ಇದೇ ಮೊದಲ ಬಾರಿಗೆ ನ್ಯಾಯಾಧೀಶರ ಸಂಖ್ಯೆ37 ಕ್ಕೆ ಏರಿಕೆ!
ಮುಂದಿನ 15 ದಿನಗಳಲ್ಲಿ ಇಬ್ಬರು ನ್ಯಾಯಮೂರ್ತಿಗಳು ನಿವೃತ್ತರಾಗಲಿದ್ದು, ಈ ಸಂಖ್ಯೆ 35 ಕ್ಕೆ ಇಳಿಯಲಿದೆ!

ನವ ದೆಹಲಿ – ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರು 5 ಹೊಸ ನ್ಯಾಯಾಧೀಶರಿಗೆ ಸುಪ್ರೀಂ ಕೋರ್ಟ್ನ ನ್ಯಾಯಮೂರ್ತಿಗಳಾಗಿ ಪದಗ್ರಹಣ ಪ್ರಮಾಣ ವಚನ ಬೋಧಿಸಿದರು. ಈ ನೇಮಕಾತಿಗಳಿಂದಾಗಿ ನ್ಯಾಯಾಧೀಶರ ಒಟ್ಟು ಸಂಖ್ಯೆ ಇದೇ ಮೊದಲ ಬಾರಿಗೆ 37 ಕ್ಕೆ ತಲುಪಿದೆ. ಪ್ರಸ್ತುತ ಕೋರ್ಟ್ಗೆ ಅಗತ್ಯವಿರುವ ಒಟ್ಟು 38 ಹುದ್ದೆಗಳಲ್ಲಿ ಕೇವಲ ಒಂದು ಹುದ್ದೆ ಮಾತ್ರ ಖಾಲಿ ಉಳಿದಿದೆ. ಆದಾಗ್ಯೂ, ಜೂನ್ 16 ರಂದು ನ್ಯಾಯಮೂರ್ತಿ ಪಂಕಜ್ ಮಿಥಲ್ ಮತ್ತು ಜೂನ್ 28 ರಂದು ನ್ಯಾಯಮೂರ್ತಿ ಜೆ.ಕೆ. ಮಾಹೇಶ್ವರಿ ಅವರು ನಿವೃತ್ತರಾಗುತ್ತಿರುವುದರಿಂದ ಒಟ್ಟು ಸಂಖ್ಯೆ ಮತ್ತೆ 35 ಕ್ಕೆ ತಲುಪಲಿದೆ.
ಸುಪ್ರೀಂ ಕೋರ್ಟ್ನ 5 ಹೊಸ ನ್ಯಾಯಮೂರ್ತಿಗಳು!
1. ಹಿರಿಯ ವಕೀಲೆ ವೆಂಕಿಟಾ ಸುಬ್ರಮಣಿ ಮೋಹನಾ
2. ಮುಂಬಯಿ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಶ್ರೀ. ಚಂದ್ರಶೇಖರ್
3. ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಶೀಲ್ ನಾಗೂ
4. ಮಧ್ಯಪ್ರದೇಶ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಸಂಜೀವ್ ಸಚದೇವ
5. ಜಮ್ಮು-ಕಾಶ್ಮೀರ ಮತ್ತು ಲಡಾಖ್ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಅರುಣ್ ಪಲ್ಲಿ
ವಕೀಲೆ ವೆಂಕಿಟಾ ಸುಬ್ರಮಣಿ ಮೋಹನಾ ಅವರ ವೈಶಿಷ್ಟ್ಯ!
ಹಿರಿಯ ವಕೀಲೆ ವೆಂಕಿಟಾ ಸುಬ್ರಮಣಿ ಮೋಹನಾ ಅವರ ನೇಮಕಾತಿ ಅತ್ಯಂತ ಮಹತ್ವದ್ದಾಗಿದೆ. ಮಲ್ಹೋತ್ರಾ ಅವರ ನಂತರ, ‘ಬಾರ್’ನಿಂದ (ವಕೀಲರ ವೃಂದದಿಂದ) ನೇರವಾಗಿ ಸುಪ್ರೀಂ ಕೋರ್ಟ್ನ ನ್ಯಾಯಾಧೀಶರಾಗಿ ನೇಮಕಗೊಂಡ ದೇಶದ ಎರಡನೇ ಮಹಿಳಾ ವಕೀಲೆ ಇವರಾಗಿದ್ದಾರೆ. ಇದರಿಂದಾಗಿ ಈಗ ಸುಪ್ರೀಂ ಕೋರ್ಟ್ನಲ್ಲಿ ಇಬ್ಬರು ಮಹಿಳಾ ನ್ಯಾಯಾಧೀಶರಾಗಿದ್ದಾರೆ – ನ್ಯಾಯಮೂರ್ತಿ ಮೋಹನಾ ಮತ್ತು ನ್ಯಾಯಮೂರ್ತಿ ಬಿ.ವಿ. ನಾಗರತ್ನ. ನ್ಯಾಯಮೂರ್ತಿ ನಾಗರತ್ನ ಅವರು 2027 ರಲ್ಲಿ ಒಂದು ತಿಂಗಳಿಗಿಂತ ಹೆಚ್ಚು ಅವಧಿಗೆ ಭಾರತದ ಮುಖ್ಯ ನ್ಯಾಯಮೂರ್ತಿಯಾಗಲಿದ್ದಾರೆ.
ಯುಕ್ರೇನ್-ರಷ್ಯಾ ಯುದ್ಧದಲ್ಲಿ ಭಾರತೀಯ ಸೈನಿಕರನ್ನು ಶಾಂತಿ ಕಾರ್ಯಾಚರಣೆಗಾಗಿ ಕಳುಹಿಸುವ ಉಪರಾಷ್ಟ್ರಪತಿ ಜೆ.ಡಿ. ವ್ಯಾನ್ಸ್ ಅವರ ಪ್ರಸ್ತಾವನೆ : Indian Peace Keeping for Ukraine
ಕಳೆದ 24 ಗಂಟೆಗಳಲ್ಲಿ ಲವ್ ಜಿಹಾದ್ನ 4 ಮತ್ತು ಮತಾಂತರದ 2 ಘಟನೆಗಳು ಬೆಳಕಿಗೆ! : Love Jihad
ಸಿಂಧೂ ನದಿ ನೀರು ಹಂಚಿಕೆ ಒಪ್ಪಂದದ ವಿಚಾರದಲ್ಲಿ ಪಾಕಿಸ್ತಾನದಿಂದ ಕಾಶ್ಮೀರ ಗಡಿಯಲ್ಲಿ 35 ಡ್ರೋನ್ ವಿರೋಧಿ ಘಟಕಗಳ ನಿಯೋಜನೆ! : Indus Water Treaty Crisis
‘ಮಾನವಾಧಿಕಾರ ಉಲ್ಲಂಘನೆಯಾದರೆ ಭಾರತದ ಮೇಲೆ ಟೀಕಿಸಲು ಹಿಂಜರಿಯುವುದಿಲ್ಲ!'(ವಂತೆ) : US Lawmakers
೬೦೦ ಮಿಲಿಯನ್ ಲೀಟರ್ ಕೊಳಚೆ ನೀರನ್ನು ನೇರವಾಗಿ ನದಿಗೆ ಬಿಡುತ್ತಿರುವುದರಿಂದ ಪುಣೆ ನಗರದ ನದಿಗಳು ಮಾಲಿನ್ಯದ ಸುಳಿಗೆ!