ರೀಯ ಭದ್ರತೆಗೂ ದೊಡ್ಡ ಅಪಾಯಕಾರಿಯಾಗಿದೆ. ಆದರೂ, ಅವರ ವಿರುದ್ಧ ಯಾವುದೇ ನಿರ್ದಿಷ್ಟ ಕ್ರಮ ಕೈಗೊಳ್ಳದಿರುವುದು ಆಡಳಿತದ ಗಂಭೀರ ನಿರ್ಲಕ್ಷ್ಯವನ್ನು ತೋರಿಸುತ್ತದೆ. ಈ ನುಸುಳುಕೋರರ ವಿರುದ್ಧ ತಕ್ಷಣವೇ ತ್ವರಿತಗತಿ ನ್ಯಾಯಾಲಯಗಳಲ್ಲಿ ವಿಚಾರಣೆ ನಡೆಸಿ, ಅವರನ್ನು ಅವರ ದೇಶಕ್ಕೆ ಮರಳಿ ಕಳುಹಿಸಬೇಕು. ಇಂತಹ ಪ್ರಕರಣಗಳಲ್ಲಿ ವಿಳಂಬವಿಲ್ಲದೆ ತಕ್ಷಣದ ಕ್ರಮ ಕೈಗೊಳ್ಳಲು ಕೇಂದ್ರ ಸರಕಾರ ಮತ್ತು ಸರ್ವೋಚ್ಚ ನ್ಯಾಯಾಲಯವು ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ. ಈ ನುಸುಳುಕೋರರ ಪ್ರಕರಣವನ್ನು ‘ರಾಷ್ಟ್ರೀಯ ಭದ್ರತೆ’ ಎಂದು ಪರಿಗಣಿಸಬೇಕು ಎಂದು ಅವರು ಅಪೇಕ್ಷೆಯನ್ನು ವ್ಯಕ್ತಪಡಿಸಿದ್ದಾರೆ.

ಸಂಪಾದಕೀಯ ನಿಲುವು

  • ಈ ರೀತಿ ಏಕೆ ಹೇಳಬೇಕಾಗುತ್ತದೆ? ಮಾಹಿತಿ ಹಕ್ಕಿನಿಂದ ಹೊರಬಂದಿರುವ ಈ ವಾಸ್ತವವು ಕೇವಲ ಸ್ಥಳೀಯ ಆಡಳಿತದ ಕಾರ್ಯಕ್ಷಮತೆಯ ಮೇಲೆ ಮಾತ್ರವಲ್ಲದೆ, ದೇಶದ ಗಡಿಗಳ ಭದ್ರತೆಯ ಮೇಲೂ ಪ್ರಶ್ನಾರ್ಥಕ ಚಿಹ್ನೆಯನ್ನು ಮೂಡಿಸಿದೆ!
  • ತರಬೇತಿ ಪಡೆದ ಭಯೋತ್ಪಾದಕರಿಗಿಂತಲೂ ಈ ನುಸುಳುಕೋರರು ಅಪಾಯಕಾರಿಯಾಗಿರುವುದರಿಂದ, ಇತರ ದೇಶಗಳಂತೆ ನುಸುಳುವಿಕೆಯ ವಿರುದ್ಧ ಕಠಿಣ ಶಿಕ್ಷೆಯನ್ನು ವಿಧಿಸಿ, ಅದನ್ನು ಜಾರಿಗೆ ತರಬೇಕು. ನುಸುಳುಕೋರರ ಪ್ರಕರಣಗಳನ್ನು ‘ರಾಷ್ಟ್ರೀಯ ಭದ್ರತೆ’ಯೆಂದು ಪರಿಗಣಿಸಿ, ತ್ವರಿತಗತಿ ನ್ಯಾಯಾಲಯಗಳಲ್ಲಿ ವಿಚಾರಣೆ ನಡೆಸಿ, ಅವರನ್ನು ತಕ್ಷಣವೇ ಗಡಿಪಾರು ಮಾಡಬೇಕು!