‘ಅಬೀರ್ ಗುಲಾಲ್’ ಚಲನ ಚಿತ್ರದ ಮೂಲಕ ಹಿಂದಿ ಚಿತ್ರರಂಗಕ್ಕೆ ಮರುಪ್ರವೇಶ ನಿರೀಕ್ಷಿಸಲಾಗಿತ್ತು
ಇಸ್ಲಾಮಾಬಾದ್ – ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ ನೆಲೆಗಳ ಮೇಲೆ ಭಾರತೀಯ ಸೇನೆ ದಾಳಿ ನಡೆಸಿದ ನಂತರ, ಪಾಕಿಸ್ತಾನಿ ಕಲಾವಿದರು ಭಾರತದ ವಿರುದ್ಧ ಕೆಟ್ಟದಾಗಿ ಮಾತನಾಡಲು ಪ್ರಾರಂಭಿಸಿದ್ದಾರೆ. ಹಾನಿಯಾ ಅಮೀರ್ ಮತ್ತು ಮಹಿರಾ ಖಾನ್ ಅವರು ‘ಆಪರೇಷನ್ ಸಿಂಧೂರ್’ ಕುರಿತು ಭಾರತವನ್ನು ಟೀಕಿಸಿದ್ದರು. ಇದರ ನಂತರ, ನಟ ಫವಾದ್ ಖಾನ್ ಅವರು ಭಾರತ ನಡೆಸಿದ ‘ಆಪರೇಷನ್ ಸಿಂಧೂರ್’ ಅನ್ನು ‘ಲಚ್ಚಾಸ್ಪದ’ ಎಂದು ಕರೆದಿದ್ದಾರೆ. ಫವಾದ್ ಖಾನ್ ಅವರ ‘ಅಬೀರ್ ಗುಲಾಲ್’ ಚಿತ್ರವು ಭಾರತದಲ್ಲಿ ಬಿಡುಗಡೆಯಾಗಬೇಕಿತ್ತು; ಆದರೆ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ, ಅವರ ಈ ಚಿತ್ರದ ಪ್ರದರ್ಶನವನ್ನು ಭಾರತದಲ್ಲಿ ನೇರವಾಗಿ ನಿಷೇಧಿಸಲಾಯಿತು. ಈ ಚಿತ್ರದ ಮೂಲಕ ಅವರು ಬಾಲಿವುಡ್ಗೆ ಮರಳಲು ಸಿದ್ಧರಾಗಿದ್ದರು.
Pakistani actor Fawad Khan calls 'Operation Sindoor' shameful — all while eyeing a Bollywood comeback with 'Abir Gulaal'.
This exposes the mindset of many Pakistani artists. Yet, they continue to get red carpet treatment in Indian cinema. Outrageous.
🇮🇳 #OperationSindoor2 |… pic.twitter.com/g9g9PBz4de
— Sanatan Prabhat (@SanatanPrabhat) May 8, 2025
ಫವಾದ್ ಖಾನ್ ತಮ್ಮ ಪೋಸ್ಟ್ನಲ್ಲಿ, ‘ಈ ಲಜ್ಜಾಸ್ಪದ ದಾಳಿಯಲ್ಲಿ ಪ್ರಾಣ ಕಳೆದುಕೊಂಡ ಮತ್ತು ಗಾಯಗೊಂಡ ಕುಟುಂಬಗಳಿಗೆ ನಾನು ತೀವ್ರ ದುಃಖವನ್ನು ವ್ಯಕ್ತಪಡಿಸುತ್ತೇನೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ನಾನು ಪ್ರಾರ್ಥಿಸುತ್ತೇನೆ ಮತ್ತು ಅವರ ಕುಟುಂಬಗಳಿಗೆ ಈ ದುಃಖವನ್ನು ಸಹಿಸಿಕೊಳ್ಳುವ ಶಕ್ತಿ ಸಿಗಲಿ. ಗೊಂದಲವನ್ನುಂಟುಮಾಡುವ ಮಾತುಗಳಿಂದ ಬೆಂಕಿ ಹಚ್ಚುವುದನ್ನು ನಿಲ್ಲಿಸುವಂತೆ ನಾನು ಎಲ್ಲರಿಗೂ ಗೌರವದಿಂದ ವಿನಂತಿಸುತ್ತೇನೆ. ಎಲ್ಲರಿಗೂ ಸದ್ಬುದ್ಧಿ ಬರಲಿ, ಇನ್ಶಾ ಅಲ್ಲಾ. ಪಾಕಿಸ್ತಾನ್ ಜಿಂದಾಬಾದ್.’ ಎಂದು ಹೇಳಿದ್ದಾರೆ.
ಸಂಪಾದಕೀಯ ನಿಲುವುಇದರಿಂದ ಪಾಕಿಸ್ತಾನಿ ಕಲಾವಿದರ ಮನಸ್ಥಿತಿ ಗಮನಕ್ಕೆ ಬರುತ್ತದೆ. ಇಂತಹ ಕಲಾವಿದರಿಗೆ ಭಾರತೀಯ ಚಿತ್ರರಂಗದಲ್ಲಿ ಸ್ವಾಗತಿಸುವುದು ಖೇದಕರ ! |