ಭುವನೇಶ್ವರ (ಒಡಿಶಾ)ದಲ್ಲಿ ಸರಕಾರಿ ಇಂಜಿನಿಯರ್ ಬಳಿ ಅಕ್ರಮ 2 ಕೋಟಿ ರೂಪಾಯಿಗಳ ನಗದು ಪತ್ತೆ

ವಿಜಿಲೆನ್ಸ್ ಅಧಿಕಾರಿಗಳನ್ನು ನೋಡುತ್ತಿದ್ದಂತೆ ನೋಟುಗಳ ಕಟ್ಟುಗಳನ್ನು ಕಿಟಕಿಯಿಂದ ಹೊರಗೆ ಎಸೆದನು!

ಭುವನೇಶ್ವರ (ಒಡಿಶಾ) – ಇಲ್ಲಿ ವಿಜಿಲೆನ್ಸ್ (ಲೋಕಾಯುಕ್ತ) ವಿಭಾಗದ ಅಧಿಕಾರಿಗಳು ಒಡಿಶಾ ಸರಕಾರದ ಗ್ರಾಮೀಣಾಭಿವೃದ್ಧಿ ಇಲಾಖೆಯ ಮುಖ್ಯ ಇಂಜಿನಿಯರ್ ವೈಕುಂಠನಾಥ ಸಾರಂಗಿ ಅವರ 7 ಸ್ಥಳಗಳಲ್ಲಿ ದಾಳಿ ನಡೆಸಿ, 2 ಕೋಟಿ ರೂಪಾಯಿಗಳಿಗಿಂತ ಅಧಿಕ ಅಕ್ರಮ ನಗದು ವಶಪಡಿಸಿಕೊಂಡಿದ್ದಾರೆ. ಇದರಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳು ಮತ್ತು ದುಬಾರಿ ಬಟ್ಟೆಗಳೂ ಸಿಕ್ಕಿವೆ. ಈ ವೇಳೆ, ಅಧಿಕಾರಿಗಳನ್ನು ನೋಡುತ್ತಿದ್ದಂತೆ ಇಂಜಿನಿಯರ್ ತನ್ನ ಮನೆಯ ಕಿಟಕಿಯಿಂದ 500 ರೂಪಾಯಿಗಳ ನೋಟುಗಳ ಕಟ್ಟುಗಳನ್ನು ಹೊರಗೆ ಎಸೆಯಲು ಪ್ರಾರಂಭಿಸಿದನು. ಅಧಿಕಾರಿಗಳು ಆ ಹಣವನ್ನೂ ವಶಪಡಿಸಿಕೊಂಡಿದ್ದಾರೆ.

ಸಂಪಾದಕೀಯ ನಿಲುವು

ಸರಕಾರಿ ಅಧಿಕಾರಿಗಳು ಭ್ರಷ್ಟರು ಎಂಬುದು ದೇಶದ ಜನರ ಭಾವನೆ. ಇವರಲ್ಲಿ ಎಣಿಕೆಯಷ್ಟು ಜನರು ಮಾತ್ರ ಸಿಕ್ಕಿಬೀಳುತ್ತಾರೆ, ಆದರೆ ಉಳಿದವರು ರಾಜಾರೋಷವಾಗಿ ಭ್ರಷ್ಟಾಚಾರ ಮಾಡುತ್ತಿರುತ್ತಾರೆ. ಎಲ್ಲಿಯವರೆಗೆ ಪ್ರತಿಯೊಬ್ಬ ಭ್ರಷ್ಟಾಚಾರಿ ಸಿಕ್ಕಿಬೀಳುವುದಿಲ್ಲ ಮತ್ತು ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳುವುದಿಲ್ಲವೋ ಅಲ್ಲಿಯವರೆಗೆ ದೇಶ ಭ್ರಷ್ಟಾಚಾರ ಮುಕ್ತವಾಗಲು ಸಾಧ್ಯವಿಲ್ಲ!