
ಇಸ್ಲಾಮಾಬಾದ (ಪಾಕಿಸ್ತಾನ) – ನೀವು ನಿಮ್ಮ ಮಕ್ಕಳಿಗೆ ಪಾಕಿಸ್ತಾನದ ಕಥೆಯನ್ನು ಹೇಳಬೇಕು. ನಮ್ಮ ಪೂರ್ವಜರಿಗೆ, ನಾವು ಹಿಂದೂಗಳಿಗಿಂತ ಭಿನ್ನವಾಗಿದ್ದೇವೆಂದು ಅನಿಸುತ್ತಿತ್ತು. ನಮ್ಮ ಆಲೋಚನೆಗಳು, ನಮ್ಮ ಮಹತ್ವಾಕಾಂಕ್ಷೆಗಳು ವಿಭಿನ್ನವಾಗಿವೆ; ಅದಕ್ಕಾಗಿಯೇ ನಾವು ಒಂದು ದೇಶವಲ್ಲ, 2 ದೇಶಗಳು. ನಮ್ಮ ಪೂರ್ವಜರು ಈ ದೇಶಕ್ಕಾಗಿ ಬಲಿದಾನ ನೀಡಿದ್ದಾರೆ. ಅದನ್ನು ಹೇಗೆ ರಕ್ಷಿಸಬೇಕು ಎಂದು ನಮಗೆ ತಿಳಿದಿದೆ, ಎಂದು ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಅಸೀಮ ಮುನೀರ್ ಇಲ್ಲಿ ಮಾರ್ಗದರ್ಶನ ನೀಡಿದರು. ಅವರು ಮೊದಲ ವಿದೇಶಿ ಪಾಕಿಸ್ತಾನಿಗಳ ಸಮ್ಮೇಳನದಲ್ಲಿ ಮಾತನಾಡುತ್ತಿದ್ದರು. ಈ ಸಮ್ಮೇಳನದಲ್ಲಿ ಪಾಕಿಸ್ತಾನದ ಪ್ರಧಾನಿ ಶೆಹಬಾಜ ಶರೀಫ್ ಸೇರಿದಂತೆ ಅನೇಕ ಹಿರಿಯ ನಾಯಕರು ಉಪಸ್ಥಿತರಿದ್ದರು.
ಸೇನಾ ಮುಖ್ಯಸ್ಥ ಜನರಲ್ ಅಸೀಮ್ ಮುನೀರ್ ಅವರು ಕಾಶ್ಮೀರವನ್ನು ‘ಪಾಕಿಸ್ತಾನದ ಕುತ್ತಿಗೆಯ ನರ’ ಎಂದು ಬಣ್ಣಿಸಿದರು. ‘ಯಾರಿಂದಲೂ ಕಾಶ್ಮೀರವನ್ನು ಪಾಕಿಸ್ತಾನದಿಂದ ಬೇರ್ಪಡಿಸಲು ಸಾಧ್ಯವಿಲ್ಲ’ ಎಂದು ಅವರು ಪ್ರತಿಪಾದಿಸಿದರು. ಇದರ ಹೊರತಾಗಿ ಗಾಜಾ ಪಟ್ಟಿಯನ್ನು ‘ಪಾಕಿಸ್ತಾನಿ ಜನರ ಹೃದಯ’ ಎಂದು ಅವರು ವರ್ಣಿಸಿದರು.
ಸೇನಾ ಮುಖ್ಯಸ್ಥ ಜನರಲ್ ಅಸೀಮ ಮುನೀರ್ ಅವರ ಹೇಳಿಕೆಗಳು
1. ಪಾಕಿಸ್ತಾನದ ಅಡಿಪಾಯ ‘ಕಲ್ಮಾ’ದ (ಇಸ್ಲಾಂನ ಮೂಲಭೂತ ತತ್ವದ) ಮೇಲಿದೆ. ನಾವು ಪ್ರತಿಯೊಂದು ವಿಷಯದಲ್ಲೂ ಹಿಂದೂಗಳಿಗಿಂತ ಭಿನ್ನವಾಗಿದ್ದೇವೆ. ನಮ್ಮ ಧರ್ಮ, ಆಚಾರ ವಿಚಾರಗಳು, ಸಂಸ್ಕೃತಿ, ಸಿದ್ಧಾಂತ ಇತ್ಯಾದಿ ಎಲ್ಲವೂ ಭಿನ್ನವಾಗಿದೆ. ಇದು ದ್ವಿ-ರಾಷ್ಟ್ರ ಸಿದ್ಧಾಂತದ ಅಡಿಪಾಯವಾಗಿತ್ತು.
2. ಇಲ್ಲಿಯವರೆಗೆ ಕೇವಲ 2 ಸಂಸ್ಥಾನಗಳ ಅಡಿಪಾಯವನ್ನು ಲೇಖನಿಯಿಂದ ರಚಿಸಲಾಗಿತ್ತು. ಮೊದಲನೆಯದು ‘ರಿಯಾಸತ್-ಎ-ತೈಯಬಾ’, ಏಕೆಂದರೆ ತೈಯಬಾ ಹೆಸರನ್ನು ಮಹಮ್ಮದ ಪೈಗಂಬರ್ ಅವರು ಇಟ್ಟಿದ್ದರು. ಇಂದು ಅದನ್ನು ‘ಮದೀನಾ’ ಎಂದು ಕರೆಯುತ್ತಾರೆ, ಮತ್ತು 1 ಸಾವಿರದ 300 ವರ್ಷಗಳ ನಂತರ ಅಲ್ಲಾ ಎರಡನೇ ರಾಜ್ಯವಾದ ಪಾಕಿಸ್ತಾನವನ್ನು ನಿರ್ಮಿಸಿದನು.
3. ಭಯೋತ್ಪಾದಕರ 10 ತಲೆಮಾರುಗಳು ಸಹ ಬಲೂಚಿಸ್ತಾನ ಅಥವಾ ಪಾಕಿಸ್ತಾನವನ್ನು ಬೇರ್ಪಡಿಸಲು ಸಾಧ್ಯವಿಲ್ಲ. ಭಾರತೀಯ ಸೈನ್ಯದ 13 ಲಕ್ಷ ಸೈನಿಕರು ನಮ್ಮನ್ನು ಬೆಚ್ಚಿಬೀಳಿಸಲು ಸಾಧ್ಯವಾಗದಿರುವಾಗ, ಈ ಭಯೋತ್ಪಾದಕರು ನಮ್ಮ ನಿರ್ಧಾರವನ್ನು ಹೇಗೆ ಮುರಿಯಲು ಸಾಧ್ಯ? ಎಂದು ಬಲೂಚಿಸ್ತಾನದಲ್ಲಿ ನಡೆಯುತ್ತಿರುವ ಬಲೂಚ್ ಲಿಬರೇಶನ್ ಆರ್ಮಿಯ ದಾಳಿಗಳ ಬಗ್ಗೆ ಅವರು ಪ್ರತಿಪಾದಿಸಿದರು.
“Two nations were created because Muslims are different from Hindus!” – Gen. Asim Munir, Pak Army Chief on Two-Nation Theory
⚔️ Centuries of forced conversions turned Hindus into radical Muslims, who now target the remaining Hindus in Pakistan & Bangladesh!
🇵🇰 was for Muslims,… pic.twitter.com/eXvPPAXzaj
— Sanatan Prabhat (@SanatanPrabhat) April 17, 2025
ಮುನೀರ ಅವರು ಎರಡೂ ದೇಶಗಳ ಸೈದ್ಧಾಂತಿಕ ಅಂತರವನ್ನು ಸ್ಪಷ್ಟಪಡಿಸಿದರು! – ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ ಅವರು ಜನರಲ್ ಮುನೀರ ಅವರ ಹೇಳಿಕೆಯನ್ನು ಟೀಕಿಸುತ್ತಾ, ಪಾಕಿಸ್ತಾನದ ಸೇನಾ ಮುಖ್ಯಸ್ಥರೇ ಎರಡೂ ದೇಶಗಳ ನಡುವಿನ ಸೈದ್ಧಾಂತಿಕ ಅಂತರವನ್ನು ಇಷ್ಟು ಸ್ಪಷ್ಟವಾಗಿ ಹೇಳುತ್ತಿರುವಾಗ, ಭಾರತವು ಇನ್ನು ಮುಂದೆ ಯಾವುದೇ ‘ಸಹೋದರತ್ವ’ವನ್ನು ನಿರೀಕ್ಷಿಸಬಾರದು ಎಂದು ಹೇಳಿದರು. ನಾವು ಸಹ ನಮ್ಮ ಧರ್ಮ, ನಾಗರಿಕತೆ ಮತ್ತು ಶಕ್ತಿಯ ಬಗ್ಗೆ ಹೆಮ್ಮೆ ಪಡಬೇಕು, ಇದರಿಂದ ಯಾರೂ ಭಾರತದ ಕಡೆಗೆ ಕೆಟ್ಟ ದೃಷ್ಟಿಯಿಂದ ನೋಡಲು ಸಾಧ್ಯವಾಗುವುದಿಲ್ಲ, ಎಂದು ಹೇಳಿದರು.
ಸಂಪಾದಕೀಯ ನಿಲುವು
|