ವಿಭಜಿತ ಅಲ್ಲ, ಅಖಂಡ ಭಾರತ !

ಮುಖ್ಯಮಂತ್ರಿ ಎಮ್‌.ಕೆ. ಸ್ಟಾಲಿನ್‌

ತಮಿಳುನಾಡು ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಎಮ್‌.ಕೆ. ಸ್ಟಾಲಿನ್‌ ಇವರು ರಾಜ್ಯವನ್ನು ಸ್ವಾಯತ್ತಗೊಳಿಸುವ ಪ್ರಸ್ತಾವನೆಯನ್ನು ಮಂಡಿಸಿದರು. ಅದರಲ್ಲಿ ಅವರು, ‘ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ ೭೭ ವರ್ಷಗಳು ಪೂರ್ಣಗೊಂಡವು ಡಾ. ಬಾಬಾಸಾಹೇಬ್‌ ಅಂಬೇಡಕರ ಇವರು ದೇಶದ ರಾಜಕೀಯ ಮತ್ತು ಆಡಳಿತದಲ್ಲಿ ಎಲ್ಲ ಘಟಕಗಳಿಗೆ ನ್ಯಾಯ ಸಿಗುವಂತಹ ವ್ಯವಸ್ಥೆಯನ್ನು ರಚಿಸಿದ್ದರು; ಆದರೆ ಪ್ರಸ್ತುತ ರಾಜ್ಯಗಳ ಅಧಿಕಾರ ವನ್ನು ಕಸಿದುಕೊಳ್ಳಲಾಗುತ್ತಿದೆ. ನಾವು ಭಾಷಾ ಹಕ್ಕುಗಳನ್ನು ಹೇಗೋ ರಕ್ಷಿಸುತ್ತಿದ್ದೇವೆ. ರಾಜ್ಯದ ಜನರು ತಮ್ಮ ಮೂಲಭೂತ ಹಕ್ಕುಗಳಿಗಾಗಿ ಕೇಂದ್ರದೊಂದಿಗೆ ಹೋರಾಡುತ್ತಿದ್ದಾರೆ. ಈ ಸಮಯದಲ್ಲಿ ಬಲಿಷ್ಠ ರಾಜ್ಯವೇ ಅಭಿವೃದ್ಧಿ ಹೊಂದಬಹುದು. ಆದುದರಿಂದ ಈ ಸ್ವಾಯತ್ತತೆಯ ಪ್ರಸ್ತಾವವನ್ನು ಮಂಡಿಸಿದ್ದೇನೆ. ಈ ಪ್ರಸ್ತಾವನೆಯನ್ನು ಶಿಫಾರಸು ಮಾಡಲು ರಚಿಸಲಾದ ಸಮಿತಿಯ ನೇತೃತ್ವವನ್ನು ಸರ್ವೋಚ್ಚ ನ್ಯಾಯಾಲಯದ ಮಾಜಿ ಅಧ್ಯಕ್ಷ ಕುರಿಯನ್‌ ಜೊಸೆಫ್‌ ಇವರು ವಹಿಸುತ್ತಾರೆ. ಈ ಸಮಿತಿಗೆ ಜನವರಿ ೨೦೨೬ ರವರೆಗೆ ಗಡುವು ನೀಡಲಾಗಿದೆ. ಈ ಸಮಿತಿಯ ಒಕ್ಕೂಟ ವ್ಯವಸ್ಥೆಯು ಎಲ್ಲ ಅಂಶಗಳ ಅಧ್ಯಯನ ಮಾಡುತ್ತದೆ”, ಎಂದು ಹೇಳಿದರು. ‘ಒಂದು ವೇಳೆ ರಾಜ್ಯಪಾಲರು ಮಸೂದೆಯನ್ನು ತಡೆಹಿಡಿದರೆ, ರಾಷ್ಟ್ರಪತಿಗಳು ಸರ್ವೋಚ್ಚ ನ್ಯಾಯಾಲಯಕ್ಕೆ ಬರಬೇಕು’, ಎಂದು ಸಹ ಅವರು ಹೇಳಿದರು. ಈ ಎಲ್ಲ ಹಿನ್ನೆಲೆಯನ್ನು ನೋಡಿದರೆ ತಮಿಳುನಾಡು ಸರಕಾರ ಅಖಂಡ ಭಾರತದಿಂದ ಬೇರ್ಪಟ್ಟು ತನ್ನ ಸ್ವತಂತ್ರ ಅಸ್ತಿತ್ವವನ್ನು ಸ್ಥಾಪಿಸಲು ಬಯಸುತ್ತಿದೆ, ಎಂಬುದು ಸ್ಪಷ್ಟವಾಗುತ್ತದೆ. ಅಂದರೆ ಸರಕಾರದ ಈ ವಿಚಾರಗಳಿಂದ ಅದರ ದ್ವೇಷಪೂರಿತ ಮನಃಸ್ಥಿತಿ ಎದ್ದು ಕಾಣುತ್ತದೆ. ‘ಭಾರತ ತೆರೆ ತುಕಡೆ ಹೊಂಗೆ’, ಎಂಬ ಘೋಷಣೆಯನ್ನು ತುಕಡೆ ತುಕಡೆ ಗ್ಯಾಂಗಿನ ಜನರು ನೀಡುತ್ತಾರೆ; ಆದರೆ ಇಲ್ಲಿ ಮುಖ್ಯಮಂತ್ರಿ ಮಹಾಶಯರು ಪ್ರಸ್ತಾವದ ಮೂಲಕ ಭಾರತವನ್ನು ವಿಭಜಿಸಲು ಪ್ರಯತ್ನಿಸುತ್ತಿದ್ದಾರೆ. ಸ್ಟಾಲಿನ ಇವರ ಪ್ರಸ್ತಾವವನ್ನು ಭಾಜಪ ವಿರೋಧಿಸಿದೆ. ತಮಿಳುನಾಡಿನ ಭಾಜಪದ ಅಧ್ಯಕ್ಷ ನೈನರ ನಾಗೇಂದ್ರನ್‌ ಇವರು, ”ಮುಖ್ಯಮಂತ್ರಿಗಳು ರಾಜ್ಯಕ್ಕೆ ಸ್ವಾಯತ್ತತೆ ನೀಡುವ ನಿರ್ಣಯವನ್ನು ಮಂಡಿಸಿದ್ದಾರೆ. ಆದರೆ ನಾವು ಇದನ್ನು ಒಪ್ಪಲು ಸಾಧ್ಯವಿಲ್ಲ”, ಎಂದು ಹೇಳಿದರು. ಭಾಜಪದ ನಾಯಕರು ಇದನ್ನು ವಿರೋಧಿಸಿ ಸಭಾತ್ಯಾಗ ಮಾಡಿದರು.

ದ್ವೇಷ ಬಿತ್ತುವಿಕೆ !

ಮಾಜಿ ಮುಖ್ಯಮಂತ್ರಿ ಎಮ್. ಕರುಣಾನಿಧಿ ಇವರ ಆಡಳಿತದಲ್ಲಿ ಅಂದರೆ ೧೯೬೯ ರಲ್ಲಿ ರಾಜ್ಯದಲ್ಲಿ ಸ್ವಾಯತ್ತತೆಯ ಪ್ರಸ್ತಾವವನ್ನು ಅಂಗೀಕರಿಸಲಾಗಿತ್ತು. ಅದನ್ನು ನಿವೃತ್ತ ನ್ಯಾಯಾಧೀಶರ ಬಳಿಗೆ ಪರಿಶೀಲನೆಗಾಗಿ ಕಳುಹಿಸಲಾಗಿತ್ತು. ಇದಾದ ನಂತರ ೧೯೭೪ ರಲ್ಲಿ ಇನ್ನೊಂದು ಪ್ರಸ್ತಾವವನ್ನು ತರಲಾಯಿತು. ಸಂಕ್ಷಿಪ್ತವಾಗಿ ಹೇಳುವುದಾದರೆ, ೧೯೪೭ ರಲ್ಲಿ ಭಾರತ ಸ್ವತಂತ್ರವಾದರೂ, ೧೯೬೯ ರಿಂದಲೇ ಸ್ವಾಯತ್ತತೆಯ ವಿಷದ ಬೀಜವನ್ನು ಬಿತ್ತಲಾಗುತ್ತಿತ್ತು ಎಂಬುದು ಗಮನಕ್ಕೆ ಬರುತ್ತದೆ. ‘ಭಾರತ ಕೇವಲ ೨೨ ವರ್ಷಗಳ ಕಾಲ ಸಂಪೂರ್ಣ ಸ್ವಾತಂತ್ರ್ಯವನ್ನು ಅನುಭವಿಸಿತು ಮತ್ತು ನಂತರ ರಾಜ್ಯಗಳು ದ್ವೇಷದ ರೂಪವನ್ನು ಪಡೆದುಕೊಂಡವು’, ಎಂದು ಹೇಳಬಹುದು. ತಮಿಳುನಾಡಿನಲ್ಲಿ ಬಹುಸಂಖ್ಯಾತರು ಅಂದರೆ ಸುಮಾರು ಶೇ. ೯೦ ರಷ್ಟು ಹಿಂದೂಗಳಿದ್ದಾರೆ ಮತ್ತು ಶೇ. ೫ ರಷ್ಟು ಮುಸಲ್ಮಾನರಿದ್ದಾರೆ. ಸ್ವಾತಂತ್ರ್ಯದ ನಂತರ ವರ್ಷಾನುಗಟ್ಟಲೇ ತಮಿಳುನಾಡಿನ ಜನರು ‘ಆರ್ಯರ ವಿರುದ್ಧ ದ್ರಾವಿಡರು’ ಈ ಸಂಘರ್ಷದಲ್ಲಿಯೇ ಸಿಲುಕಿದ್ದಾರೆ. ‘ತಮಿಳುನಾಡಿನ ಜನತೆ ದ್ರಾವಿಡರಾಗಿದ್ದಾರೆ ಮತ್ತು ಉತ್ತರದ ಕಡೆಗಿನ ಜನರು ಆರ್ಯರಾಗಿದ್ದಾರೆ. ಆರ್ಯರು ಹೊರಗಿನಿಂದ ಬಂದುದರಿಂದ
ಉತ್ತರ ಮತ್ತು ಉಳಿದ ಭಾರತದೊಂದಿಗೆ ನಮ್ಮ ಸಾಂಸ್ಕೃತಿಕ ಸಂಬಂಧವಿಲ್ಲ’, ಎಂಬ ಭಾವನೆಯನ್ನು ಸ್ಥಳೀಯರಲ್ಲಿ ಮೂಡಿಸ ಲಾಗಿದೆ. ವಾಸ್ತವದಲ್ಲಿ ಈ ತಿಳುವಳಿಕೆ ಭ್ರಮಾತ್ಮಕವಾಗಿದೆ. ಈ ವಿವಾದ ಇಷ್ಟಕ್ಕೆ ಸೀಮಿತವಾಗಿಲ್ಲ. ಆದರೆ ಅದರಲ್ಲಿ ಭಾಷಾವಾದವೂ ಸೇರಿಕೊಂಡಿದೆ. ‘ನಾವು ದ್ರಾವಿಡರಾಗಿರುವುದರಿಂದ ನಮ್ಮ ಭಾಷೆ ಉತ್ತರದ ಜನರಂತೆ ಹಿಂದಿ ಅಲ್ಲ’, ಎಂಬ ವಾದವನ್ನು ಇಲ್ಲಿ ಹುಟ್ಟುಹಾಕಲಾಗಿದೆ. ಜಾತಿ, ಧರ್ಮ, ಭಾಷೆ ಎಂಬ ಸ್ತರಗಳಲ್ಲಿ ತಮಿಳುನಾಡಿನಲ್ಲಿ ದ್ವೇಷದ ಬೀಜಗಳನ್ನು ವ್ಯವಸ್ಥಿತವಾಗಿ ಬಿತ್ತಲಾಗಿದೆ. ಕಳೆದ ಕೆಲವು ವರ್ಷಗಳಿಂದ ಈ ವಿವಾದವು ಹೊಗೆಯಾಡುತ್ತಲೇ ಇತ್ತು. ಸ್ಟಾಲಿನ್‌ ಇವರು ಸ್ವಾಯತ್ತತೆಯ ಪ್ರಸ್ತಾವದ ಮೂಲಕ ಈ ವಿವಾದಕ್ಕೆ ದಾರಿ ಮಾಡಿಕೊಟ್ಟರಷ್ಟೇ !

೨೦೨೪ ರಲ್ಲಿ ತಮಿಳುನಾಡಿನಲ್ಲಿ ಹಿಂದೂಗಳು ‘ಜಯ ಶ್ರೀರಾಮ’ ಘೋಷಣೆಯನ್ನು ಕೂಗಿದ್ದರು. ಆ ಸಮಯದಲ್ಲಿ ಸ್ಟಾಲಿನ್‌ ಇವರ ಪಕ್ಷದ ಎ. ರಾಜಾ ಇವರು ಹಿಂದೂಗಳನ್ನು ‘ಮೂರ್ಖರು’ ಎಂದರು. ಅಲ್ಲದೇ, ”ಭಾರತ ರಾಷ್ಟ್ರವಲ್ಲ, ಎಂಬುದನ್ನು ಸ್ಪಷ್ಟವಾಗಿ ತಿಳಿದುಕೊಳ್ಳಿ. ಭಾರತ ಎಂದಿಗೂ ರಾಷ್ಟ್ರವಾಗಿರಲಿಲ್ಲ. ರಾಷ್ಟ್ರ ಎಂದರೆ ಒಂದು ಭಾಷೆ, ಒಂದು ಪರಂಪರೆ ಮತ್ತು ಒಂದು ಸಂಸ್ಕೃತಿ ಇರುತ್ತದೆ. ಆಗ ಮಾತ್ರ ಅದು ರಾಷ್ಟ್ರವಾಗುತ್ತದೆ; ಆದರೆ ಭಾರತ ರಾಷ್ಟ್ರವಾಗಿರದೇ ಉಪಖಂಡವಾಗಿದೆ. ಇಲ್ಲಿ ತಮಿಳುರಾಷ್ಟ್ರವಾಗಿದೆ. ಮಲ್ಯಾಳಮ್‌ ಒಂದು ಭಾಷೆ ಮತ್ತು ಒಂದು ರಾಷ್ಟ್ರವಾಗಿದೆ. ಒಡಿಯಾ ಇದು ಭಾಷೆ ಮತ್ತು ದೇಶವಾಗಿದೆ. ಈ ಎಲ್ಲ ದೇಶಗಳು ಸೇರಿ ಭಾರತವಾಗುತ್ತದೆ”, ಎಂದು ಹೇಳಿದರು. ಯಾರಿಗೆ ರಾಷ್ಟ್ರದ ಕಲ್ಪನೆಯೇ ತಿಳಿದಿಲ್ಲ ಅಂತಹÀವರಿಗೆ ರಾಷ್ಟ್ರದ ಬಗ್ಗೆ ಮಾತನಾಡಲು ಏನು ಹಕ್ಕಿದೆ ? ‘ಸ್ಟಾಲಿನ್‌ ಇವರ ಪಕ್ಷದವರಿಗೂ ಭಾರತವನ್ನು ಒಡೆಯುವ ಮನೋಭಾವವಿದೆ ಎಂದು ಭಾರತೀಯರು
ಗಮನಕ್ಕೆ ತೆಗೆದುಕೊಳ್ಳಬೇಕು. ‘ಭಾರತ ರಾಷ್ಟ್ರವಲ್ಲ’, ಎನ್ನುತ್ತಾ ಹಿಂದೂಗಳನ್ನು ಕೀಳಾಗಿ ಕಾಣುವುದು ಮತ್ತು ತಮ್ಮ ಬೇಳೆ ಯನ್ನು ಬೇಯಿಸಿಕೊಳ್ಳಲು ಪ್ರಯತ್ನಿಸುವುದು. ಇಂತಹ ಭಾರತ ವಿರೋಧಿಗಳನ್ನು ಸಕಾಲದಲ್ಲಿ ಹದ್ದುಬಸ್ತಿಗೆ ತರಬೇಕು.

ವಿಭಜನೆ ಅಪಾಯಕಾರಿ !

‘ಭಾರತದ್ವೇಷ ಮತ್ತಷ್ಟು ಹೆಚ್ಚಾಗಬಾರದು’, ಎಂದು ಭಾರತೀಯರಿಗೆ ಅನಿಸುತ್ತದೆ. ಛತ್ರಪತಿ ಶಿವಾಜಿ ಮಹಾರಾಜರು ಹಿಂದವೀ ಸ್ವರಾಜ್ಯದ ಕೊಡುಗೆಯನ್ನು ನಮಗೆ ನೀಡಿದರು. ಅನೇಕ ಸ್ಥಳಗಳ ಕೋಟೆಗಳನ್ನು ಗೆದ್ದು ಅಲ್ಲಿನ ಪ್ರದೇಶಗಳ, ಭೂಭಾಗವನ್ನು ತಮ್ಮ ನಿಯಂತ್ರಣಕ್ಕೆ ತಂದರು. ದೇಶವನ್ನು ಒಗ್ಗೂಡಿಸಿದರು. ರಾಷ್ಟ್ರಕ್ಕಾಗಿ ಅನೇಕ ಕ್ರಾಂತಿಕಾರಿಗಳೂ ಬಹಳ ಹೋರಾಡಿದರು. ಇಂತಹ ಅನೇಕರು ದೇಶದ ಅಖಂಡತೆಗಾಗಿ ತಮ್ಮ ಕೊಡುಗೆಯನ್ನು ಮತ್ತು ಅಗತ್ಯವಿದ್ದಾಗ ಬಲಿದಾನವನ್ನೂ ನೀಡಿದರು. ಭಾರತದ ಇಂತಹ ಉಜ್ವಲ ಇತಿಹಾಸವಿರುವಾಗ ಅದರ ಭವಿಷ್ಯವು ತುಂಡುತುಂಡಾಗಿ ವಿಭಜಿಸಲ್ಪಟ್ಟರೆ ಅದು ಎಷ್ಟು ದುರದೃಷ್ಟಕರವಾಗಿರುತ್ತದೆ ! ಈ ರೀತಿಯ ವಿಭಜಿಸ್ಪಟ್ಟ ಭಾರತದ ಕಲ್ಪನೆಯನ್ನೂ ಸಹಿಸಲು ಸಾಧ್ಯವಿಲ್ಲ. ‘ಭಾರತೀಯರಿಗೆ ಅಖಂಡ ಭಾರತ, ಸಮೃದ್ಧ ಭಾರತ, ಸಶಕ್ತ ಭಾರತ ಬೇಕು. ವಿಭಜಿತಗೊಂಡ ಭಾರತ ಬೇಡ !’ ವಿಘಟನೆ, ವಿಭಜನೆ ಇವು ಯಾವುದೂ ಭಾರತಕ್ಕೆ ಬೇಡ. ವಿಭಜನೆಯ ಪರಿಣಾಮ ರಷ್ಯಾ ಇಂದಿಗೂ ಅನುಭವಿಸುತ್ತಿದೆ. ಅಲ್ಲಿ ವಿಭಜನೆಯಿಂದಾಗಿ ಜಾಗತಿಕ ಶಾಂತಿ ಮತ್ತು ಭದ್ರತೆಯ ಪ್ರಶ್ನೆ ಉದ್ಭವಿಸಿದೆ. ಅಮೇರಿಕದ ಪ್ರಭಾವ ಹೆಚ್ಚಾಗಿದೆ. ಭ್ರಷ್ಟಾಚಾರ ಮತ್ತು ಅಪರಾಧಗಳು ಹೆಚ್ಚಾಗಿವೆ. ಮಾನವೀಯ ಬಿಕ್ಕಟ್ಟುಗಳು ಉದ್ಭವಿಸಿವೆ. ರಷ್ಯಾದ ಉದಾಹರಣೆಯಿಂದಾದರೂ ಭಾರತದ ರಾಜ್ಯಗಳು ಪಾಠ ಕಲಿತು ಬುದ್ಧಿವಂತರಾಗಬೇಕು. ಒಂದು ವೇಳೆ ಪ್ರತಿಯೊಂದು ರಾಜ್ಯವು ತಮ್ಮ ತಮ್ಮ ಸ್ವಾಯತ್ತತೆಯ ವಿಚಾರ ಮಾಡಿದರೆ ಭಾರತವು ತುಂಡಾಗಲು ಬಹಳ ಸಮಯ ತೆಗೆದುಕೊಳ್ಳುವುದಿಲ್ಲ. ಹೀಗಾಗಬಾರದೆಂದು ಕೇವಲ ಪ್ರಾದೇಶಿಕ ಇತಿಹಾಸಕ್ಕೆ ಮಹತ್ವ ನೀಡದೇ ಎಲ್ಲ ರಾಜ್ಯಗಳೊಂದಿಗೆ ನಮ್ಮ ಬಾಂಧವ್ಯವನ್ನು ಬೆಸೆಯಬೇಕು. ನಾವೇ ಈ ಭಾರತವನ್ನು ಸ್ವಾತಂತ್ರ್ಯದಿಂದ ಅಖಂಡತೆಯ ಕಡೆಗೆ ಕೊಂಡೊಯ್ಯಬೇಕು. ಈ ರಾಷ್ಟ್ರೀಯ ಪ್ರವಾಸದಲ್ಲಿ ಯಾರಾದರೂ ಒಡಕು ಮೂಡಿಸಲು ಪ್ರಯತ್ನಿಸಿದರೆ, ಅವರನ್ನು ಸಕಾಲದಲ್ಲಿ ತಡೆಯಬೇಕು. ಇಂದು ಸ್ಟಾಲಿನ್‌ ಇವರು ತಮಿಳುನಾಡಿನ ಸ್ವಾಯತ್ತತೆಯ ಬೇಡಿಕೆಯನ್ನು ಇಟ್ಟಿದ್ದಾರೆ, ನಾಳೆ ಆಂಧ್ರಪ್ರದೇಶ ಕೇಳಬಹುದು. ಮೊದಲು ಹಿಂದೂಬಹುಸಂಖ್ಯಾತವಾಗಿದ್ದ ಮಿಝೋರಾಂ ಈಗ ಕ್ರೈಸ್ತ ಬಹುಸಂಖ್ಯಾತವಾಗಿದೆ. ಆದ್ದರಿಂದ ನಾಳೆ ಆ ರಾಜ್ಯವೂ ಪ್ರತ್ಯೇಕ ರಾಷ್ಟ್ರಕ್ಕಾಗಿ ಬೇಡಿಕೆ ಇಡುವುದಿಲ್ಲ ಎಂದು ಹೇಗೆ ಹೇಳಲು ಸಾಧ್ಯ ? ಹಾಗಾಗಬಾರದೆಂದು, ಪ್ರತಿ ರಾಜ್ಯವು ಮತ್ತು ರಾಜ್ಯದ ನಾಗರಿಕರು ಅಖಂಡತೆಯ ನಿರ್ಧಾರವನ್ನು ತೆಗೆದುಕೊಳ್ಳಬೇಕು. ಇಂತಹ ಅಖಂಡ ಭಾರತವೇ ಆರ್ಥಿಕತೆಯಲ್ಲಿ ಮುನ್ನಡೆಯುತ್ತದೆ ಮತ್ತು ವಿಶ್ವಗುರು ಸ್ಥಾನವನ್ನು ಅಲಂಕರಿಸುತ್ತದೆ !