ಭಾರತ-ಪಾಕಿಸ್ತಾನ ಯುದ್ಧ ವಿರಾಮದ ಕುರಿತು ನಿವೃತ್ತ ಸೇನಾ ಮುಖ್ಯಸ್ಥರು ಮತ್ತು ವಿಶ್ಲೇಷಕರ ಅಭಿಪ್ರಾಯ
ನವದೆಹಲಿ – ಭಾರತ ಮತ್ತು ಪಾಕಿಸ್ತಾನದ ನಡುವೆ ಕದನ ವಿರಾಮದ ನಂತರ, ರಕ್ಷಣಾ ತಜ್ಞರು ಹಾಗೂ ಭಾರತೀಯ ಸೇನೆಯ ನಿವೃತ್ತ ಅಧಿಕಾರಿಗಳು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಈ ಅಭಿಪ್ರಾಯಗಳಲ್ಲಿ, ಕದನ ವಿರಾಮವು ಅನಿರೀಕ್ಷಿತವಾಗಿತ್ತು ಮತ್ತು ಈಗ ಭಾರತಕ್ಕೆ ಪಾಕಿಸ್ತಾನಕ್ಕೆ ಪಾಠ ಕಲಿಸುವ ಅವಕಾಶವಿತ್ತು ಎಂಬ ಅಭಿಪ್ರಾಯಗಳು ಕೇಳಿಬಂದಿವೆ.
ಭವಿಷ್ಯದಲ್ಲಿ ಬೇರೆ ಯಾವುದೇ ಅವಕಾಶವಿಲ್ಲ! – ಜನರಲ್ ಮನೋಜ ನರವಣೆ, ನಿವೃತ್ತ ಸೇನಾ ಮುಖ್ಯಸ್ಥರು
ಭೂಮಿ, ಸಮುದ್ರ ಮತ್ತು ಆಕಾಶದ ಮೂಲಕ ಕೈಗೊಳ್ಳಲಾಗುವ ಕ್ರಮವನ್ನು ನಿಲ್ಲಿಸುವುದು ಅತ್ಯಂತ ಸ್ವಾಗತಾರ್ಹ ಘಟನೆಯಾಗಿದೆ. ಆದಾಗ್ಯೂ, ದೀರ್ಘಕಾಲೀನ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಲು ನಾವು ಇತರ ರಂಗಗಳಲ್ಲಿ ಒತ್ತಡವನ್ನು ಕಾಯ್ದುಕೊಳ್ಳಬೇಕಾಗುತ್ತದೆ. ನಾವು ಘಟನೆಗಳ ಆಧಾರದ ಮೇಲೆ ಪ್ರತಿಕ್ರಿಯಿಸಲು ಸಾಧ್ಯವಿಲ್ಲ ಮತ್ತು ಭಯೋತ್ಪಾದಕ ದಾಳಿಗಳಲ್ಲಿ ಜೀವ ಕಳೆದುಕೊಳ್ಳಲು ಸಾಧ್ಯವಿಲ್ಲ. ಇದು ಮೂರನೇ ಆಕ್ರಮಣವಾಗಿದೆ. ಭವಿಷ್ಯದಲ್ಲಿ ಯಾವುದೇ ಅವಕಾಶದ ಸಾಧ್ಯತೆ ಇಲ್ಲ.
The cessation of military operations on land sea and air from 1700h today is a most welcome development. However we must continue to maintain the pressure on other fronts to reach a permanent long lasting solution. We cannot keep having an incident based response and losing lives…
— Manoj Naravane (@ManojNaravane) May 10, 2025
ಭಾರತದ ಕ್ರಮದಿಂದ ಏನು ಲಾಭವಾಯಿತು ಎಂಬುದನ್ನು ಭವಿಷ್ಯಕ್ಕೆ ಬಿಡೋಣ! – ವೇದ ಮಲಿಕ, ನಿವೃತ್ತ ಸೇನಾ ಮುಖ್ಯಸ್ಥರು
ಏಪ್ರಿಲ್ ೨೨ ರಂದು ಪಹಲ್ಗಾಮ್ನಲ್ಲಿ ನಡೆದ ಭಯಾನಕ ಭಯೋತ್ಪಾದಕ ದಾಳಿಯ ನಂತರ, ಪಾಕಿಸ್ತಾನದ ಕೃತ್ಯಗಳಿಂದ ಭಾರತಕ್ಕೆ ಯಾವುದೇ ರಾಜಕೀಯ-ಕಾರ್ಯತಂತ್ರದ ಲಾಭವಾಗಿದ್ದರೆ, ಅದನ್ನು ನಾವು ಭವಿಷ್ಯಕ್ಕೆ ಬಿಟ್ಟುಬಿಡುತ್ತೇವೆ.
Ceasefire 10 May 25: We have left India’s future history to ask what politico-strategic advantages, if any, were gained after its kinetic and non-kinetic actions post Pakistani horrific terror strike in Pahalgam on 22 Apr.
— Ved Malik (@Vedmalik1) May 10, 2025
ವಿಜಯದ ದವಡೆಯಿಂದ ಸೋಲನ್ನು ಕಸಿದುಕೊಳ್ಳುವುದು ಭಾರತೀಯ ರಾಜಕಾರಣದ ಸಂಪ್ರದಾಯ! – ರಕ್ಷಣಾ ವಿಶ್ಲೇಷಕ ಬ್ರಹ್ಮ ಚೆಲ್ಲಾನಿ ಅವರ ವ್ಯಂಗ್ಯ ಟೀಕೆ
ವಿಜಯದ ದವಡೆಯಿಂದ ಸೋಲನ್ನು ಕಸಿದುಕೊಳ್ಳುವುದು ಭಾರತೀಯ ರಾಜಕೀಯ ಸಂಪ್ರದಾಯವು ಬಹಳ ಕಾಲದಿಂದಲೂ ಇದೆ. ಅದರ ಉದಾಹರಣೆಗಳು ಈ ಕೆಳಗಿನಂತಿವೆ.
೧೯೪೮: ಭಾರತೀಯ ಸೈನ್ಯವು ವಿಜಯದತ್ತ ಸಾಗುತ್ತಿದ್ದಾಗ, ಭಾರತವು ಜಮ್ಮು ಮತ್ತು ಕಾಶ್ಮೀರದ ವಿಷಯವನ್ನು ವಿಶ್ವಸಂಸ್ಥೆಗೆ ಕೊಂಡೊಯ್ದು ನಂತರ ಕದನ ವಿರಾಮಕ್ಕೆ ಒಪ್ಪಿಗೆ ನೀಡಿತು.
೧೯೫೪: ಯಾವುದೇ ವಿನಿಮಯವಿಲ್ಲದೆ, ಭಾರತವು ಟಿಬೆಟ್ನಲ್ಲಿ ತನ್ನ ಹೆಚ್ಚುವರಿ ಪ್ರಾದೇಶಿಕ ಹಕ್ಕುಗಳನ್ನು ಬಿಟ್ಟುಕೊಟ್ಟಿತು ಮತ್ತು ಟಿಬೆಟ್ಗೆ ‘ಚೀನಾದ ಟಿಬೆಟ್ ಪ್ರದೇಶ’ ಎಂದು ಗುರುತಿಸಲಾಯಿತು.
Snatching defeat from the jaws of victory has long been an Indian political tradition. Here are just a few examples:
1948: India takes the Jammu and Kashmir issues to the UN and then agrees to a ceasefire when the Indian Army is marching toward victory.
1954: Without any quid…
— Brahma Chellaney (@Chellaney) May 10, 2025
೧೯೬೦: ಭಾರತವು ಸಿಂಧೂ ನದಿ ಕಣಿವೆಯ ಐದನೇ ನಾಲ್ಕು ಭಾಗದ ನೀರನ್ನು ತನ್ನ ಕಡು ವೈರಿ ಪಾಕಿಸ್ತಾನಕ್ಕೆ ಮೀಸಲಿಡುವ ಒಪ್ಪಂದ ಮಾಡಿಕೊಂಡಿತು.
೧೯೬೬: ಭಾರತವು ಅತ್ಯಂತ ಕಾರ್ಯತಂತ್ರದ ಹಾಜಿ ಪೀರ್ ಪ್ರದೇಶವನ್ನು ಪಾಕಿಸ್ತಾನಕ್ಕೆ ಹಿಂತಿರುಗಿಸಿತು, ಇದು ೧೯೬೫ ರ ಯುದ್ಧವನ್ನು ಪ್ರಾರಂಭಿಸಿತು, ನಂತರ ಅದು ಪಾಕಿಸ್ತಾನಕ್ಕೆ ಭಾರತದೊಳಗೆ ಭಯೋತ್ಪಾದಕರನ್ನು ನುಗ್ಗಿಸಲು ಕೇಂದ್ರವಾಯಿತು.
೧೯೭೨: ಭಾರತವು ಶಿಮ್ಲಾ ಒಪ್ಪಂದದಲ್ಲಿ ಪಾಕಿಸ್ತಾನದಿಂದ ಏನನ್ನೂ ಪಡೆಯದೆ ಮಾತುಕತೆಯ ಮೇಜಿನ ಮೇಲೆ ಯುದ್ಧದಲ್ಲಿ ಪಡೆದ ಲಾಭಗಳನ್ನು ಪಾಕಿಸ್ತಾನಕ್ಕೆ ಹಿಂತಿರುಗಿಸಿತು.
೨೦೨೧: ೨೦೨೦ ರಲ್ಲಿ ಲಡಾಖ್ನ ಪ್ರಮುಖ ಗಡಿ ಪ್ರದೇಶಗಳಲ್ಲಿ ಚೀನಾ ರಹಸ್ಯವಾಗಿ ಒಳನುಗ್ಗಿದ ನಂತರ, ಭಾರತವು ಕಾರ್ಯತಂತ್ರದ ಸ್ಥಳಗಳಲ್ಲಿದ್ದ ಕೈಲಾಸ ಬೆಟ್ಟಗಳನ್ನು ಖಾಲಿ ಮಾಡಿತು. ಈ ಬೆಟ್ಟಗಳು ಎಷ್ಟು ಮುಖ್ಯವಾಗಿದ್ದವೆಂದರೆ, ಮಾತುಕತೆಗಳಲ್ಲಿ ಚೀನಾದ ಮೇಲೆ ಒತ್ತಡ ಹೇರಲು ಭಾರತದ ಬಳಿ ಇದ್ದ ಏಕೈಕ ಬಲವಾದ ಅಸ್ತ್ರವಾಗಿತ್ತು. ನಂತರ ಲಡಾಖ್ನ ಕೆಲವು ಭಾಗಗಳಲ್ಲಿ ಚೀನಾ ರಚಿಸಿದ ‘ಬಫರ್ ವಲಯ’ವನ್ನು (ತಟಸ್ಥ ಪ್ರದೇಶವು ಶತ್ರು ರಾಷ್ಟ್ರಗಳನ್ನು ಬೇರ್ಪಡಿಸುವ ಕೆಲಸ ಮಾಡುತ್ತದೆ) ಅಂಗೀಕರಿಸಲಾಯಿತು.
೨೦೨೫: ಪಾಕಿಸ್ತಾನವು ೪ ದಶಕಗಳಿಂದ ನಡೆಸಿಕೊಂಡು ಬಂದ ‘ಸಾವಿರಾರು ಗಾಯಗಳ ಯುದ್ಧ’ವನ್ನು ಕೊನೆಗೊಳಿಸಲು ಭಾರತವು ‘ಆಪರೇಷನ್ ಸಿಂಧೂರ್’ ಅನ್ನು ಪ್ರಾರಂಭಿಸಿತು; ಆದರೆ ಯಾವುದೇ ಸ್ಪಷ್ಟ ಗುರಿಯನ್ನು ಸಾಧಿಸದೆ ೩ ದಿನಗಳ ನಂತರ ಅದನ್ನು ರದ್ದುಗೊಳಿಸಲಾಯಿತು.
ಸಂಪಾದಕೀಯ ನಿಲುವುಕಳೆದ ಮೂರುವರೆ ದಶಕಗಳಿಂದ ಪಾಕಿಸ್ತಾನವು ಭಾರತದ ವಿರುದ್ಧ ಜಿಹಾದಿ ಭಯೋತ್ಪಾದನೆಯನ್ನು ಮುಂದುವರಿಸಿದ್ದರೂ, ಭಾರತವು ಅದನ್ನು ಎಂದಿಗೂ ಬೇರುಸಹಿತ ಕಿತ್ತುಹಾಕಲು ಪ್ರಯತ್ನಿಸಲಿಲ್ಲ. ಈಗ ಆ ಅವಕಾಶವಿದ್ದರೂ, ಕದನ ವಿರಾಮವನ್ನು ಘೋಷಿಸುವುದು ಜನರಿಗೆ ಅನಿರೀಕ್ಷಿತವಾಗಿತ್ತು. ಇದರಿಂದ ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆ ಕೊನೆಗೊಂಡಿಲ್ಲ ಮತ್ತು ಅದು ಹಿಂದೂಗಳ ರಕ್ತವನ್ನು ಹರಿಸುತ್ತಲೇ ಇರುತ್ತದೆ ಎಂಬ ಕಠೋರ ಸತ್ಯ ಹಾಗೆಯೇ ಉಳಿಯುತ್ತದೆ! |