BSF Jawan Abducted By Bangladeshi : ಬಾಂಗ್ಲಾದೇಶದ ಗಡಿಯಲ್ಲಿ ಮುಸಲ್ಮಾನ ನುಸುಳುಕೋರರಿಂದ ಭಾರತೀಯ ಯೋಧನನ್ನು ಅಪಹರಣ

ಗಡಿ ಭದ್ರತಾ ಪಡೆಯ ‘ಬಾರ್ಡರ್ ಗಾರ್ಡ್ ಬಾಂಗ್ಲಾದೇಶ’ ದ ಅಧಿಕಾರಿಗಳ ಜೊತೆಗೆ ನಡೆಸಿರುವ ಚರ್ಚೆಯ ನಂತರ ಯೋಧನ ಬಿಡುಗಡೆ

ಮುರ್ಶಿದಾಬಾದ್ (ಬಂಗಾಲ) – ಮುರ್ಶಿದಾಬಾದ ಜಿಲ್ಲೆಯಲ್ಲಿನ ನೂರುಪೂರ ಇಲ್ಲಿಯ ಗಡಿಯಿಂದ ಗಡಿ ಭದ್ರತಾ ಪಡೆಯ ಯೋಧನನ್ನು ಬಾಂಗ್ಲಾದೇಶದ ಮುಸಲ್ಮಾನ ನುಸುಳುಕೋರರು ಅಪಹರಿಸಿದರು, ಈ ಘಟನೆ ಜೂನ್ ೪ ರಂದು ಘಟಿಸಿದೆ. ಈ ಯೋಧನಿಗೆ ನುಸುಳುಕೋರರು ಬಾಂಗ್ಲಾದೇಶಕ್ಕೆ ಕೊಂಡೋಯ್ಯ್ದರು ಇದರಿಂದ ಅಲ್ಲಿಯ ಗಡಿಯಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಯಿತು. ಗಡಿ ಭದ್ರತಾ ಪಡೆ ಮತ್ತು ಬಾರ್ಡರ್ ಗಾರ್ಡ್ ಬಾಂಗ್ಲಾದೇಶ’ ಇವರಲ್ಲಿ ನಡೆದಿರುವ ಚರ್ಚೆಯ ನಂತರ ಭಾರತೀಯ ಯೋಧನನ್ನು ಬಿಡುಗಡೆ ಮಾಡಲಾಯಿತು.

ಯಾವ ಯೋಧನನ್ನು ಅಪಹರಿಸಲಾಗಿತ್ತು, ಅವನು ಕಥಲಿಯ ಗ್ರಾಮದ ಪರಿಸರದಲ್ಲಿರುವ ಗಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದನು. ಕೆಲವು ಬಾಂಗ್ಲಾದೇಶದ ನುಸುಳುಕೋರರು ಇಲ್ಲಿಂದ ಗಡಿ ದಾಟುವ ಪ್ರಯತ್ನ ಮಾಡುತ್ತಿದ್ದರು. ಅವರನ್ನು ಈ ಯೋಧ ತಡೆಯುವ ಪ್ರಯತ್ನ ಮಾಡಿದನು. ಆ ಸಮಯದಲ್ಲಿ ಅಲ್ಲಿ ಆ ನುಸುಳುಕೋರರು ಈ ಯೋಧನನ್ನು ಹಿಡಿದು ಗಡಿಯ ಆಚೆಗೆ ಕರೆದುಕೊಂಡು ಹೋದರು. ಅವನನ್ನು ಒಂದು ಬಾಳೆ ಗಿಡಕ್ಕೆ ಕಟ್ಟಿ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗುತ್ತಿದೆ. ಅದು ನಿಜವೋ ಸುಳ್ಳೋ ಅದನ್ನು ಇನ್ನು ಯಾರು ಖಚಿತಪಡಿಸಿಲ್ಲ.

ಸಂಪಾದಕೀಯ ನಿಲುವು

ಇದು ಭಾರತಕ್ಕೆ ನಾಚಿಕೆಗೇಡು ! ಇದರಿಂದ ಯೋಧರು ಸ್ವಂತದ ರಕ್ಷಣೆ ಮಾಡಲು ಸಾಧ್ಯವಾಗುತ್ತಿಲ್ಲ, ಅಲ್ಲಿ. ಅವರು ದೇಶದ ರಕ್ಷಣೆ ಹೇಗೆ ಮಾಡುವರು? ನುಸುಳುಕೋರರು ಬಹಿರಂಗವಾಗಿ ಭಾರತಕ್ಕೆ ನುಗುತ್ತಾರೆ ಮತ್ತು ಯೋಧನನ್ನು ಅಪಹರಿಸುತ್ತಾರೆ, ಇದರಿಂದ ಗಡಿಯ ಪ್ರದೇಶದಲ್ಲಿನ ಸುರಕ್ಷೆ ಎಷ್ಟು ಅಸಮರ್ಥವಾಗಿದೆ ಇದು, ಗಮನಕ್ಕೆ ಬರುತ್ತದೆ. ಆದ್ದರಿಂದ ದೇಶದಲ್ಲಿ ಬಾಂಗ್ಲಾದೇಶದ ನುಸುಳುಕೋರರು ಹೇಗೆ ನುಗ್ಗಿದ್ದರು, ಇದು ಸ್ಪಷ್ಟವಾಗುತ್ತದೆ. ಇದನ್ನು ಬದಲಾಯಿಸಲು ಕೇಂದ್ರ ಸರಕಾರ ಏನು ಮಾಡುವುದು ?