
ಮುಂಬಯಿ – ವೀರಶೈವ ಲಿಂಗಾಯತರು ಹಿಂದೂಗಳೇ ಆಗಿದ್ದಾರೆ. ಅವರಿಗೆ ಸರಕಾರ ಸ್ವತಂತ್ರ ‘ಧರ್ಮ’ವೆಂದು ಮನ್ನಣೆ ನೀಡಬಾರದು ಎಂದು ‘ಅಖಿಲ ವೀರಶೈವ ಲಿಂಗಾಯತ ಮಹಾಸಂಘ’ದ ರಾಷ್ಟ್ರೀಯ ಕಾರ್ಯಾಧ್ಯಕ್ಷ ಡಾ. ವಿಜಯ ಜಂಗಮ ಇವರು ಕರೆ ನೀಡಿದ್ದಾರೆ. ವಿಧಾನಸಭೆಯ ಚುನಾವಣೆಯ ಹಿನ್ನೆಲೆಯಲ್ಲಿ ಡಾ. ವಿಜಯ ಜಂಗಮ ಅವರು ಲಿಂಗಾಯತ ಸಮಾಜದ ವಿವಿಧ ಬೇಡಿಕೆಗಳ ಕುರಿತು ಕರಪತ್ರಗಳನ್ನು ಪ್ರಕಟಿಸಿದ್ದಾರೆ. ಅದರಲ್ಲಿ ಅವರು ಈ ಮನವಿಯನ್ನು ಮಾಡಿದ್ದಾರೆ.

ಕರಪತ್ರದಲ್ಲಿ ಡಾ. ವಿಜಯ ಜಂಗಮ ಇವರು, ವೀರಶೈವ ಲಿಂಗಾಯತ ಸಮುದಾಯದಲ್ಲಿನ ಇತರೆ ಹಿಂದುಳಿದ ಪ್ರವರ್ಗದಲ್ಲಿ ಹಾಗೆಯೇ ಇತರೆ ಪ್ರವರ್ಗದ ಮೀಸಲಾತಿಯ ವಿಷಯದ ಕುರಿತು ಸರಕಾರ ತನ್ನ ನಿರ್ಣಯ ತಿಳಿಸಬೇಕು. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಯಾವ ರಾಜಕೀಯ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಸ್ಪಷ್ಟವಾಗಿ ವೀರಶೈವ ಲಿಂಗಾಯತ ಸಮುದಾಯದ ಅಡಚಣೆಯನ್ನು ದೂರಗೊಳಿಸುವುದಾಗಿ ಭರವಸೆ ನೀಡುವುದೋ, ಆ ಪಕ್ಷದ ಮುಖಂಡರೊಂದಿಗೆ ಚರ್ಚಿಸಿ ಸಮುದಾಯವು ಅವರಿಗೆ ಮತ ನೀಡುವಂತೆ ಮನವಿ ಮಾಡಲಾಗುವುದು. ಮಹಾಸಂಘದ ಯಾವುದೇ ಪದಾಧಿಕಾರಿ ಅಥವಾ ಕಾರ್ಯಕರ್ತರು ಸಮುದಾಯವನ್ನು ಗ್ರಹಿಸಿ ಯಾವುದೇ ರಾಜಕೀಯ ಪಕ್ಷದೊಂದಿಗೆ ಕೈಜೋಡಿಸಿ ಮತದಾನದ ವ್ಯವಹಾರ ಮಾಡುತ್ತಾರೆಯೋ, ಅವರನ್ನು ತಕ್ಷಣವೇ ಮಹಾಸಂಘದಿಂದ ಅಮಾನತುಗೊಳಿಸಲಾಗುವುದು. ನಾವು ಯಾವುದೇ ರಾಜಕೀಯ ಪಕ್ಷಕ್ಕೆ ನೇರ ಬೆಂಬಲವನ್ನು ನೀಡುವುದಿಲ್ಲ. ಸಮುದಾಯವನ್ನು ಗ್ರಹಿಸಿ ಒಂದು ವೋಟ ಬ್ಯಾಂಕ ನಾವು ಸಹಿಸುವುದಿಲ್ಲ ಎಂದು ಹೇಳಿದರು.
ಕೊಲೆ ಪ್ರಕರಣವನ್ನು ವಿರೋಧಿಸಿದವರ ವಿರುದ್ಧ ದಾಖಲಾಗಿದ್ದ ಪ್ರಕರಣಕ್ಕೆ ಕರ್ನಾಟಕ ಉಚ್ಚ ನ್ಯಾಯಾಲಯದಿಂದ ತಡೆಯಾಜ್ಞೆ!
‘ನ್ಯಾಯಾಲಯವನ್ನು ಇದರಲ್ಲಿ ಎಳೆಯಬೇಡಿ’, ಎಂದು ಹೇಳುತ್ತ ತಕ್ಷಣದ ವಿಚಾರಣೆಗೆ ನ್ಯಾಯಾಲಯದ ನಿರಾಕರಣೆ
ಪ್ರಧಾನಿ ಮೋದಿ ಅವರ ನಿವಾಸದ ಹೊರಗೆ ಕಾಂಗ್ರೆಸ್ ಆಂದೋಲನ : Delhi Congress Protest
ನೌಕೆಯನ್ನು ವಶಕ್ಕೆ ತೆಗೆದುಕೊಂಡು ನಾವಿಕರನ್ನು ಒತ್ತೆಯಾಳಾಗಿರಿಸಿದ್ದ ಸೊಮಾಲಿಯಾದ 44 ನಾಗರಿಕರಿಗೆ ಜೀವಾವಧಿ ಶಿಕ್ಷೆ! : Somalians Get Life Imprisonment
‘ಕಾಕ್ರೋಚ್ ಜನತಾ ಪಾರ್ಟಿ’ಯ ಪ್ರತಿಭಟನಾಕಾರರು ನಡೆಸಿದ ಕಲ್ಲು ತೂರಾಟದಲ್ಲಿ ಪೊಲೀಸರು ಗಾಯಗೊಂಡಿಲ್ಲವಂತೆ! : Mohammed Zubair AltNews
ಬುಲ್ಡೋಜರ್ ಕ್ರಮಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್ನ ವಿಭಜಿತ ತೀರ್ಪು! : Allahabad HC