ಪಾಕಿಸ್ತಾನಪುರಸ್ಕೃತ ಭಯೋತ್ಪಾದನೆಯ ಬದಲಾಗುತ್ತಿರುವ ತಂತ್ರ !

ಜಮ್ಮು-ಕಾಶ್ಮೀರ ರಾಜ್ಯದ ಪಹಲಗಾಮ್‌ ನಲ್ಲಿನ ಭೀಕರ ಭಯೋತ್ಪಾದನಾ ದಾಳಿಯಿಂದ ಪಾಕಿಸ್ತಾನ ಪುರಸ್ಕೃತ ಭಯೋತ್ಪಾದನೆಯ ಬದಲಾಗುತ್ತಿರುವ ತಂತ್ರ ಬೆಳಕಿಗೆ ಬಂದಿದೆ. ಕಳೆದ ಕೆಲವು ತಿಂಗಳಲ್ಲಿ ‘ಟಾರ್ಗೆಟ್‌ ಕಿಲ್ಲಿಂಗ್‌’ನ (ಗುರಿಯಿಟ್ಟು ಕೊಲ್ಲುವ) ಚಟುವಟಿಕೆ ಕಾಶ್ಮೀರದಲ್ಲಿ ಕಾಣಿಸುತ್ತಿತ್ತು; ಆದರೆ ಧರ್ಮವನ್ನು ಕೇಳಿ ಹತ್ಯೆ ಮಾಡುವುದ ರಿಂದ ಭಯೋತ್ಪಾದಕರಿಗೆ ಜನಸಾಮಾನ್ಯರಲ್ಲಿ ಭಯ ಹುಟ್ಟಿಸಲಿಕ್ಕಿದೆ. ಪಾಕ್‌ಪುರಸ್ಕೃತ ಭಯೋತ್ಪಾದಕ ಸಂಘಟನೆ ಈ ರೀತಿ ಧಾರ್ಮಿಕ ಆಧಾರದಲ್ಲಿ ಭೀತಿ ಹುಟ್ಟಿಸಲು ಪ್ರಯತ್ನಿಸುತ್ತಿದೆ. ಅಮರನಾಥ ಯಾತ್ರೆಯ ಹಿನ್ನೆಲೆಯಲ್ಲಿ ಇತ್ತೀಚೆಗೆ ಆಗಿರುವ ದಾಳಿಯ ಮೂಲಕ ಭಯೋತ್ಪಾದಕರಿಗೆ ಇತರ ಧರ್ಮದವರು ಜಮ್ಮು-ಕಾಶ್ಮೀರಕ್ಕೆ ಬರಬಾರದು ಎಂಬ ಎಚ್ಚರಿಕೆ ನೀಡಲಿಕ್ಕಿದೆ.

೧. ಭಯೋತ್ಪಾದಕರು ದಾಳಿ ಮಾಡುವುದರಲ್ಲಿ ಮಾಡಿದ ಬದಲಾವಣೆ

ಜಮ್ಮು-ಕಾಶ್ಮೀರದ ಪಹಲಗಾಮ್‌ನಲ್ಲಿನ ಬೈಸರನ ಕಣಿವೆ ಯಲ್ಲಿ ನಡೆದಿರುವ ಭಯೋತ್ಪಾದಕರ ದಾಳಿಯು ಭೀಕರ, ಘಾತಕ ಹಾಗೂ ಅಷ್ಟೇ ಹೃದಯವಿದ್ರಾವಕವಿದೆ. ೨೦೧೯ ರ ಪುಲವಾಮಾ ಆಕ್ರಮಣದ ನಂತರದ ಅತಿ ದೊಡ್ಡ ಭಯೋತ್ಪಾದಕ ದಾಳಿ ಇದಾಗಿದೆ. ಪುಲವಾಮಾದಲ್ಲಿನ ದಾಳಿಯು ಸೈನಿಕರ ಮೇಲಾಗಿತ್ತು; ಆದರೆ ಪಹಲಗಾಮ್‌ನಲ್ಲಿನ ದಾಳಿಯಲ್ಲಿ ಸಾಮಾನ್ಯ ನಾಗರಿಕರನ್ನು ಮತ್ತು ವಿಶೇಷವಾಗಿ ಪ್ರವಾಸಿಗರನ್ನು ಗುರಿಪಡಿಸಲಾಯಿತು. ಈ ಬದಲಾವಣೆಯು ಮಹತ್ವದ್ದಾಗಿದ್ದು ಅದರ ಗೂಢಾರ್ಥವನ್ನು ತಿಳಿದುಕೊಳ್ಳುವ ಅವಶ್ಯಕತೆಯಿದೆ. ಪಹಲಗಾಮ್‌ನಲ್ಲಿ ಈ ಹಿಂದೆಯೂ ಭಯೋತ್ಪಾದನಾ ದಾಳಿಗಳಾಗಿದ್ದವು. ಸುಮಾರು ಎರಡುವರೆ ದಶಕಗಳ ಹಿಂದೆ ಇಸವಿ ೨೦೦೦ ದಲ್ಲಿ ಅಮರನಾಥ ಬೇಸ್‌ ಕ್ಯಾಂಪ್‌ನ ಮೇಲಾದ ಭಯೋತ್ಪಾದಕ ದಾಳಿಯಲ್ಲಿ ೩೦ ಜನರು ಬಲಿಯಾಗಿದ್ದರು.

ಡಾ. ಶೈಲೇಂದ್ರ ದೇವಳಾಣಕರ್‌

೨೦೦೧ ರಲ್ಲಿ ಶೇಷನಾಗದಲ್ಲಿ ತೀರ್ಥಯಾತ್ರೆಗೆ ಹೋಗಿದ್ದ ಭಕ್ತರ ಮೇಲೆ ಆಗಿರುವ ಭಯೋತ್ಪಾದಕ ದಾಳಿಯಲ್ಲಿ ೧೩ ಜನರು ಮೃತರಾಗಿದ್ದರು. ೨೦೦೨ ರಲ್ಲಿ ಪಹಲಗಾಮ್‌ನಲ್ಲಿ ಆಗಿರುವ ದಾಳಿಯಲ್ಲಿ ೧೧ ಜನರು ಪ್ರಾಣ ಕಳೆದುಕೊಂಡಿದ್ದರು. ೨೦೧೭ ರಲ್ಲಿ ಅಮರನಾಥ ಯಾತ್ರೆ ಮುಗಿಸಿಕೊಂಡು ಮನೆಗೆ ಹಿಂತಿರುಗುತ್ತಿದ್ದ ಭಕ್ತರ ಮೇಲಾದ ದಾಳಿಯಲ್ಲಿ ೮ ಜನರು ಸಾವನ್ನಪ್ಪಿದ್ದರು. ಆದರೂ ಈ ಬಾರಿಯ ದಾಳಿಯಲ್ಲಿ ಪ್ರವಾಸಿಗರಿಗೆ ಹೆಸರು ಮತ್ತು ಧರ್ಮ ಯಾವುದೆಂದು ಕೇಳಿ ಗುಂಡು ಹಾರಿಸಲಾಯಿತು. ಆದ್ದರಿಂದ ಈ ದಾಳಿಗೆ ಬೇರೆಯೆ ಒಂದು ಆಯಾಮವಿದೆ.

೨. ಪಹಲಗಾಮ್‌ನಲ್ಲಿನ ದಾಳಿಯ ಹಿಂದಿನ ಮುಖ್ಯ ತಾತ್ಕಾಲಿಕ ಉದ್ದೇಶ

ಪಹಲಗಾಮ್‌ನಲ್ಲಿ ಉಪಯೋಗಿಸಿದ ಪದ್ಧತಿಯನ್ನು ನೋಡಿದಾಗ ಅಲ್‌ ಕಾಯದಾ, ಐಸಿಸ್‌ನಂತಹ ಅಂತರರಾಷ್ಟ್ರೀಯ ಭಯೋತ್ಪಾದಕ ಸಂಘಟನೆಗಳು ಉಪಯೋಗಿಸುವ ‘ಮೋಡಸ್‌ ಓಪರಂಡಿ’ (ಕಾರ್ಯಪದ್ಧತಿ) ಉಪಯೋಗಿಸಿರುವುದು ಕಾಣಿಸುತ್ತದೆ. ಕಳೆದ ಕೆಲವು ವರ್ಷಗಳಿಂದ ಭಾರತ ಜಾಗತಿಕ ಸಮುದಾಯಕ್ಕೆ ಒಂದು ವಿಷಯವನ್ನು ಹೇಳಲು ನಿರಂತರ ಪ್ರಯತ್ನಿಸುತ್ತಿದೆ, ಅದೇನೆಂದರೆ, ಪಾಕ್‌ ಬೆಂಬಲಿತ ಭಯೋತ್ಪಾದಕರ ಮೂಲಕ ಜಮ್ಮು-ಕಾಶ್ಮೀರದಲ್ಲಿ ರಾಷ್ಟ್ರವಿರೋಧಿ ಕಾರ್ಯಾಚರಣೆ ಮಾಡುವ ಜೈಶ್‌-ಎ-ಮಹಮ್ಮದ, ಲಷ್ಕರ-ಎ-ತೊಯಬಾದಂತಹ ಸಂಘಟನೆಗಳು ಪಾಕ್ ಆಕ್ರಮಿತ  ಕಾಶ್ಮೀರದಲ್ಲಿ ಸಕ್ರಿಯವಾಗಿದ್ದು ಅಲ್ಲಿಂದ ಅವರು ಭಾರತದಲ್ಲಿ ಭಯೋತ್ಪಾದನೆ ಹಬ್ಬಿಸುವ ಕಾರ್ಯ ಮಾಡುತ್ತಿವೆ. ಈ ಎಲ್ಲ ಸಂಘಟನೆಗಳು ಧಾರ್ಮಿಕ ಆಧಾರದಲ್ಲಿ ಭಯಹುಟ್ಟಿಸುವ ಪ್ರಯತ್ನ ಮಾಡುತ್ತಿವೆ. ಇದರ ಮೂಲಕ ‘ಇತರ ಧರ್ಮದವರು ಜಮ್ಮು-ಕಾಶ್ಮೀರಕ್ಕೆ ಬರಬಾರದು’, ಎಂದು ಅವರಿಗೆ ಹೇಳಲಿಕ್ಕಿದೆ. ಸದ್ಯ ಅಮರನಾಥ ಯಾತ್ರೆಯ ನಿಮಿತ್ತ ದಲ್ಲಿ ದೊಡ್ಡ ಪ್ರಮಾಣದಲ್ಲಿ ಭಕ್ತರು ಈ ಪ್ರದೇಶದಿಂದ ಹೋಗಲಿಕ್ಕಿದ್ದಾರೆ. ಅವರಿಗೆ ಎಚ್ಚರಿಕೆ ಕೊಡುವುದು, ಅವರ ಮನಸ್ಸಿನಲ್ಲಿ ಭಯ ಹುಟ್ಟಿಸುವುದು ಇದು ಪಹಲಗಾಮ್‌ ಆಕ್ರಮಣದ ಹಿಂದಿನ ಒಂದು ಪ್ರಮುಖ ಉದ್ದೇಶವಾಗಿದೆ.

೩. ಕಾಶ್ಮೀರದ ಸಮಸ್ಯೆಯನ್ನು ಅಂತಾರಾಷ್ಟ್ರೀಕರಣಗೊಳಿಸಲು ಭಯೋತ್ಪಾದನಾ ದಾಳಿ ಮಾಡಲಾಗುತ್ತದೆ

ಇನ್ನೊಂದು ವಿಷಯವೆಂದರೆ, ಈ ದಾಳಿಯಿಂದ ಭಯೋತ್ಪಾದಕರು ಇತ್ತೀಚೆಗೆ ಆರಂಭಿಸಿರುವ ‘ಟಾರ್ಗೆಟ್‌ ಕಿಲ್ಲಿಂಗ್‌’ಗೆ ಇನ್ನೊಂದು ಹೊಸ ತಿರುವನ್ನು ನೀಡಿದ್ದಾರೆ. ಧರ್ಮವನ್ನು ಕೇಳಿ ಹತ್ಯೆ ಮಾಡುವ ಮೂಲಕ ಭಯೋತ್ಪಾದಕರಿಗೆ ಜನಸಾಮಾನ್ಯರ ಮನಸ್ಸಿನಲ್ಲಿ ಭೀತಿ ಹುಟ್ಟುಹಾಕಲಿಕ್ಕಿದೆ. ಈ ಹಿಂದೆ ಯುರೋಪ್‌ನಲ್ಲಿ ‘ಐಸಿಸ್’ ಈ ಭಯೋತ್ಪಾದಕ ಸಂಘಟನೆಯಿಂದ ದಾಳಿ ಮಾಡ ಲಾಗಿತ್ತು. ಈ ದಾಳಿಯಲ್ಲಿಯೂ ಜನಸಾಮಾನ್ಯರನ್ನೇ ಗುರಿಪಡಿಸ ಲಾಗಿತ್ತು. ಹೀಗೆ ಮಾಡುವುದರಿಂದ ಸಂಪೂರ್ಣ ದೇಶದಾದ್ಯಂತ ತೀವ್ರ ಪ್ರತಿಕ್ರಿಯೆಗಳು ಬರುತ್ತವೆ, ಮಾಧ್ಯಮಗಳಿಂದ ಪ್ರಸಿದ್ಧಿ ಸಿಗುತ್ತದೆ. ಪಾಕಿಸ್ತಾನ ಯಾವಾಗಲೂ ಜಮ್ಮು-ಕಾಶ್ಮೀರದಲ್ಲಿ ವಿವಿಧ ಅವಕಾಶವನ್ನು ಸಾಧಿಸಿ ಭಯೋತ್ಪಾದಕ ದಾಳಿ ಮಾಡಲು ಪ್ರಯತ್ನಿಸಿದೆ. ಇದರಿಂದ ಕಾಶ್ಮೀರದ ಸಮಸ್ಯೆಯನ್ನು ಅಂತಾರಾಷ್ಟ್ರೀಕರಣ ಮಾಡುವ ಅದರ ಉದ್ದೇಶ ಸಫಲವಾಗುತ್ತದೆ. ಕಳೆದ ೩ ದಶಕಗಳ ಇತಿಹಾಸವನ್ನು ನೋಡಿದರೆ ಪಾಕಿಸ್ತಾನ ಯಾವಾಗಲೂ ಭಾರತದಲ್ಲಿ ಮಹತ್ವದ ನಿಯೋಜನೆಯ ಸಮಯದಲ್ಲಿಯೇ ಕಾಶ್ಮೀರದಲ್ಲಿ ಭಯೋತ್ಪಾದನಾ ದಾಳಿ ಅಥವಾ ಯುದ್ಧ ವಿರಾಮದ ಉಲ್ಲಂಘನೆ ಮಾಡಿದೆ.

ಕಳೆದ ವರ್ಷ ಪ್ರಧಾನಮಂತ್ರಿಗಳು ಪ್ರಮಾಣವಚನ ಸಮಾರಂಭವನ್ನು ನೆರವೇರಿಸುವಾಗ, ನೆರೆ ರಾಷ್ಟ್ರಗಳ ಪ್ರಮುಖರು ಭಾರತದಲ್ಲಿ ಬಂದಿರುವಾಗ ಭಯೋತ್ಪಾದನಾ ದಾಳಿ ಆಗಿತ್ತು. ಅನಂತರ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ರಷ್ಯಾದ ಪ್ರವಾಸದ ಸಿದ್ಧತೆಯಲ್ಲಿರುವಾಗ ಕಠುಆದಲ್ಲಿ ಆಕ್ರಮಣ ಮಾಡಿಸಿತ್ತು. ಇಸವಿ ೨೦೦೦ ದಲ್ಲಿ ಬಿಲ್‌ ಕ್ಲಿಂಟನ್‌ ಭಾರತದ ಭೇಟಿಗೆ ಬಂದಿರುವಾಗ ಹಾಗೂ ಭಾರತದ ಸಂಸತ್ತಿನಲ್ಲಿ ಅವರು ಭಾಷಣ ಮಾಡುತ್ತಿರುವಾಗ ಇಂತಹ ದಾಳಿಯು ಕಾಶ್ಮೀರದಲ್ಲಿ ಆಗಿತ್ತು. ಇದರ ಹಿಂದೆ ನಿಯೋಜನಬದ್ಧ ರಣನೀತಿ ಇದೆ, ಅದೇನೆಂದರೆ ಪಾಕಿಸ್ತಾನಕ್ಕೆ ಇಂತಹ ದಾಳಿ ಮಾಡಿ ಕಾಶ್ಮೀರದ ಸಮಸ್ಯೆಯನ್ನು ಅಂತಾರಾಷ್ಟ್ರೀಕರಣ ಮಾಡಲಿಕ್ಕಿದೆ.

೪. ಪಹಲಗಾಮ್‌ನಲ್ಲಿನ ದಾಳಿಯ ಕಾಲದ ಹಿಂದಿನ ಮಹತ್ವ

ಈಗ ಕೂಡ ಪಹಲಗಾಮ್‌ನಲ್ಲಿನ ದಾಳಿಯ ಪ್ರಸಂಗವನ್ನು ನೋಡಿದರೆ ಅದು ಸ್ಪಷ್ಟವಾಗಿ ಅರಿವಾಗುತ್ತದೆ. ಅಮೇರಿಕಾದ ಉಪರಾಷ್ಟ್ರಾಧ್ಯಕ್ಷ ಭಾರತ ಭೇಟಿಗಾಗಿ ಬಂದಿದ್ದರು. ಟ್ರಂಪ್‌ ಆಡಳಿತದ ಕಾರ್ಯಕಲಾಪ ಆರಂಭವಾದ ನಂತರ ಮೊದಲ ಬಾರಿಗೆ ಅಮೇರಿಕಾದ ಉಪರಾಷ್ಟ್ರಾಧ್ಯಕ್ಷರ ವಿದೇಶ ಪ್ರವಾಸ ಆರಂಭವಾದಾಗ ಅವರು ಭಾರತವನ್ನು ಆರಿಸಿದರು. ಆದ್ದರಿಂದ ಈ ಪ್ರವಾಸ ಕೇವಲ ಭಾರತದ ದೃಷ್ಟಿಯಲ್ಲಿಯೇ ಅಲ್ಲ, ಜಗತ್ತಿನ ದೃಷ್ಟಿಯಲ್ಲಿಯೂ ಮಹತ್ವದ್ದಾಗಿತ್ತು. ಇನ್ನೊಂದು ಕಡೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸೌದಿ ಅರೇಬಿಯಾದ ಪ್ರವಾಸದಲ್ಲಿದ್ದರು ಹಾಗೂ ಭಾರತ ಮತ್ತು ಸೌದಿಯ ನಡುವೆ ಅತ್ಯಂತ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಲಿಕ್ಕಿತ್ತು. ಇಂತಹ ಸಂದರ್ಭದಲ್ಲಿ ಇಸ್ಲಾಮೀ ಜಗತ್ತಿನ ಮತ್ತು ಪಶ್ಚಿಮ ದೇಶಗಳಲ್ಲಿನ ಮಾಧ್ಯಮಗಳು ಭಾರತವನ್ನು ಕೇಂದ್ರವಾಗಿಟ್ಟುಕೊಂಡಿದ್ದವು. ಈ ಸಮಯವನ್ನು ಸಾಧಿಸಿ ಪಹಲಗಾಮ್‌ನಲ್ಲಿನ ಆಕ್ರಮಣ ಮಾಡ ಲಾಯಿತು, ಅಂದರೆ ಇದಕ್ಕೆ ಜಗತ್ತಿನಾದ್ಯಂತ ಪ್ರಸಿದ್ಧಿ ಸಿಗುತ್ತದೆ.

೫. ಭಾರತದಲ್ಲಿ ಅಶಾಂತಿ ಸೃಷ್ಟಿಸುವುದೇ ಉದ್ದೇಶ  

ಕಳೆದ ಕೆಲವು ವರ್ಷಗಳಲ್ಲಿ ಜಮ್ಮು-ಕಾಶ್ಮೀರದಲ್ಲಿನ ದಾಳಿಗಳ ಹೊರತು ಉಳಿದ ಭಾರತದಲ್ಲಿ ಒಂದೇ ಒಂದು ಭಯೋತ್ಪಾದಕ ದಾಳಿಯಾಗಿಲ್ಲ. ಸಮಾಜದಲ್ಲಿ ಶಾಂತಿಯ ವಾತಾವರಣವಿದೆ. ಕೋವಿಡ್‌ ಮಹಾಮಾರಿಯ ನಂತರದಲ್ಲಿ ಭಾರತದ ಕಡೆಗೆ ಜಾಗತಿಕ ಪ್ರವಾಸಿಗರ ಆಕರ್ಷಣೆ ಹೆಚ್ಚಾಗುತ್ತಿದೆ. ಈ ಎಲ್ಲ ಸಕಾರಾತ್ಮಕ ಪರಿಣಾಮಗಳನ್ನು ತಡೆಯುವ ಉದ್ದೇಶವೂ ಇಂತಹ ದಾಳಿಯ ಹಿಂದೆ ಇರುತ್ತದೆ. ಪಾಕಿಸ್ತಾನ ಇದರ ಮೂಲಕ ‘ಭಾರತದಲ್ಲಿ ಅಸ್ಥಿರತೆ ಹಾಗೂ ಅಶಾಂತಿಯಿದೆ’, ಎಂದು ತೋರಿಸಲು ಪ್ರಯತ್ನಿಸುತ್ತಿದೆ. ಕಳೆದ ೧೦ ವರ್ಷಗಳಲ್ಲಿ ಭಾರತದಲ್ಲಿ ನೇರವಾದ ವಿದೇಶಿ ಹೂಡಿಕೆ ಹೆಚ್ಚಾಗುತ್ತಿದೆ. ಹೀಗಿರುವಾಗ ಅಶಾಂತಿ ಮತ್ತು ಅಸ್ಥಿರತೆ ನಿರ್ಮಾಣ ಮಾಡಿ ಈ ಹೂಡಿಕೆಯನ್ನು ಹೇಗೆ ಕಡಿಮೆ ಮಾಡಬಹುದು, ಎಂಬುದು ಪಾಕಿಸ್ತಾನದ ಪ್ರಯತ್ನವಾಗಿದೆ.

– ಡಾ. ಶೈಲೇಂದ್ರ ದೇವಳಾಣಕರ್, ವಿದೇಶ ಧೋರಣೆಯ ವಿಶ್ಲೇಷಕರು, ಪುಣೆ. (೨೪.೪.೨೦೨೫)

ಪಾಕಿಸ್ತಾನಕ್ಕೆ ಹೇಗೆ ಆಘಾತವಾಗಬಹುದು ?

೧. ಕೃಷಿ ಕ್ಷೇತ್ರಕ್ಕೆ ದೊಡ್ಡ ಪರಿಣಾಮ : ಪಾಕಿಸ್ತಾನದ ಶೇ. ೭೦ ಕ್ಕಿಂತ ಹೆಚ್ಚು ಕೃಷಿ ಸಿಂಧೂ ನದಿಯ ನೀರನ್ನು ಅವಲಂಬಿಸಿದೆ. ಗೋದಿ, ಭತ್ತ, ಕಬ್ಬು ಇಂತಹ ಮಹತ್ವದ ಬೆಳೆಗೆ ವಿಪರೀತ ಪರಿಣಾಮವಾಗಬಹುದು.

೨. ನೀರಿನ ಕೊರತೆ/ವಿದ್ಯುತ್‌ನಿರ್ಮಾಣದ ಸಂಕಷ್ಟ : ಝೇಲಮ್‌ ಹಾಗೂ ಸಿಂಧೂ ಈ ನದಿಗಳ ಮೇಲೆ ಪಾಕಿಸ್ತಾನದ ‘ಹೈಡ್ರೋಪವರ್’ ಯೋಜನೆಗಳಿವೆ. ಆದ್ದರಿಂದ ಭಾರತ ನೀರನ್ನು ಬಿಡದಿದ್ದರೆ, ನೀರಿನ ಕೊರತೆಯಿಂದ ವಿದ್ಯುತ್‌ನಿರ್ಮಾಣದ ಕಾರ್ಯ ನಿಂತು ಹೋಗಬಹುದು.

೩. ನೆರೆ ಮತ್ತು ಬರಗಾಲ ಇವೆರಡರ ಅಪಾಯ : ಭಾರತ ನೀರನ್ನು ಶೇಖರಣೆ ಮಾಡಿ ನಂತರ ಒಮ್ಮೆಲೆ ಬಿಟ್ಟರೆ ಅನಿರೀಕ್ಷಿತ ನೆರೆ ಹಾವಳಿಯಾಗಬಹುದು ಅಥವಾ ನೀರನ್ನು ತಡೆ ಹಿಡಿಯುವುದರಿಂದ ಬರಗಾಲವೂ ಬರಬಹುದು.

೪. ಆಂತರಿಕ ಅಸಮಾಧಾನ ಹಾಗೂ ಅಸ್ಥಿರತೆ : ನೀರು, ವಿದ್ಯುತ್‌ ಇಲ್ಲದಿದ್ದರೆ, ಆಹಾರಧಾನ್ಯದ ಕೊರತೆಯಿಂದ ಪಾಕಿಸ್ತಾನದ ನಾಗರಿಕರು ಉದ್ರೇಕಗೊಳ್ಳಬಹುದು. ಅದರ ಆಘಾತವನ್ನು ಪಾಕಿಸ್ತಾನ ಸಹಿಸಬೇಕಾಗಬಹುದು. ಆದ್ದರಿಂದ ಪಾಕಿಸ್ತಾನದ ಸಿಂಧ, ಪಂಜಾಬ್, ಬಲೂಚಿಸ್ತಾನ ಈ ಪ್ರದೇಶಗಳಲ್ಲಿ ಅಶಾಂತಿ ಹೆಚ್ಚಾಗಬಹುದು.

೫. ಅರ್ಥವ್ಯವಸ್ಥೆಯ ಮೇಲೆ ದೊಡ್ಡ ಪರಿಣಾಮ : ಪಾಕಿಸ್ತಾನದ ಆರ್ಥಿಕ ಸ್ಥಿತಿಗೆ ಆಘಾತ ನೀಡುವ ಧೋರಣೆ. ಕೃಷಿ ಮತ್ತು ವಿದ್ಯುತ್‌ ಇದನ್ನು ಅರ್ಥವ್ಯವಸ್ಥೆ ಅವಲಂಬಿಸಿದೆ. ಆದ್ದರಿಂದ ದೇಶದ ಸಕಲ ಉತ್ಪಾದನೆ ಕುಸಿದು ನಿರುದ್ಯೋಗ, ಬೆಲೆ ಏರಿಕೆ ಹೆಚ್ಚಾಗುವ ಭಯ !

ಡಾ. ಶೈಲೇಂದ್ರ ದೇವಳಾಣಕರ್‌ (೨೪.೪.೨೦೨೫)