ಕೊರೊನಾದ ಅಪಾಯ ಹೆಚ್ಚಾಗುತ್ತಿದ್ದರೂ, ಚಿಂತಿಸುವ ಅವಶ್ಯಕತೆ ಇಲ್ಲ!

ವಿಶ್ವ ಆರೋಗ್ಯ ಸಂಸ್ಥೆಯ ಮಾಜಿ ವಿಜ್ಞಾನಿ ಸೌಮ್ಯಾ ಸ್ವಾಮಿನಾಥನ್ ಅವರಿಂದ ಭರವಸೆ

ನವ ದೆಹಲಿ – ಪ್ರಸ್ತುತ ಕೊರೊನಾದ ಅಪಾಯ ಹೆಚ್ಚುತ್ತಿದೆ, ಎಂಬುದು ನಿಜ; ಆದರೆ ಚಿಂತಿಸುವ ಅಗತ್ಯವಿಲ್ಲ. 2020 ರಲ್ಲಿ ಇದ್ದಂತಹ ಪರಿಸ್ಥಿತಿ ಈಗ ಬರುವುದಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮಾಜಿ ವಿಜ್ಞಾನಿ ಸೌಮ್ಯಾ ಸ್ವಾಮಿನಾಥನ್ ಅವರು ಒಂದು ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ತಿಳಿಸುವ ಮೂಲಕ ನಾಗರಿಕರಿಗೆ ಭರವಸೆ ನೀಡಿದ್ದಾರೆ.

ಸೌಮ್ಯಾ ಸ್ವಾಮಿನಾಥನ್ ಅವರು, ಕೋವಿಡ್ ಮತ್ತು ಸಾರ್ಸ್ ವೈರಸ್‌ನ ಪ್ರಕಾರಗಳಾಗಿವೆ; ಆದರೆ ಈ ವೈರಸ್ ಪ್ರಕಾರ ಈಗ ಸಾಮಾನ್ಯವಾಗಿದೆ. ಕೊರೊನಾದ ವೈರಸ್ ತನ್ನಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳುತ್ತದೆ. ಈಗ ಕೊರೊನಾ ವೈರಸ್‌ಗೆ 5 ವರ್ಷಗಳಾಗಿವೆ. ಈಗ ಸಾಮಾನ್ಯ ಉಸಿರಾಟದ ಕಾಯಿಲೆಗಳಂತೆಯೇ ಈ ವೈರಸ್ ಇದೆ. ಇದರಲ್ಲಿ ಭಯಪಡುವಂತಹದ್ದೇನೂ ಏನೂ ಇಲ್ಲ, ಎಂದು ಹೇಳಿದ್ದಾರೆ.