ಪ್ರಯಾಗರಾಜ್ ಕುಂಭಮೇಳ 2025

ಪ್ರಯಾಗರಾಜ್, ಜನವರಿ 29 (ಸುದ್ದಿ) – ಸನಾತನ ಸಂಸ್ಥೆಯು ಮಹಾಕುಂಭ ಪ್ರಯಾಗರಾಜ್ನಲ್ಲಿ ಧರ್ಮ ಪ್ರಚಾರಕ್ಕಾಗಿ ಅತ್ಯಂತ ಮುಖ್ಯವಾದ ಗ್ರಂಥ ಪ್ರದರ್ಶನವನ್ನು ಆಯೋಜಿಸಿದೆ. ಪೂಜೆ ಮಾಡುವ ಪದ್ದತಿ ಏನು ? ಕುಂಭ ಕ್ಷೇತ್ರದಲ್ಲಿ ಸ್ನಾನ ಮಾಡುವುದು ಹೇಗೆ? ಅದರ ಮಹತ್ವವೇನು? ಮನೆಯಲ್ಲಿ ದೇವರ ಮನೆ ಎಲ್ಲಿ ಇರಬೇಕು? ಈ ಬಗ್ಗೆ ಮಾಹಿತಿ ನೀಡುವ ಗ್ರಂಥ ಪ್ರದರ್ಶನವಿದೆ. ಈ ಪ್ರದರ್ಶನವನ್ನು ನೋಡಲು ಸಾವಿರಾರು ಭಕ್ತರು ಪವಿತ್ರ ಸ್ನಾನ ಮಾಡಲು ಬರುತ್ತಿದ್ದಾರೆ. ಸನಾತನದ ಗ್ರಂಥಗಳ ಪ್ರದರ್ಶನವನ್ನು ಖಂಡಿತ ನೋಡಬೇಕೆಂದು ಭಕ್ತರಲ್ಲಿ ನಾನು ಮನವಿ ಮಾಡುತ್ತೇನೆ. ಇಲ್ಲಿ ನೀವು ಧಾರ್ಮಿಕ ಜ್ಞಾನ ಮತ್ತು ಸಾಧನೆಯ ಕುರಿತು ಮಾರ್ಗದರ್ಶನ ಪಡೆಯುತ್ತೀರಿ. ಇದು ನಮ್ಮ ಜೀವನಕ್ಕೆ ಹೊಸ ದಿಕ್ಕನ್ನು ನೀಡುತ್ತದೆ ಮತ್ತು ನಮ್ಮ ಜೀವನವನ್ನು ಪರಿವರ್ತಿಸುತ್ತದೆ ಎಂದು ಭಾಗ್ಯನಗರ (ಹೈದರಾಬಾದ್) ಭಾಜಪ ಶಾಸಕ ಶ್ರೀ. ಟಿ. ರಾಜಾಸಿಂಗ್ ಇವರು ಹೇಳಿದರು.
ಕುಂಭ ಕ್ಷೇತ್ರಿ ಸೆಕ್ಟರ್ 19 ರಲ್ಲಿ ನಡೆದ ಸನಾತನದ ಗ್ರಂಥಗಳು ಮತ್ತು ಧರ್ಮ ಶಿಕ್ಷಣಗಳ ಪ್ರದರ್ಶನದಲ್ಲಿ ಶ್ರೀ. ಟಿ. ರಾಜಾಸಿಂಗ್ ಇವರು ಜನವರಿ 27 ರಂದು ಭೇಟಿ ನೀಡಿ ಪರಿಶೀಲಿಸಿದರು. ಆ ಸಮಯದಲ್ಲಿ ಅವರು ಮಾತನಾಡುತ್ತಿದ್ದರು. ಈ ಸಮಯದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕ
ಸದ್ಗುರು ಡಾ. ಚಾರುದತ್ತ ಪಿಂಗಳೆ ಅವರ ವಂದನೀಯ ಉಪಸ್ಥಿತಿ ಇತ್ತು. ಸನಾತನ ಸಂಸ್ಥೆಯ ರಾಷ್ಟ್ರೀಯ ವಕ್ತಾರ ಶ್ರೀ. ಚೇತನ ರಾಜಹಂಸರು ಶ್ರೀ. ಟಿ. ರಾಜಾಸಿಂಗ್ ಅವರಿಗೆ ಪ್ರದರ್ಶನದ ಬಗ್ಗೆ ಮಾಹಿತಿ ನೀಡಿ ಇತರ ವಿಷಯಗಳ ಕುರಿತು ಅವರೊಂದಿಗೆ ಸಂವಾದ ನಡೆಸಿದರು.
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ವಂಚನೆ ಅಥವಾ ಬ್ಲ್ಯಾಕ್ ಮೇಲ್ ಮೂಲಕ ದೈಹಿಕ ಸಂಬಂಧವಾದರೆ, ಅದನ್ನು ‘ಬಲಾತ್ಕಾರ’ ಎಂದು ಪರಿಗಣಿಸಲಾಗುವುದು! – ಮದ್ರಾಸ್ ಉಚ್ಚ ನ್ಯಾಯಾಲಯ
‘ಐ.ಆರ್.ಸಿ.ಟಿ.ಸಿ.’ಯ ಹೊಸ ಜಾಲತಾಣ ಕಾರ್ಯಾರಂಭ : ಟಿಕೆಟ್ ಕಾಯ್ದಿರಿಸುವಿಕೆ ಮತ್ತಷ್ಟು ಸುಲಭ