ವಾರಣಾಸಿಯಲ್ಲಿ ಮುನಫೇದನು ನಕಲಿ ಹಿಂದೂ ಪೊಲೀಸನಾಗಿ ಹಿಂದೂ ಮಹಿಳೆಯರನ್ನು ಪ್ರೀತಿಯ ಜಾಲದಲ್ಲಿ ಸಿಲುಕಿಸಿದನು : ಕೋಟ್ಯಂತರ ರೂಪಾಯಿ ಲೂಟಿ !

ಉತ್ತರಪ್ರದೇಶದಲ್ಲಿ ‘ಲವ ಜಿಹಾದ’ನ ಹೊಸ ಪ್ರಕರಣ ಬಯಲು !

ವಾರಣಾಸಿ (ಉತ್ತರಪ್ರದೇಶ) – ಉತ್ತರಪ್ರದೇಶದ ವಾರಣಾಸಿಯಲ್ಲಿ ‘ಲವ್ ಜಿಹಾದ್’ನ ಹೊಸ ಪ್ರಕರಣ ಬೆಳಕಿಗೆ ಬಂದಿದೆ. ಮುನಫೇದ ಎಂಬ ಮುಸ್ಲಿಂ ವ್ಯಕ್ತಿಯು ತಾನೊಬ್ಬ ಹಿಂದೂ ಪೊಲೀಸನಾಗಿದ್ದೇನೆ ಎಂದು ನಕಲಿ ಗುರುತು ಹೇಳಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹಿಂದೂ ಮಹಿಳೆಯರೊಂದಿಗೆ ಪ್ರೇಮ ಸಂಬಂಧ ಬೆಳೆಸಿದ್ದಾನೆ. ಆತ ೧೪ ಹಿಂದೂ ಮಹಿಳೆಯರಿಗೆ ಉದ್ಯೋಗದ ಆಮಿಷವೊಡ್ಡಿ ಅವರಿಂದ ಕೋಟ್ಯಂತರ ರೂಪಾಯಿ ವಸೂಲಿ ಮಾಡಿರುವುದು ಬೆಳಕಿಗೆ ಬಂದಿದೆ. ಪೊಲೀಸರು ಮುನಫೇದನನ್ನು ಬಂಧಿಸಿದ್ದಾರೆ.

೧. ಮುನ್‌ಫೇದ್ ಮಥುರಾ ಜಿಲ್ಲೆಯ ಗೋವರ್ಧನ್ ಪೊಲೀಸ್ ಠಾಣಾ ವ್ಯಾಪ್ತಿಯ ದೇವ್ಸೇರಸ್ ಗ್ರಾಮದ ನಿವಾಸಿ.

೨. ಮುನಫೇದನು ವಾರಣಾಸಿಯ ಪೊಲೀಸ ಉಪನಿರೀಕ್ಷಕ ದೀಪಕ ರಾಣಾವತ ಮತ್ತು ಮಹಾರಾಜಗಂಜ ಜಿಲ್ಲೆಯ ಪರಾಸಾಮಾಲಿಕ ಪೊಲೀಸ ಠಾಣೆಯ ಉಪನಿರೀಕ್ಷಕ ಅಭಿಜಿತ ಸಿಂಗ ಎಂಬ ಹೆಸರಿನಲ್ಲಿ ನಕಲಿ ಪರಿಚಯವನ್ನು ಸೃಷ್ಟಿಸಿದ್ದನು.

೩. ಆತ ನಕಲಿ ಸಮವಸ್ತ್ರದ ಛಾಯಾಚಿತ್ರ ಮತ್ತು ನಕಲಿ ‘ಫೇಸ್‌ಬುಕ್ ಪ್ರೊಫೈಲ್’ ಬಳಸಿ ಉತ್ತರಪ್ರದೇಶ, ಜಮ್ಮು-ಕಾಶ್ಮೀರ, ಹರಿಯಾಣ ಮತ್ತು ದೆಹಲಿಯ ಮಹಿಳೆಯರನ್ನು ವಂಚಿಸಿದ್ದಾನೆ.

೪. ಉಪನಿರೀಕ್ಷಕರಾದ ದೀಪಕ ರಾಣಾವತರವರು ಈ ಬಗ್ಗೆ ದೂರು ನೀಡಿದ್ದು, ಯಾರೋ ತಮ್ಮ ಹೆಸರನ್ನು ಬಳಸಿ ಮಹಿಳೆಯರಿಂದ ದೊಡ್ಡ ಪ್ರಮಾಣದಲ್ಲಿ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ತಿಳಿಸಿದ್ದರು. ಈ ದೂರಿನ ನಂತರ ಪೊಲೀಸರು ಕಂಟೋನ್ಮೆಂಟ್ ರೈಲು ನಿಲ್ದಾಣದಿಂದ ಮುನಫೇದನನ್ನು ಬಂಧಿಸಿದ್ದಾರೆ.

೫. ಮುನಫೇದನು ಈ ವಂಚನೆಯಿಂದ ಪಡೆದ ಹಣದಿಂದ ತನ್ನ ಗ್ರಾಮದಲ್ಲಿ ಹೊಸ ಮನೆಯನ್ನು ಕಟ್ಟಲು ಪ್ರಾರಂಭಿಸಿದ್ದನು. ಈ ಪ್ರಕರಣದಲ್ಲಿ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಸಂಪಾದಕೀಯ ನಿಲುವು

ಕನಿಷ್ಠ ಭಾಜಪ ಆಡಳಿತವಿರುವ ರಾಜ್ಯಗಳಾದರೂ ಲವ ಜಿಹಾದ ಮುಕ್ತವಾಗಿರಬೇಕು. ಈ ನಿಟ್ಟಿನಲ್ಲಿ ಕಠಿಣ ಕ್ರಮಗಳನ್ನು ಕೈಗೊಳ್ಳುವುದು ಅವಶ್ಯಕ !