ಪೂ. ಭಾರ್ಗವರಾಮ ಪ್ರಭು ಇವರ ೮ ನೇ ಹುಟ್ಟುಹಬ್ಬದ ನಿಮಿತ್ತ ಸನಾತನ ಪರಿವಾರದ ವತಿಯಿಂದ ಇವರ ಚರಣಗಳಲ್ಲಿ ಕೃತಜ್ಞತಾಪೂರ್ವಕ ನಮಸ್ಕಾರಗಳು !
ವೈಶಾಖ ಶುಕ್ಲ ದಶಮಿ (೭.೫.೨೦೨೫) ಯಂದು ಸನಾತನದ ಮೊದಲನೇ ಬಾಲಕಸಂತ ಪೂ. ಭಾರ್ಗವರಾಮ ಪ್ರಭು ಇವರ ೮ ನೇ ಹುಟ್ಟುಹಬ್ಬವಿದೆ. ಆ ನಿಮಿತ್ತ ಅವರ ಮುತ್ತಜ್ಜಿಯವರು ಹಾಗೂ ಸನಾತನದ ಸಂತರಾದ ಪೂ. (ಶ್ರೀಮತಿ) ರಾಧಾ ಪ್ರಭು ಇವರಿಗೆ ಅರಿವಾದ ಅವರ ಯಜ್ಞದ ವಿಷಯದಲ್ಲಿ ಜಿಜ್ಞಾಸೆ ಮತ್ತು ಆ ಬಗ್ಗೆ ಇರುವ ಜ್ಞಾನವನ್ನು ಇಲ್ಲಿ ನೀಡುತ್ತಿದ್ದೇವೆ.

೧. ನಾವು (ನಾನು ಮತ್ತು ಪೂ. ಭಾರ್ಗವರಾಮ) ರಾಮನಾಥಿ (ಗೋವಾ)ಯಲ್ಲಿನ ಸನಾತನದ ಆಶ್ರಮದಲ್ಲಿ ತಿಂಡಿಯನ್ನು ತಿನ್ನಲು ಹೋದಾಗ ಪೂ. ಭಾರ್ಗವರಾಮ ಇವರು ‘ಅನ್ನಪೂರ್ಣೆ ಸದಾಪೂರ್ಣೆ…’ ಈ ಶ್ಲೋಕವನ್ನು ಹೇಳುತ್ತಿದ್ದರು. ಅನಂತರ ಮಹಾಪ್ರಸಾದವನ್ನು ಸೇವಿಸುವ ಸಮಯದಲ್ಲಿ ಧ್ವನಿವರ್ಧಕದಲ್ಲಿ ಹಾಕಿದ ಮುಂದಿನ ಶ್ಲೋಕವನ್ನು ಕೇಳಿದರು.
ಬ್ರಹ್ಮಾರ್ಪಣಂ ಬ್ರಹ್ಮ ಹವಿರ್ಬ್ರಹ್ಮಾಗ್ನೌ ಬ್ರಹ್ಮಣಾ ಹುತಮ್ |
ಬ್ರಹ್ಮೈವ ತೇನ ಗಂತವ್ಯಂ ಬ್ರಹ್ಮಕರ್ಮಸಮಾಧಿನಾ ||
– ಶ್ರೀಮದ್ಭಗವದ್ಗೀತೆ, ಅಧ್ಯಾಯ ೪, ಶ್ಲೋಕ ೨೪
ಅರ್ಥ : ಯಜ್ಞದಲ್ಲಿ ಅರ್ಪಣೆ ಮಾಡಲು ಬೇಕಾಗುವ ಸ್ರುವ (ಮರದ ಸೌಟು) ಮುಂತಾದ ಸಾಧನಗಳೂ ಬ್ರಹ್ಮವೇ ಆಗಿವೆ ಮತ್ತು ಹವನ ಮಾಡಲು ಯೋಗ್ಯವಾದ ದ್ರವ್ಯವೂ ಬ್ರಹ್ಮವೇ ಆಗಿದೆ. ಹಾಗೆಯೇ ಬ್ರಹ್ಮರೂಪಿಯಾದ ಕರ್ತನಿಂದ ಬ್ರಹ್ಮರೂಪಿಯಾದ ಅಗ್ನಿಯಲ್ಲಿ ಆಹುತಿ ನೀಡುವ ಕ್ರಿಯೆಯೂ ಬ್ರಹ್ಮವೇ ಆಗಿದೆ. ಆ ಬ್ರಹ್ಮಕರ್ಮದಲ್ಲಿ ಸ್ಥಿತನಾದ ಯೋಗಿಗೆ ಸಿಗುವ ಫಲವೂ ಬ್ರಹ್ಮವೇ ಆಗಿದೆ.
ಪೂ. ಭಾರ್ಗವರಾಮ ಪ್ರಭು ಇವರಿಗೆ ಈ ಮಂತ್ರ ಗೊತ್ತಿರಲಿಲ್ಲ. ನಾನು ಪೂ. ಭಾರ್ಗವರಾಮ ಪ್ರಭು ಇವರಿಗೆ, ”ಇಂದಿನಿಂದ ಈ ಎರಡೂ ಮಂತ್ರಗಳನ್ನು ಹೇಳಿ ಊಟವನ್ನು ಆರಂಭಿಸಬೇಕು”, ಎಂದು ಹೇಳಿದೆನು. ನಾನು ಅವರಿಗೆ ಈ ಮಂತ್ರವನ್ನು ೪ ಬಾರಿ ಹೇಳಿದ ನಂತರ ಅವರಿಗೆ ಆ ಮಂತ್ರ ಬಾಯಿಪಾಠವಾಯಿತು. ಈ ಸಂದರ್ಭದಲ್ಲಿ ನಮ್ಮ ನಡುವೆ ನಡೆದ ಸಂಭಾಷಣೆಯನ್ನು ಇಲ್ಲಿ ಕೊಡಲಾಗಿದೆ.
೨. ಪೂ. ಭಾರ್ಗವರಾಮ ಇವರು ಯಜ್ಞದ ಬಗ್ಗೆ ತಿಳಿದುಕೊಳ್ಳುವುದು
೨ ಅ. ‘ಯಜ್ಞವನ್ನು ಮಾಡುವಾಗ ಅನ್ನ, ತುಪ್ಪ, ಸಮಿಧೆ ಮುಂತಾದ ವಸ್ತುಗಳನ್ನು ಯಾವುದರಲ್ಲಿ ಹಾಕುತ್ತೇವೆಯೋ, ಅದು ಅಗ್ನಿ’, ಎಂದು ಪೂ. ರಾಧಾ ಪ್ರಭು ಇವರು ಹೇಳುವುದು
ಪೂ. ಭಾರ್ಗವರಾಮ : ಅಗ್ನಿ ಎಂದರೇನು ?
ನಾನು : ಯಜ್ಞ ಮಾಡುವಾಗ ಅನ್ನ, ತುಪ್ಪ, ಸಮಿಧೆ ಇತ್ಯಾದಿ ವಸ್ತುಗಳನ್ನು ಯಾವುದರಲ್ಲಿ ಹಾಕುತ್ತೇವೆಯೋ, ಅದು ಅಗ್ನಿ.
ಪೂ. ಭಾರ್ಗವರಾಮ : ಅಗ್ನಿ ಅದನ್ನು ತಿನ್ನುತ್ತದೆಯೇ ?
ನಾನು : ಹೌದು.
೨ ಆ. ಪೂ. ರಾಧಾ ಪ್ರಭು ಇವರು ‘ಆಹಾರ ಸೇವಿಸುವುದು’ ಇದು ಯಜ್ಞವೇ ಆಗಿದೆ’, ಎಂದು ಹೇಳುವುದು
ನಾನು : ನಾವು ಆಹಾರ ಸೇವಿಸುತ್ತೇವೆ, ಅದು ಒಂದು ರೀತಿಯ ದೇವರ ಯಜ್ಞವೇ ಆಗಿದೆ. ನೀವು ದೇವಸ್ಥಾನದಲ್ಲಿ, ರಾಮನಾಥಿ ಆಶ್ರಮದಲ್ಲಿ ನೋಡಿರುವಿರಿ. ಯಜ್ಞದಲ್ಲಿ ಅಗ್ನಿ ಇರುತ್ತದೆ !
ಪೂ. ಭಾರ್ಗವರಾಮ : ಅಯ್ಯೋ ದೇವರೇ ! ಆದರೆ ನಮ್ಮ ಹೊಟ್ಟೆಗೆ ತೊಂದರೆಯಾಗುವುದಿಲ್ಲ ತಾನೆ, ಅಜ್ಜಮ್ಮಾ (ಮುತ್ತಜ್ಜಿ).
ನಾನು : ಹೊಟ್ಟೆಯಲ್ಲಿರುವ ಅಗ್ನಿ ನಾವು ತಿಂದ ಆಹಾರವನ್ನು ಜೀರ್ಣಿಸುತ್ತದೆ. ಆ ಅಗ್ನಿ ನಮ್ಮ ಕಣ್ಣುಗಳಿಗೆ ಕಾಣಿಸುವುದಿಲ್ಲ.
೨ ಇ. ಪೂ. ಭಾರ್ಗವರಾಮ ಇವರು ‘ಯಜ್ಞ ಮಾಡುವಾಗ ಮಂತ್ರ ವನ್ನು ಹೇಳುತ್ತಾರೆ’, ಎಂದು ಹೇಳುವುದು
ಪೂ. ಭಾರ್ಗವರಾಮ : ನಾವು ತೋಟದಲ್ಲಿರುವ ಕಸವನ್ನು ಸಂಗ್ರಹಿಸಿ ಸುಡುತ್ತೇವಲ್ಲವೇ ? ಅದು ಯಜ್ಞವೇ ?
ನಾನು : ಅಲ್ಲ
ಪೂ. ಭಾರ್ಗವರಾಮ : ನಾವು ತೋಟದಲ್ಲಿ ಅಗ್ನಿಯನ್ನು ಹೊತ್ತಿಸು ವಾಗ ಮಂತ್ರವನ್ನು ಹೇಳುವುದಿಲ್ಲ; ಆದುದರಿಂದ ಅದಕ್ಕೆ ‘ಯಜ್ಞ’ ಎಂದು ಹೇಳುವುದಿಲ್ಲ. ಸರಿ ಇದೆಯಲ್ಲವೇ, ಅಜ್ಜಮ್ಮಾ ? ತೋಟದಲ್ಲಿ ಮಾಡುತ್ತೇವಲ್ಲ, ಅದು ಕೇವಲ ಬೆಂಕಿ, ಆ ಸಮಯದಲ್ಲಿ ಮಂತ್ರವನ್ನು ಹೇಳುವುದಿಲ್ಲ. ದೇವಸ್ಥಾನಗಳಲ್ಲಿ, ರಾಮನಾಥಿ ಆಶ್ರಮದಲ್ಲಿ ಮಾಡುತ್ತೇವೆ ಅದು ಯಜ್ಞ. ಆಗ ಮಂತ್ರಗಳನ್ನು ಹೇಳುತ್ತಾರೆ. ಆಹಾರ ಸೇವಿಸುವುದು ಇದು ಯಜ್ಞ, ಆದರೆ ಆ ಅಗ್ನಿ ಕಾಣಿಸುವುದಿಲ್ಲ. ಅದು ಆಹಾರವನ್ನು ಜೀರ್ಣಿಸುತ್ತದೆ.
೩. ೮ ವರ್ಷದ ಬಾಲಕನು ನೀಡಿದ ಈ ಸ್ಪಷ್ಟೀಕರಣವನ್ನು ಕೇಳಿ ನನಗೆ ಬಹಳ ಆನಂದವಾಯಿತು. ನನ್ನ ಭಾವಜಾಗೃತಿಯಾಯಿತು. ನಾನು ಪೂ. ಭಾರ್ಗವರಾಮರಿಗೆ, ”ನಿಮಗೆ ಇಷ್ಟೆಲ್ಲ ವಿಷಯಗಳು ಹೇಗೆ ತಿಳಿಯುತ್ತದೆ ?” ಎಂದು ಕೇಳಿದೆನು. ಆಗ ಅವರು ನನಗೆ, ”ಅದು ನಿಮ್ಮಿಂದಾಗಿ ಮತ್ತು ಪ.ಪೂ. ಗುರುದೇವರಿಂದಾಗಿ (ಪರಾತ್ಪರ ಗುರು ಡಾ. ಆಠವಲೆಯವರಿಂದಾಗಿ) ತಿಳಿಯುತ್ತದೆ, ಅಜ್ಜಮ್ಮಾ”, ಎಂದು ಹೇಳಿದರು.
ಪೂ. ಭಾರ್ಗವರಾಮ ಪ್ರಭು ಇವರಿಗೆ ಗೋವಾದ ರಾಮನಾಥಿಯಲ್ಲಿನ ಸನಾತನದ ಆಶ್ರಮಕ್ಕೆ ಬರಲು ಬಹಳ ಸೆಳೆತ ಇರುವುದು
ಪೂ. ಭಾರ್ಗವರಾಮ ಪ್ರಭು ಇವರಿಗೆ ಗೋವಾದ ರಾಮನಾಥಿ ಯಲ್ಲಿನ ಸನಾತನದ ಆಶ್ರಮಕ್ಕೆ ಹೋಗಲು ಬಹಳ ಇಷ್ಟವಾಗುತ್ತದೆ. ಆ ಬಗ್ಗೆ ನನಗೆ ಅರಿವಾದ ಅಂಶಗಳನ್ನು ಇಲ್ಲಿ ಕೊಟ್ಟಿದ್ದೇನೆ.
೧. ಪೂ. ಭಾರ್ಗವರಾಮ ಇವರು ತಮ್ಮ ತಾಯಿ ಸೌ. ಭವಾನಿ ಇವರಿಗೆ, ”ಅಮ್ಮ, ನಮ್ಮ ಪರೀಕ್ಷೆ ಯಾವಾಗ ಮುಗಿಯುತ್ತದೆ ? ನಾವು ಗೋವಾದ ರಾಮನಾಥಿಯಲ್ಲಿನ ಸನಾತನದ ಆಶ್ರಮಕ್ಕೆ ಯಾವಾಗ ಹೋಗುವುದು ?’’, ಎಂದು ಮೇಲಿಂದ ಮೇಲೆ ಕೇಳುತ್ತಿರುತ್ತಾರೆ.
೨. ನಾವು ಆಶ್ರಮಕ್ಕೆ ಹೊರಡುವ ದಿನ ಅವರು ಬೆಳಗ್ಗೆ ತಮ್ಮಷ್ಟಕ್ಕೆ ತಾವೇ ಏಳುತ್ತಾರೆ. ಅವರು ಸ್ನಾನ ಅಥವಾ ತಿಂಡಿ ತಿನ್ನಲು ಹಟ ಮಾಡುವುದಿಲ್ಲ.
೩. ನಾವು ಚತುಷ್ಚಕ್ರದಿಂದ ನಮ್ಮ ಮಂಗಳೂರಿನಿಂದ ಹೊರಟು ಸುಮಾರು ೧೦ ಕಿ.ಮಿ. ದೂರ ಕ್ರಮಿಸಿದಾಗ ಪೂ. ಭಾರ್ಗವರಾಮ ಇವರು ”ರಾಮನಾಥಿ ಬಂದಿತೇ ?’’, ಎಂದು ೮ ರಿಂದ ೧೦ ಸಲವಾದರೂ ಕೇಳುತ್ತಾರೆ. ಆಗ ನಾವು ಅವರಿಗೆ, ‘ರಾಮನಾಥಿ ಇನ್ನೂ ದೂರವಿದೆ. ನೀವು ಮಲಗಿ. ನೀವು ಮಲಗಿ ಏಳುವವರೆಗೆ ನಾವು ಆಶ್ರಮದ ಹತ್ತಿರ ತಲುಪುತ್ತೇವೆ’’, ಎಂದು ಹೇಳುತ್ತೇವೆ. ಆಗ ಅವರು ನಮಗೆ, ”ಖಂಡಿತವಾಗಿಯೂ ಎಬ್ಬಿಸುವಿರಲ್ಲವೇ ?’’, ಎಂದು ಕೇಳುತ್ತಾರೆ. ಒಂದು ಸಲ ನಾವು ದಾರಿಯಲ್ಲಿ ಊಟ ಮಾಡಲು ಒಂದು ಕಡೆಗೆ ತಂಗಿದ್ದೆವು. ಆ ಸಮಯದಲ್ಲಿ ಪೂ. ಭಾರ್ಗವರಾಮ ಇವರು ೫ ನಿಮಿಷಗಳಲ್ಲಿಯೇ ಭೋಜನ ಮುಗಿಸಿದರು ಮತ್ತು ನಮಗೆ, ”ನಾವು ಬೇಗ ಹೊರಡೋಣ. ನಮಗೆ ಮುಂದೆ ಹೋಗಲು ತಡವಾಗು ತ್ತದೆ’’, ಎಂದು ಹೇಳಿದರು.
೪. ನಾವು ಗೋವಾ ರಾಜ್ಯವನ್ನು ಪ್ರವೇಶಿಸಿದಾಗ ಪೂ. ಭಾರ್ಗವರಾಮ ಇವರು ಅದನ್ನು ಗುರುತಿಸಿ ಅವರು ”ಈಗ ನಾವು ಗೋವಾದ ರಾಮನಾಥಿಯಲ್ಲಿನ ಸನಾತನದ ಆಶ್ರಮದ ಹತ್ತಿರ ಬಂದಿದ್ದೇವೆ’, ಎಂದು ಹೇಳಿ ಕುಣಿಯತೊಡಗಿದರು.
೫. ನಾವು ಅವರನ್ನು, ”ನಿಮಗೆ ಆಶ್ರಮಕ್ಕೆ ಹೋಗಲು ಏಕೆ ಇಷ್ಟವಾಗುತ್ತದೆ ?’, ಎಂದು ಕೇಳಿದೆವು. ಆಗ ಅವರು, ”ಅಲ್ಲಿ ಪ.ಪೂ.ಗುರುದೇವರು (ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ), ಶ್ರೀಚಿತ್ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಮತ್ತು ಸದ್ಗುರು ಗಾಡಗೀಳಕಾಕಾ (ಸದ್ಗುರು ಡಾ. ಮುಕುಲ ಗಾಡಗೀಳ) ಇವರು ಇದ್ದಾರೆ ಅವರೆಲ್ಲ ನನ್ನನ್ನು ಬಹಳ ಪ್ರೀತಿಸುತ್ತಾರೆ’’, ಎಂದರು.
– ಪೂ. (ಶ್ರೀಮತಿ) ರಾಧಾ ಪ್ರಭು (ಸನಾತನದ ೪೪ ನೇ ಸಂತ ಮತ್ತು ಪೂ. ಭಾರ್ಗವರಾಮರ ಮುತ್ತಜ್ಜಿ), ಮಂಗಳೂರು (೧೦.೪.೨೦೨೩)