ಪ್ರಸಾರಮಾಧ್ಯಮಗಳು ರಕ್ಷಣಾ ಪಡೆಯ ಕಾರ್ಯಾಚರಣೆಯ ನೇರ ಪ್ರಸಾರ ಮಾಡಬಾರದು

ಕೇಂದ್ರ ಸರಕಾರದಿಂದ ಪ್ರಸಾರಮಾಧ್ಯಮಗಳಿಗೆ ಸಲಹೆ

ನವದೆಹಲಿ – ಕೇಂದ್ರ ಸರಕಾರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ದೇಶದ ಸುದ್ದಿ ವಾಹಿನಿಗಳಿಗೆ ಭಾರತೀಯ ಸೇನೆಯ ಕಾರ್ಯಾಚರಣೆಗಳು ಮತ್ತು ಭದ್ರತಾ ಪಡೆಗಳ ಚಲನವಲನಗಳ ನೇರ ಪ್ರಸಾರವನ್ನು ತಪ್ಪಿಸುವಂತೆ ಸಲಹೆ ನೀಡಿದೆ. ಇಂತಹ ವರದಿಗಾರಿಕೆಯು ಅಜಾಗರೂಕತೆಯಿಂದ ಶತ್ರುಗಳಿಗೆ ಸಹಾಯ ಮಾಡಬಹುದು ಎಂದು ಸರಕಾರ ಹೇಳಿದೆ.

ಸಚಿವಾಲಯವು ಹೊರಡಿಸಿದ ಸೂಚನೆಗಳಲ್ಲಿ, ರಾಷ್ಟ್ರೀಯ ಭದ್ರತೆಯ ಹಿತದೃಷ್ಟಿಯಿಂದ ಎಲ್ಲಾ ಪ್ರಸಾರ ಮಾಧ್ಯಮಗಳು, ಸುದ್ದಿ ಸಂಸ್ಥೆಗಳು ಮತ್ತು ಸಾಮಾಜಿಕ ಮಾಧ್ಯಮಗಳನ್ನು ಬಳಸುವವರು ರಕ್ಷಣೆ ಮತ್ತು ಇತರ ಭದ್ರತೆಗೆ ಸಂಬಂಧಿಸಿದ ಘಟನೆಗಳ ಬಗ್ಗೆ ವರದಿ ಮಾಡುವಾಗ ಅತ್ಯಂತ ಜವಾಬ್ದಾರಿಯಿಂದ ವರ್ತಿಸಬೇಕು ಎಂದು ಹೇಳಲಾಗಿದೆ. ಇದರೊಂದಿಗೆ ಅಸ್ತಿತ್ವದಲ್ಲಿರುವ ಕಾನೂನು ಮತ್ತು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.

ಸಂಪಾದಕೀಯ ನಿಲುವು

ಈ ರೀತಿಯ ಇಂತಹ ಸಲಹೆಯನ್ನು ಏಕೆ ನೀಡಬೇಕಾಗುತ್ತದೆ? ಪ್ರಸಾರ ಮಾಧ್ಯಮಗಳಿಗೆ ತಮ್ಮ ಜವಾಬ್ದಾರಿ ಹೇಗೆ ತಿಳಿಯುವುದಿಲ್ಲ? ಒಂದು ವೇಳೆ ಯಾರಾದರೂ ಇದನ್ನು ಉಲ್ಲಂಘಿಸಿದರೆ, ಅವರನ್ನು ನಿಷೇಧಿಸಬೇಕು ಮತ್ತು ದೇಶದ್ರೋಹದ ಪ್ರಕರಣ ದಾಖಲಿಸಬೇಕು!