ಪಾಕ್ ಸೇನೆಯ ಮೇಲೆ ‘ಜಮಿಯತ ಉಲೇಮಾ-ಎ-ಇಸ್ಲಾಮ-ಫಜಲ’ ಪಕ್ಷದ ಮುಖ್ಯಸ್ಥ ಮೌಲಾನಾ ಫಜಲುರ ರೆಹಮಾನರವರ ಕಠೋರ ಟೀಕೆ

ಇಸ್ಲಾಮಾಬಾದ (ಪಾಕಿಸ್ತಾನ) – ನಿಮ್ಮ ದೃಷ್ಟಿಯಲ್ಲಿ ಹುತಾತ್ಮರ ಬೆಲೆ ಏನು ಎಂದು ಹೇಳಬಲ್ಲಿರಾ ? ಕಾರ್ಗಿಲನಲ್ಲಿ ಎಷ್ಟು ಸೈನಿಕರು ಹುತಾತ್ಮರಾದರು ಮತ್ತು ನೀವು ಅಲ್ಲಿಂದ ಎಷ್ಟು ಸೈನಿಕರ ಮೃತದೇಹಗಳನ್ನು ಮರಳಿ ತಂದಿರುವಿರಿ ಎಂಬುದನ್ನು ಜನರಿಗೆ ಹೇಳಬಲ್ಲಿರಾ ? ನೀವು ನಿಮ್ಮ ಹುತಾತ್ಮ ಸೈನಿಕರ ಮೃತದೇಹಗಳನ್ನು ಹಿಂದೂಗಳಿಗೆ ಒಪ್ಪಿಸಿದಿರಿ ಮತ್ತು ಭಾರತದಿಂದ ‘ನಾವು ಅವರಿಗೆ ಇಸ್ಲಾಮಿಕ್ ಪದ್ಧತಿಯಲ್ಲಿ ಅಂತ್ಯಸಂಸ್ಕಾರ ಮಾಡಿದ್ದೇವೆ’ ಎಂಬ ಹೇಳಿಕೆ ಬಂದಿತ್ತು. ಅವರ ಸಂಖ್ಯೆಯನ್ನು ಬೇರೆ ಬೇರೆಯಾಗಿ ಹೇಳಲಾಗುತ್ತಿದೆ; ಆದರೆ ಅದು ನೂರಾರು ಸಂಖ್ಯೆಯಲ್ಲಿದೆ. ನೀವು ನಿಮ್ಮ ಸೈನಿಕರ ಮೃತದೇಹಗಳನ್ನು ಹಿಂದೂಗಳ ವಶಕ್ಕೆ ನೀಡಿದಿರಿ. ಕರ್ನಲ್ ಶೇರ ಖಾನ ರವರ ಶವ ನಮಗೆ ಸಿಕ್ಕಿತು. ಆದರೆ ಭಾರತವು ಒತ್ತಾಯಿಸಿ ಹೇಳಿದ ನಂತರವೇ ನೀವು ಅವರ ಮೃತದೇಹವನ್ನು ಸ್ವೀಕರಿಸಿದಿರಿ. ನಿಮ್ಮದೇ ಹುತಾತ್ಮ ಸೈನಿಕರ ಅವಮಾನ ನೀವೇ ಮಾಡಿದಿರಿ ಮತ್ತು ನಿಮ್ಮ ಸ್ವಂತದ ಅಪರಾಧಗಳನ್ನು ಮುಚ್ಚಿಡಲು ಅವರ ಬೆನ್ನ ಹಿಂದೆ ಅಡಗಿಕೊಳ್ಳಲು ಯತ್ನಿಸುತ್ತಿದ್ದೀರಿ ಎಂದು ಪಾಕಿಸ್ತಾನದ ಜಮಿಯತ್ ಉಲೇಮಾ-ಎ-ಇಸ್ಲಾಮ-ಫಜಲ ಪಕ್ಷದ ಮುಖ್ಯಸ್ಥರಾದ ಮೌಲಾನಾ ಫಜಲುರ ರೆಹಮಾನ ರವರು ಪಾಕ್ ಸೇನೆಯ ವಿರುದ್ಧ ಕಠಿಣ ಹಾಗೂ ನೇರ ಮಾತುಗಳಿಂದ ವಾಗ್ದಾಳಿ ನಡೆಸಿದರು.
The Pakistan Army handed over the bodies of soldiers martyred in the Kargil War to the Hindus
Maulana Fazlur Rehman, chief of the Jamiat Ulema-e-Islam (F) party, strongly criticizes the Pakistan Army
The statement made by Maulana Rehman reflects what actually happened.… pic.twitter.com/oWYxdl3zFs
— Sanatan Prabhat (@SanatanPrabhat) July 20, 2026
ಅವರು ಮುಂದುವರಿದು, ಎಲ್ಲಾ ಶಕ್ತಿಯನ್ನು ಕೇವಲ ರಾಜಕೀಯ ಹಿಡಿತವನ್ನು ಬಲಪಡಿಸಲು ಬಳಸಲಾಗುತ್ತಿದೆ. ಪಾಕಿಸ್ತಾನವು ಒಂದು ಸಂಸ್ಥೆಗಳನ್ನೊಳಗೊಂಡ ದೇಶವಾಗಿದ್ದು, ಅಲ್ಲಿ ಪ್ರತಿಯೊಂದು ಸಂಸ್ಥೆಯ ಅಧಿಕಾರ ವ್ಯಾಪ್ತಿಯನ್ನು ಸ್ಪಷ್ಟವಾಗಿ ನಿರ್ಧರಿಸಲಾಗಿದೆ ಎಂದು ಹೇಳಿದರು.
೧೨ ವರ್ಷಗಳ ನಂತರ ಎಲ್ಲಾ ಆರೋಪಿಗಳನ್ನು ಪಾಕಿಸ್ತಾನದ ಸರ್ವೋಚ್ಚ ನ್ಯಾಯಾಲಯದಿಂದ ಖುಲಾಸೆ!
ಈ ಹಿಂದೆ ನನ್ನನ್ನು ಬಂಗಾಳದಿಂದ ಹೊರಗಟ್ಟಿದ ನಾಯಕರು ಈಗಲೂ ನನ್ನನ್ನು ಭಾಜಪ ಮತ್ತು ಸಂಘವನ್ನು ಬೆಂಬಲಿಸುವವಳು ಎಂದು ಬಿಂಬಿಸುತ್ತಿದ್ದಾರೆ! : Taslima Nasrin
ಭಾರತೀಯ ನಾವಿಕರಿದ್ದ ಹಡಗಿನ ಮೇಲೆ ರಷ್ಯಾದಿಂದ ದಾಳಿ : 6 ಜನರ ಸಾವು : Russia Ukraine War
ಇರಾನ್ನಲ್ಲಿರುವ ಭಾರತೀಯರು ಆದಷ್ಟು ಬೇಗ ಭಾರತಕ್ಕೆ ಮರಳಬೇಕು! – ಭಾರತ : US Iran War
‘ಕಳೆದ ವರ್ಷ ನಡೆದ ಸಂಘರ್ಷವು ಪ್ರಧಾನಿ ಮೋದಿ ಮತ್ತು ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ನಡುವಿನ ಒಳಸಂಚಾಗಿತ್ತು!’ (ಅಂತೆ) : Imran Khan Sister’s Claim
ಪಿಒಕೆ ಪ್ರತಿಭಟನಾಕಾರರ ದಬ್ಬಾಳಿಕೆ; ವಿಶ್ವಸಂಸ್ಥೆ ಕಳವಳ : UN Concern PoK