ಭಟ್ಕಳದಲ್ಲಿ ನಡೆದ ಹೇಯ ಕೃತ್ಯ: ಗಬ್ಬಾದ ಹಸುವನ್ನು ಕಡಿದು ಹೊಟ್ಟೆಯೊಳಗಿನ ಕರುವನ್ನು ನದಿಗೆ ಎಸೆದರು!

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಹೇಯ ಕೃತ್ಯವೊಂದು ನಡೆದಿದೆ. ಇಲ್ಲಿ ಗಬ್ಬಾದ ಹಸುವನ್ನು ನಿರ್ದಯವಾಗಿ ಕೊಂದು ಅದರ ಹೊಟ್ಟೆಯೊಳಗಿನ ಕರುವನ್ನು ನದಿಗೆ ಎಸೆಯಲಾಗಿದೆ. ಇತ್ತೀಚೆಗಷ್ಟೇ ನೆರೆಯ ಹೊನ್ನಾವರ ತಾಲೂಕಿನಲ್ಲಿ ಗಬ್ಬಾದ ಹಸುವನ್ನು ಕೊಂದು ಗೋಮಾಂಸ ಕಳವು ಮಾಡಲಾಗಿತ್ತು.

ಭಟ್ಕಳ ತಾಲೂಕಿನ ಹೆಬಳೆ ಗ್ರಾಮದ ಕುಕ್ ನೀರಬಾಳಿಯಲ್ಲಿ ಗಬ್ಬಾದ ಹಸುವನ್ನು ಕಡಿದ ಮತಾಂಧರು ಅದರ ಹೊಟ್ಟೆಯೊಳಗಿನ ಕರು ಮತ್ತು ಹಸುವಿನ ಬಾಲವನ್ನು ವೆಂಕಟಾಪುರ ನದಿಗೆ ಎಸೆದಿದ್ದಾರೆ. ಕರುವನ್ನು ಗೋಣಿಚೀಲದಲ್ಲಿ ಸುತ್ತಿ ಎಸೆಯಲಾಗಿತ್ತು. ದಡದಲ್ಲಿ ಅಲೆದಾಡುತ್ತಿದ್ದ ನಾಯಿಗಳು ಚೀಲವನ್ನು ಎಳೆಯುತ್ತಿರುವುದನ್ನು ಸ್ಥಳೀಯರು ನೋಡಿದರು. ಅವರು ನೋಡಿದಾಗ ಅದರಲ್ಲಿ ಸತ್ತ ಕರು ಇರುವುದು ಕಂಡುಬಂದಿದೆ. ಅದರೊಂದಿಗೆ ಹಸುವಿನ ಬಾಲವೂ ಸಿಕ್ಕಿದೆ. ತಕ್ಷಣ ಸ್ಥಳೀಯರು ಗ್ರಾಮೀಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಮಾಹಿತಿ ಸಂಗ್ರಹಿಸಲು ಪ್ರಾರಂಭಿಸಿದ ನಂತರ ಎಲ್ಲ ವಿಷಯವೂ ಬೆಳಕಿಗೆ ಬಂದಿದೆ. ಈ ಬಗ್ಗೆ ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.