ಶಿವರಾಜ್ಯಾಭಿಷೇಕ ದಿನಕ್ಕೆ ಅನುಮತಿ ನಿರಾಕರಿಸಲಾಯಿತು!

ಕೊಲ್ಲಾಪುರ – ವಿಶಾಳಗಡದಲ್ಲಿ ಯಾವುದೇ ಹಬ್ಬ ಅಥವಾ ಉತ್ಸವ ನಡೆಯುವುದಿಲ್ಲ ಎಂದು ಕೊಲ್ಲಾಪುರದ ಪೊಲೀಸ್ ಅಧೀಕ್ಷಕ ಯೋಗೇಶ ಕುಮಾರ್ ಗುಪ್ತಾ ಆದೇಶ ಹೊರಡಿಸಿದ್ದಾರೆ. ಇದರಿಂದ ಜೂನ್ 7 ರಂದು ಬಕ್ರೀದ್ ನಿಮಿತ್ತ ನಡೆಯುವ ಉರುಸ್ ಮತ್ತು ಕೊಡಲಾಗುವ ಕುರ್ಬಾನಿ ಹಾಗೂ ಜೂನ್ 9 ರಂದು ತಿಥಿಯನುಸಾರ ಆಚರಿಸಲಾಗುವ ಶಿವಾಜಿ ಮಹಾರಾಜರ ರಾಜ್ಯಾಭಿಷೇಕ ದಿನಕ್ಕೆ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ. ಈ ಕುರಿತು ಹಿಂದೂ ಜನಜಾಗೃತಿ ಸಮಿತಿಯು ಜೂನ್ 6 ರಂದು ಜಿಲ್ಲಾಧಿಕಾರಿಗಳಿಗೆ ಉಚ್ಚ ನ್ಯಾಯಾಲಯ ನೀಡಿದ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಮತ್ತು ಯಾವುದೇ ಅಸಮರ್ಪಕ ಕೃತ್ಯ ನಡೆದರೆ ಕ್ರಮ ಕೈಗೊಳ್ಳಲು ಆಗ್ರಹಿಸಿತ್ತು. ಇದರೊಂದಿಗೆ ‘ಹಿಂದೂ ಏಕತಾ ಆಂದೋಲನ’ದ ಶ್ರೀ. ನಿತಿನ ಶಿಂದೆ ಅವರು ಜೂನ್ 5 ರಂದು ಜಿಲ್ಲಾಧಿಕಾರಿ ಕಚೇರಿ ಮುಂದೆ ನಡೆದ ಪ್ರತಿಭಟನೆಯಲ್ಲಿ ಉರುಸ್ ನಡೆದರೆ ಅದನ್ನು ತಡೆಯುವ ಎಚ್ಚರಿಕೆ ನೀಡಿದ್ದರು.
ಎರಡು ದಿನಗಳ ಹಿಂದೆ ಉಚ್ಚ ನ್ಯಾಯಾಲಯವು ವಿಶಾಳಗಡದಲ್ಲಿ ಬಕ್ರೀದ್ ಕುರ್ಬಾನಿಗೆ ಅನುಮತಿ ನೀಡಿತ್ತು. ಈ ನಿರ್ಧಾರದ ವಿರುದ್ಧ ಜಿಲ್ಲಾಡಳಿತವು ಸರ್ವೋಚ್ಚ ನ್ಯಾಯಾಲಯದ ಮೊರೆ ಹೋಗಿದೆ. ನ್ಯಾಯಾಲಯದಲ್ಲಿ ಈ ಹಿಂದಿನ ಘಟನೆಗಳನ್ನು ಉಲ್ಲೇಖಿಸಲಾಗಿದೆ; ಆದರೆ ಈ ಪ್ರಕರಣದ ತುರ್ತು ವಿಚಾರಣೆಗೆ ಸರ್ವೋಚ್ಚ ನ್ಯಾಯಾಲಯವು ನಿರಾಕರಿಸಿದೆ. ಶಾಹುವಾಡಿ ತಾಲೂಕಿನ ವಿಶಾಳಗಡದಲ್ಲಿ ಪ್ರಾಣಿ ಬಲಿದಾನಕ್ಕೆ ನಿಷೇಧ ಹೇರುವ ಆದೇಶವನ್ನು ಪುರಾತತ್ವ ಇಲಾಖೆ ಹೊರಡಿಸಿತ್ತು. ‘ಮಹಾರಾಷ್ಟ್ರ ಪ್ರಾಚೀನ ಸ್ಮಾರಕಗಳು ಮತ್ತು ಪುರಾತತ್ವ ಸ್ಥಳಗಳು ಮತ್ತು ಅವಶೇಷಗಳ ನಿಯಮಗಳು, 1962’ ರ ಪ್ರಕಾರ ಕೋಟೆಗಳ ಪ್ರದೇಶದಲ್ಲಿ ಆಹಾರ ಬೇಯಿಸುವುದು ಮತ್ತು ಸೇವಿಸುವುದನ್ನು ನಿಷೇಧಿಸಲಾಗಿತ್ತು. ಈ ಆದೇಶವನ್ನು ಕೊಲ್ಲಾಪುರ ಜಿಲ್ಲಾಧಿಕಾರಿಗಳಿಗೆ ಜಾರಿಗೊಳಿಸಲು ತಿಳಿಸಲಾಗಿತ್ತು.
ಸಂಪಾದಕೀಯ ನಿಲುವುಬಕ್ರೀದ್ ನಿಮಿತ್ತ ನಡೆಯುವ ಉರುಸ್ಗೆ ಅನುಮತಿ ನಿರಾಕರಿಸುವ ಸರಿಯಾದ ನಿರ್ಧಾರವನ್ನು ನೀಡುವಾಗ ದಿನಕ್ಕೂ ಆಚರಿಸಲು ಬಿಡದಿರುವುದು ಜಾತ್ಯತೀತತೆಯಲ್ಲ, ಇದು ಕೇವಲ ಹಿಂದೂ ದ್ವೇಷವಾಗಿದೆ. ಇದನ್ನು ಹಿಂದುತ್ವನಿಷ್ಠರು ವಿರೋಧಿಸಬೇಕು! ದಿನವನ್ನು ವಿಶಾಳಗಡದಲ್ಲಿ ಆಚರಿಸದೆ ಪಾಕಿಸ್ತಾನದಲ್ಲಿ ಆಚರಿಸಬೇಕೇ? |
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ
‘ಲವ್ ಜಿಹಾದ್’, ‘ಲ್ಯಾಂಡ್ ಜಿಹಾದ್’ ಇವೆಲ್ಲಾ ಮೂರ್ಖತನದ ಸಂಗತಿಗಳಂತೆ !
ತುಮಕೂರಿನಲ್ಲಿ ಶ್ರೀರಾಮಮಂದಿರದ ಹತ್ತಿರ ಅಲ್ಪಸಂಖ್ಯಾತರ ವಸತಿಗೃಹ ನಿರ್ಮಿಸುವ ಸಂಚು !
ನಾಗಪುರ: ಮಾನಸಿಕ ಒತ್ತಡದಿಂದಾಗಿ ‘ನೀಟ್’ ಪರೀಕ್ಷೆಯ ವಿದ್ಯಾರ್ಥಿನಿ ಆತ್ಮಹತ್ಯೆ
ರಾಜ್ಯದಲ್ಲಿ ಮುಸಲ್ಮಾನರಿಗೆ 5 ಸಚಿವ ಸ್ಥಾನ ನೀಡದಿದ್ದರೆ ನಮ್ಮ ಶಕ್ತಿಯನ್ನು ತೋರಿಸುತ್ತೇವೆ !