ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದ ಹೊಸ ನಿಯಮ

ನವದೆಹಲಿ – ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (TRAI) ಹೊಸ ನಿಯಮವನ್ನು ಹೊರಡಿಸಿದೆ. ಇದರ ಅಡಿಯಲ್ಲಿ, ರೀಚಾರ್ಜ್ ಮಾಡದೆಯೇ ಸಿಮ್ ಕಾರ್ಡ್ ಅನ್ನು ಹೆಚ್ಚು ದಿನಗಳವರೆಗೆ ಸಕ್ರಿಯವಾಗಿಡಲು ವಿನಾಯಿತಿ ನೀಡಲಾಗಿದೆ. ಯಾವುದೇ ಮೊಬೈಲ್ ಫೋನ್ ಕಂಪನಿಯ ಸಿಮ್ ಕಾರ್ಡ್ ಅನ್ನು ರೀಚಾರ್ಜ್ ಮಾಡದೆಯೇ 90 ದಿನಗಳವರೆಗೆ ಸಕ್ರಿಯವಾಗಿರಿಸಿಕೊಳ್ಳಬಹುದು.
ಜಿಯೋ ಸಿಮ್ ಕಾರ್ಡ್
90 ದಿನಗಳ ನಂತರ ರಿಲಯನ್ಸ್ ಜಿಯೋ ಸಿಮ್ ಕಾರ್ಡ್ ಅನ್ನು ಮತ್ತೆ ಸಕ್ರಿಯಗೊಳಿಸಬೇಕಾಗುತ್ತದೆ. ಕೊನೆಯ ‘ರೀಚಾರ್ಜ್ ಪ್ಲಾನ್’ಯನ್ನು ಅವಲಂಬಿಸಿ ಒಳಬರುವ ಕರೆಗಳನ್ನು ಒಂದು ತಿಂಗಳು ಅಥವಾ ಕೆಲವು ವಾರಗಳವರೆಗೆ ನಿರ್ಬಂಧಿಸಬಹುದು. ಇದಾದ ನಂತರವೂ ಸಿಮ್ ಕಾರ್ಡ್ ರೀಚಾರ್ಜ್ ಆಗದಿದ್ದರೆ, ಅದು ನಿಷ್ಕ್ರಿಯಗೊಳಿಸಲಾಗುವುದು. ಅಲ್ಲದೆ, ಆ ಸಂಖ್ಯೆಯನ್ನು ಇನ್ನೊಬ್ಬ ಬಳಕೆದಾರರಿಗೆ ನೀಡಲಾಗುವುದು.
ಏರ್ಟೆಲ್ ಸಿಮ್ ಕಾರ್ಡ್
ಏರ್ಟೆಲ್ ಸಿಮ್ ಕಾರ್ಡ್ನಲ್ಲಿ 90 ದಿನಗಳ ನಂತರವೂ ಬಳಕೆದಾರರಿಗೆ ಹೆಚ್ಚುವರಿ 15 ದಿನಗಳ ರಿಯಾಯಿತಿ ಸಿಗುತ್ತದೆ. ಈ ಅವಧಿಯಲ್ಲಿ ಬಳಕೆದಾರರು ರೀಚಾರ್ಜ್ ಮಾಡುವುದು ಕಡ್ಡಾಯವಾಗಿದೆ. ಇದನ್ನು ಮಾಡದಿದ್ದರೆ, ಸಂಖ್ಯೆಯನ್ನು ಶಾಶ್ವತವಾಗಿ ನಿರ್ಬಂಧಿಸಲಾಗುತ್ತದೆ. ಅಲ್ಲದೆ, ಆ ಸಿಮ್ ಅನ್ನು ಬೇರೆಯವರಿಗೆ ನೀಡಲಾಗುತ್ತದೆ.
ವೊಡಾಫೋನ್-ಐಡಿಯಾ ಸಿಮ್ ಕಾರ್ಡ್
ವೊಡಾಫೋನ್-ಐಡಿಯಾ ಸಿಮ್ ಕಾರ್ಡ್ ಅನ್ನು 90 ದಿನಗಳ ನಂತರವೂ ಸಕ್ರಿಯವಾಗಿಡಲು ಬಯಸಿದರೆ, ನೀವು ಕನಿಷ್ಠ 49 ರೂಪಾಯಿಗಳ ರೀಚಾರ್ಜ್ ಮಾಡಬೇಕಾಗುತ್ತದೆ.
ಭಾರತ ಸಂಚಾರ ನಿಗಮ ಲಿಮಿಟೆಡ (BSNL) ಸಿಮ್ ಕಾರ್ಡ್ ಮಾನ್ಯತೆ ನಿಯಮಗಳು
ಬಿಎಸ್ಎನ್ಎಲ್ ಸಿಮ್ ಕಾರ್ಡ್ಗಳನ್ನು ರೀಚಾರ್ಜ್ ಮಾಡದೆಯೇ ಹೆಚ್ಚು ದಿನಗಳವರೆಗೆ ಸಕ್ರಿಯವಾಗಿರಿಸಿಕೊಳ್ಳಬಹುದು. ಇದು ರೀಚಾರ್ಜ್ ಮಾಡದೆಯೇ ಅಂದಾಜು 180 ದಿನಗಳವರೆಗೆ ಸಕ್ರಿಯವಾಗಿರುತ್ತದೆ. ಆಗಾಗ್ಗೆ ರೀಚಾರ್ಜ್ ಮಾಡುವುದನ್ನು ತಪ್ಪಿಸಲು ಬಯಸುವವರಿಗೆ ಈ ದೀರ್ಘಾವಧಿಯ ಯೋಜನೆ ಉತ್ತಮ ಆಯ್ಕೆಯಾಗಿದೆ.
20 ರೂಪಾಯಿಗೆ 30 ದಿನಗಳ ಪ್ಲಾನ್
ಒಂದು ಸಿಮ್ 90 ದಿನಗಳವರೆಗೆ ಸಕ್ರಿಯವಾಗಿದ್ದರೆ ಮತ್ತು ಅದರಲ್ಲಿ 20 ರೂಪಾಯಿ ಉಳಿದಿದ್ದರೆ, ಆ ಸಿಮ್ ಕಾರ್ಡ್ ಮುಂದಿನ 30 ದಿನಗಳವರೆಗೆ ನಿಷ್ಕ್ರಿಯಗೊಳ್ಳುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ನೀವು ಸಿಮ್ ಕಾರ್ಡ್ ಅನ್ನು 120 ದಿನಗಳವರೆಗೆ ಬಳಸಲು ಸಾಧ್ಯವಾಗುತ್ತದೆ.
ಗಲ್ಲಿಗೇರಿಸಬಹುದು, ಎಂಬುದು ತಿಳಿದಿದ್ದರೂ ನಾನು ಬಾಂಗ್ಲಾದೇಶಕ್ಕೆ ಹಿಂದಿರುಗುತ್ತೇನೆ! – ಮಾಜಿ ಪ್ರಧಾನಿ ಶೇಖ ಹಸೀನಾ, ಬಾಂಗ್ಲಾದೇಶ
ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳಿಗಾಗಿ ತ್ವರಿತ ಗತಿ ನ್ಯಾಯಾಲಯಗಳ ಸ್ಥಾಪನೆ ! : Establishment of Fast Track Courts
ಪುರಾತತ್ವ ಇಲಾಖೆಯ ಅಧಿಕಾರಿಗಳ ವಿರುದ್ಧ ಕೇಸ್ ದಾಖಲಿಸಲು ಒತ್ತಾಯ : Case Against Archaeology Dept
ಇಬ್ಬರು ಜಿಹಾದಿ ಭಯೋತ್ಪಾದಕರ ಮನೆಗಳ ಮೇಲೆ ಬುಲ್ಡೋಜರ್ ಕಾರ್ಯಾಚರಣೆ : Bulldozer Operation
೯ ಸಂತರ ಧಾರ್ಮಿಕ ಸಮಿತಿ ಸ್ಥಾಪನೆ ಪ.ಪೂ. ಸ್ವಾಮಿ ಗೋವಿಂದದೇವ ಗಿರಿ ಅವರಿಗೆ ಅಧ್ಯಕ್ಷತೆ : Swami Govindadev Giri
ರಾಮಮಂದಿರ ದೇಣಿಗೆ ಕಳ್ಳತನ; ನೈತಿಕ ಅಧಃಪತನದ ಪರಾಕಾಷ್ಠೆ: ಹೈಕೋರ್ಟ್ : Allahabad HC on Ram Mandir