೧೯೨೧ ರಲ್ಲಿ ನಡೆದಿರುವ ಮೋಪಲಾ ಗಲಭೆಗೆ ಮೊದಲನೆಯ ಮಹಾಯುದ್ಧದಿಂದ ನಂಟಿದೆ. ಈ ಗಲಭೆಯಲ್ಲಿ ಸರಕಾರಿ ಸಿಬ್ಬಂದಿಗಳು, ಪೋಲಿಸರು ಮತ್ತು ಅಂದಿನ ಬ್ರಿಟಿಷ ಸೈನಿಕರ ಮೇಲೆ ದಾಳಿ ಮಾಡಲಾಗಿತ್ತು ಮತ್ತು ದೊಡ್ಡ ಪ್ರಮಾಣದಲ್ಲಿ ಹಿಂದೂಗಳ ನರಮೇಧ ಮಾಡಲಾಗಿತ್ತು. ಈ ಗಲಭೆ ಸುಮಾರು ೬ ತಿಂಗಳು ನಡೆಯಿತು. ಮತಾಂಧ ಜಿಹಾದಿಗಳು ‘ಇದು ನಮ್ಮ ಚಳುವಳಿಯಾಗಿದ್ದು ಇದು ನಮ್ಮ ವಿಜಯವಾಗಿದೆ’ ಎಂದು ಘೋಷಿಸಿದರು. ಆದರೆ ಇದು ಚಳುವಳಿಯಾಗಿರಲಿಲ್ಲ, ಇದು ‘ಹಿಂದೂಗಳ ನರಮೇಧವಾಗಿತ್ತು’. ಮೋಪಲಾ ಗಲಭೆಯಲ್ಲಿ ಮತಾಂಧರು ಹಿಂದೂಗಳ ಮೇಲೆ ದೌರ್ಜನ್ಯವೆಸಗಿದರು. ಆದರೆ ‘ಹಿಂದೂ-ಮುಸಲ್ಮಾನ ಏಕತೆ’ಗಾಗಿ ಹಿಂದೂಗಳು ಈ ದೌರ್ಜನ್ಯವನ್ನು ಸಹಿಸಬೇಕು’, ಈ ರೀತಿಯ ಅನೇಕ ಆಘಾತಕಾರಿ ಹೇಳಿಕೆಗಳನ್ನು ಮೋಹನದಾಸ ಗಾಂಧಿ ಇವರು ನೀಡಿದ್ದರು. ಮೊಪಲಾ ಗಲಭೆಯು ‘ಜಿಹಾದ್’ನ ಒಂದು ಭಾಗವಾಗಿತ್ತು. ಅಷ್ಟೇ ಅಲ್ಲದೇ ಗಲಭೆಕೋರರು ಸಹ ಇದು ‘ಜಿಹಾದ್’ ಇದೆ ಎಂದು ಒಪ್ಪಿದ್ದರು.’