ಕಾಂಗ್ರೆಸ್ ಸರಕಾರ ಹಿಂದೂಗಳನ್ನು ದಮನಿಸಲು ನನ್ನನ್ನು ಅಪ್ಪಜಲಪುರ ತಾಲೂಕು ಪ್ರವೇಶಕ್ಕೆ ನಿಷೇಧ ಹೇರಿದೆ! – ಪ್ರಮೋದ ಮುತಾಲಿಕ್

ಶ್ರೀರಾಮ ಸೇವೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ ಇವರಿಂದ ಮಾಹಿತಿ

ಪ್ರವೇಶ ನಿಷೇಧ ಆದೇಶದ ಪ್ರತಿಯನ್ನು ಪ್ರಮೋದ್ ಮುತಾಲಿಕ್ ಅವರಿಗೆ ನೀಡಲಾಯಿತು.

ಕಲಬುರಗಿ – ಕಲಬುರಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಮಾಶಾಳದಲ್ಲಿ ಮೇ 31 ರ ಸಂಜೆ 5 ಗಂಟೆಗೆ ನಡೆಯಲಿರುವ ಗುರುವಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾಗಿತ್ತು; ಆದರೆ ಈಗಿರುವ ಹಿಂದೂ ವಿರೋಧಿ ಕಾಂಗ್ರೆಸ್ ಸರಕಾರವು ಹಿಂದೂಗಳನ್ನು ದಮನಿಸಲು ನನ್ನನ್ನು ಕಲಬುರಗಿ ಜಿಲ್ಲೆಗೆ ಪ್ರವೇಶವನ್ನು ನಿಷೇಧಿಸಿದೆ ಎಂದು ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಶ್ರೀ. ಪ್ರಮೋದ್ ಮುತಾಲಿಕ್ ಅವರು ‘ಎಕ್ಸ್’ (X) ನಲ್ಲಿ ಪೋಸ್ಟ್ ಮಾಡಿ ಮಾಹಿತಿ ನೀಡಿದ್ದಾರೆ. ಅದರೊಂದಿಗೆ, ಪೊಲೀಸರಿಂದ ಪಡೆದ ಆದೇಶದ ಪ್ರತಿಯನ್ನೂ ಅವರು ಪ್ರಸಾರ ಮಾಡಿದ್ದಾರೆ.

ಪೊಲೀಸರು ನೀಡಿದ ಆದೇಶದಲ್ಲಿರುವ ಅಂಶಗಳು ಹೀಗಿವೆ!

1. “ಶ್ರೀ. ಪ್ರಮೋದ ಮುತಾಲಿಕ, ಶ್ರೀರಾಮ ಸೇನೆಯ ಸಂಸ್ಥಾಪಕ ಮತ್ತು ರಾಷ್ಟ್ರೀಯ ಅಧ್ಯಕ್ಷ ಹಾಗೂ ಹಿಂದೂ ಬೆಂಬಲಿಗರು, ಪ್ರಚೋದನಕಾರಿ ಭಾಷಣ ಮಾಡುವವರು” ಎಂದು ಇದರಲ್ಲಿ ಉಲ್ಲೇಖಿಸಲಾಗಿದೆ. (ಹೀಗೆ ಹಿಂದೂಗಳನ್ನು ಅವಮಾನಿಸುವ ಪೊಲೀಸರು ಮುಸಲ್ಮಾನ ನಾಯಕರ ಬಗ್ಗೆ ಇಂತಹ ಉಲ್ಲೇಖವನ್ನು ಎಂದಾದರೂ ಮಾಡುತ್ತಾರೆಯೇ? ಅಥವಾ ಹಾಗೆ ಮಾಡಲು ಅವರಿಗೆ ಎಂದಾದರೂ ಯೋಚನೆಯನ್ನಾದರೂ ಮಾಡುತ್ತಾರೆಯೇ? – ಸಂಪಾದಕರು)

2. ಮಾಶಾಳ ಗ್ರಾಮವು ಪೊಲೀಸ್ ಠಾಣಾ ವ್ಯಾಪ್ತಿಯ ಸೂಕ್ಷ್ಮ ಗ್ರಾಮಗಳಲ್ಲಿ ಒಂದಾಗಿದೆ. ಈ ಹಿಂದೆ ಗ್ರಾಮದ ಬಸ್ ನಿಲ್ದಾಣದ ಬಳಿ ಸಂಗೊಳ್ಳಿ ರಾಯಣ್ಣನವರ ಪ್ರತಿಮೆ ಸ್ಥಾಪನೆಗೆ ಸಂಬಂಧಿಸಿದಂತೆ ಗ್ರಾಮದಲ್ಲಿ ವಿವಾದ ಉಂಟಾಗಿತ್ತು ಮತ್ತು ಇದರಿಂದ ಕಾನೂನು ಮತ್ತು ಸುವ್ಯವಸ್ಥೆಗೆ ದೊಡ್ಡ ಹಾನಿಯಾಗುವ ಸಾಧ್ಯತೆಯಿದೆ ಎಂದು ವಿಶ್ವಾಸಾರ್ಹ ಮಾಹಿತಿ ದೊರೆತಿದೆ. ಅದಕ್ಕೆ ಸಂಬಂಧಿಸಿದಂತೆ ಗ್ರಾಮದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಶಾಂತಿಯನ್ನು ಕಾಪಾಡಲು ಸೂಕ್ತ ಬಂದೋಬಸ್ತ್ ಏರ್ಪಡಿಸಲಾಗಿದೆ. ಈ ಸಂಬಂಧ ಕಳೆದ 8 ತಿಂಗಳಿಂದ ಸದರಿ ಗ್ರಾಮದಲ್ಲಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ತುಕಡಿಯನ್ನು ನಿಯೋಜಿಸಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲಾಗುತ್ತಿದೆ. (ಹೀಗೆ, ಯಾವುದೇ ಪ್ರದೇಶದಲ್ಲಿ ಅಥವಾ ಗ್ರಾಮದಲ್ಲಿ ಹಿಂದೂಗಳು ಜಾಗೃತಿ ಮೂಡಿಸಬಾರದು ಎಂಬುದು ಆಡಳಿತದ ಮನಸ್ಥಿತಿಯೇ? ಅಫಜಲಪುರ ತಾಲ್ಲೂಕು ಭಾರತದಲ್ಲಿದೆಯೇ ಅಥವಾ ಪಾಕಿಸ್ತಾನದಲ್ಲಿದೆಯೇ? – ಸಂಪಾದಕರು)

3. ಸದರಿ ಗ್ರಾಮದಲ್ಲಿ ಶ್ರೀ ಸದ್ಗುರು ಸಿದ್ಧಲಿಂಗೇಶ್ವರ ವಿರಕ್ತ ಮಠವು ಪ್ರಸಿದ್ಧ ಮಠವಾಗಿದ್ದು, ಅದರ ಪೀಠಾಧಿಪತಿಗಳು ಶ್ರೀ. ಮರುಳಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿಯಾಗಿದ್ದಾರೆ. ಸದರಿ ಪೀಠಾಧಿಪತಿಗಳು ಈ ಹಿಂದೆ ನವೆಂಬರ್ 10, 2024 ರಂದು ‘ವಕ್ಫ್ ಹಟಾವೋ ದೇಶ್ ಬಚಾವೋ’ ಎಂಬ ಘೋಷವಾಕ್ಯದೊಂದಿಗೆ ಅಫಜಲ್ಪುರ ನಗರದ ಬಸವೇಶ್ವರ ವೃತ್ತದಲ್ಲಿ ವಿವಿಧ ಸಮುದಾಯಗಳ ಜನರನ್ನು ಒಟ್ಟುಗೂಡಿಸಿ ಮೆರವಣಿಗೆ ನಡೆಸಿದ್ದರು. ಮೆರವಣಿಗೆಯ ಸಮಯದಲ್ಲಿ ನಗರದಲ್ಲಿ ಧಾರ್ಮಿಕ ಸೌಹಾರ್ದತೆಗೆ ಧಕ್ಕೆ ತರುವ ರೀತಿಯಲ್ಲಿ ಮತ್ತು ಇನ್ನೊಂದು ಸಮುದಾಯದ ಧಾರ್ಮಿಕ ಭಾವನೆಗಳಿಗೆ ನೋವುಂಟುಮಾಡುವ ರೀತಿಯಲ್ಲಿ ಭಾಷಣ ಮಾಡಿದ್ದರು. ಈ ಸಂಬಂಧ ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸದರಿ ಪ್ರಕರಣ ಪ್ರಸ್ತುತ ತನಿಖೆಯಲ್ಲಿದೆ. (ಇಂತಹ ಉಲ್ಲೇಖಗಳನ್ನು ನೀಡುವ ಆಡಳಿತವು, ಹಿಂದೂ ನಾಯಕರು ಮಾತ್ರ ಪ್ರಚೋದನಕಾರಿ ಭಾಷಣಗಳನ್ನು ನೀಡುತ್ತಾರೆ ಎಂದು ಸಾಬೀತುಪಡಿಸಲು ಪ್ರಯತ್ನಿಸುತ್ತಿದೆ. ಇತರ ಧರ್ಮದ ನಾಯಕರ ಸಮುದಾಯದ ಹೆಸರನ್ನೂ ಹೇಳಲು ಹೆದರುವವರು ಅವರ ವಿರುದ್ಧ ಎಂದಾದರೂ ಕ್ರಮ ತೆಗೆದುಕೊಳ್ಳುತ್ತಾರೆಯೇ? – ಸಂಪಾದಕರು)

4. ಮೇ 31, 2025 ರಂದು ಸಂಜೆ 5 ಗಂಟೆ ಸುಮಾರಿಗೆ ಮಾಶಾಳ ಗ್ರಾಮದ ಶ್ರೀ ಸಿದ್ಧರಾಮೇಶ್ವರ ದೇವಾಲಯದ ಆವರಣದಲ್ಲಿ ‘ರಾಷ್ಟ್ರ ಮತ್ತು ಧರ್ಮ ಜಾಗೃತಿ ಸಮ್ಮೇಳನ’ ಆಯೋಜಿಸಲಾಗಿದೆ. ಒಂದು ವೇಳೆ ಈ ಕಾರ್ಯಕ್ರಮದಲ್ಲಿ ಶ್ರೀ. ಪ್ರಮೋದ ಮುತಾಲಿಕ ಉಪಸ್ಥಿತರಿದ್ದರೆ, ಗ್ರಾಮದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಧಾರ್ಮಿಕ ಸೌಹಾರ್ದತೆಗೆ ಧಕ್ಕೆ ಉಂಟಾಗುವ ಸಾಧ್ಯತೆಯಿದೆ. (ಗಲಭೆ ಯಾರು ಮಾಡುತ್ತಾರೆ ಎಂಬುದು ಆಡಳಿತಕ್ಕೆ ತಿಳಿದಿದೆ. ಆದರೂ, ಆ ಗಲಭೆಕೋರ ನಾಯಕರ ಮೇಲೆ ಕ್ರಮ ಕೈಗೊಳ್ಳುವ ಬದಲು ಮುತಾಲಿಕ್ ಅವರನ್ನು, ಅಂದರೆ ಹಿಂದೂಗಳನ್ನು ಗುರಿಪಡಿಸಲಾಗುತ್ತಿದೆ ಎಂಬುದನ್ನು ಗಮನಿಸಿ! – ಸಂಪಾದಕರು) ಆದ್ದರಿಂದ ಅವರಿಗೆ ಮೇ 31 ರಿಂದ ಜೂನ್ 1 ರ ವರೆಗೆ ಅಫಜಲಪುರ ತಾಲ್ಲೂಕಿಗೆ ಪ್ರವೇಶಿಸದಂತೆ ನಿರ್ಬಂಧ ವಿಧಿಸಲಾಗಿದೆ.

ಸಂಪಾದಕೀಯ ನಿಲುವು

ಕಾಂಗ್ರೆಸ್ ಆಡಳಿತದಲ್ಲಿ ಇದಕ್ಕಿಂತ ವಿಭಿನ್ನವಾಗಿರುವುದು ಏನೂ ನಡೆಯುವುದಿಲ್ಲ. ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತಂದ ಹಿಂದೂಗಳಿಗೆ ಈಗಲಾದರೂ ಇದರ ಅರಿವಾಗುವುದೇ?