Congress Leader Statement : ‘ಆಪರೇಷನ್ ಸಿಂಧೂರ್’ನಿಂದ ನೇರ ಪರಿಣಾಮ ಬೀರುವುದಿಲ್ಲವಂತೆ

ಕಾಂಗ್ರೆಸ್ ನಾಯಕ ಪೃಥ್ವಿರಾಜ್ ಚವ್ಹಾಣ್ ಅವರ ವ್ಯಂಗ್ಯ !

ಮುಂಬಯಿ – ಸರಕಾರವು ‘ಆಪರೇಷನ್ ಸಿಂಧೂರ್’ ಎಂಬ ಹೆಸರನ್ನು ಆಯ್ಕೆ ಮಾಡಿದ್ದರೂ, ಅದರಿಂದ ನೇರ ಪರಿಣಾಮ ಬೀರುವುದಿಲ್ಲ. ವೋಟ್ ಬ್ಯಾಂಕ್ ಅನ್ನು ಸಂತೋಷಪಡಿಸಲು ವಿಧವೆಯರ ಭಾವನೆಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಕಾಂಗ್ರೆಸ್ ನಾಯಕ ಪೃಥ್ವಿರಾಜ್ ಚವ್ಹಾಣ್ ಹೇಳಿದ್ದಾರೆ. ಇದಕ್ಕೆ ಕಾಂಗ್ರೆಸ್ ವಕ್ತಾರ ಪವನ್ ಖೇರಾ, “ಈ ಸಮಯದಲ್ಲಿ ಪ್ರತಿಕ್ರಿಯಿಸುವುದು ಸೂಕ್ತವಲ್ಲ. ಪ್ರಸ್ತುತ ಪರಿಸ್ಥಿತಿಯಲ್ಲಿ ಸರಕಾರ ತೆಗೆದುಕೊಳ್ಳುವ ಪ್ರತಿಯೊಂದು ನಿರ್ಧಾರಕ್ಕೂ ನಮ್ಮ ಸಂಪೂರ್ಣ ಬೆಂಬಲವಿದೆ. ನಾವು ಸರಕಾರದ ಬೆಂಬಲಕ್ಕೆ ದೃಢವಾಗಿ ನಿಲ್ಲುತ್ತೇವೆ” ಎಂದಿದ್ದಾರೆ.
ಪೃಥ್ವಿರಾಜ್ ಚವ್ಹಾಣ್ ಅವರ ಹೇಳಿಕೆಗೆ ಭಾಜಪದಿಂದ ಟೀಕೆ!

ಭಾಜಪದಿಂದ ರಾಷ್ಟ್ರೀಯ ವಕ್ತಾರ ತುಹಿನ್ ಎ. ಸಿನ್ಹಾ ಇವರು, “ಪೃಥ್ವಿರಾಜ್ ಚವ್ಹಾಣ್ ಅವರ ಹೇಳಿಕೆ ನಾಚಿಕೆಗೇಡಿನದ್ದಾಗಿದೆ. ವರ್ಷಗಳಿಂದ ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದಕರು ನಮ್ಮ ತಾಯಂದಿರು ಮತ್ತು ಸಹೋದರಿಯರ ಸಿಂಧೂರವನ್ನು ಅಳಿಸುತ್ತಿದ್ದಾರೆ. ‘ಆಪರೇಷನ್ ಸಿಂಧೂರ್’ ಅಡಿಯಲ್ಲಿ ಭಾರತವು ನಡೆಸಿದ ದಾಳಿಯ ನಂತರ, ಯಾವುದೇ ಭಯೋತ್ಪಾದಕರು ಮತ್ತೆ ಅಂತಹ ಕೃತ್ಯವನ್ನು ಮಾಡಲು ಧೈರ್ಯ ಮಾಡುವುದಿಲ್ಲ, ಇದು ‘ಆಪರೇಷನ್ ಸಿಂಧೂರ್’ ನ ಅರ್ಥ. ಅಂತಹದ್ದೇನಾದರೂ ಮಾಡುವ ಮೊದಲು ಅವರು ಹತ್ತು ಬಾರಿ ಯೋಚಿಸುತ್ತಾರೆ” ಎಂದು ಹೇಳಿದ್ದಾರೆ. ಭಾಜಪ ಶಾಸಕ ರಾಮ ಕದಂ, “ಇಂತಹ ಸೂಕ್ಷ್ಮ ವಿಷಯಗಳನ್ನು ಅಗ್ಗದ ರಾಜಕಾರಣಕ್ಕೆ ಜೋಡಿಸುವ ಕಾಂಗ್ರೆಸ್ ನಾಯಕರ ಹಳೆಯ ಅಭ್ಯಾಸವಾಗಿದೆ ” ಎಂದು ಹೇಳಿದ್ದಾರೆ.

ಸಂಪಾದಕೀಯ ನಿಲುವು

  • ಕಾಂಗ್ರೆಸ್ ತನ್ನ ಆಳ್ವಿಕೆಯ ಅವಧಿಯಲ್ಲಿ ಭಯೋತ್ಪಾದನೆಯ ವಿರುದ್ಧ ಏನನ್ನೂ ಮಾಡದೆ ಕೇವಲ ಭಯೋತ್ಪಾದನೆಯನ್ನು ಪ್ರೋತ್ಸಾಹಿಸುವ ಪ್ರಯತ್ನ ಮಾಡಿದೆ, ಇದು ಎಲ್ಲರಿಗೂ ತಿಳಿದಿರುವ ವಿಷಯ. ಹೀಗಿರುವಾಗ ಕಾಂಗ್ರೆಸ್ ನಾಯಕರಿಗೆ ಭಯೋತ್ಪಾದನೆಯ ವಿರುದ್ಧದ ಕ್ರಮದ ಬಗ್ಗೆ ಮಾತನಾಡುವ ಹಕ್ಕಾದರೂ ಎಲ್ಲಿದೆ?

 

  • ‘ಆಪರೇಷನ್ ಸಿಂಧೂರ್’ ಎಂಬ ಹೆಸರು ಎಲ್ಲಾ ಭಾರತೀಯರಿಗೆ ಹೆಮ್ಮೆಯ ವಿಷಯವಾಗಿದ್ದರೂ, ಪೃಥ್ವಿರಾಜ್ ಚವ್ಹಾಣ್ ಅವರಿಗೆ ಮಾತ್ರ ಅದು ಏಕೆ ಚುಚ್ಚುತ್ತದೆ, ಇದರಿಂದ ಅವರಲ್ಲಿ ರಾಷ್ಟ್ರೀಯ ಅಭಿಮಾನ ಎಷ್ಟಿದೆ ಎಂದು ತಿಳಿದು ಬರುತ್ತದೆ!

 

  • ‘ಆಪರೇಷನ್ ಸಿಂಧೂರ್’ ಇದನ್ನು ಕೇವಲ ಹೆಸರಿನ ದೃಷ್ಟಿಕೋನದಿಂದ ನೋಡದೆ, ಆ ಕಾರ್ಯಾಚರಣೆಯು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಏನು ಸಾಧಿಸಿದೆ ಎಂಬುದನ್ನು ನೋಡಲು ಕಲಿಯಬೇಕು! ಆದರೆ ಕಾಂಗ್ರೆಸ್ ಹಾಗೆ ಮಾಡುವುದಿಲ್ಲ, ಎನ್ನುವುದೂ ಅಷ್ಟೇ ಸತ್ಯ!